Home / ಕಥೆ / ಕಿರು ಕಥೆ / ನನ್ನದೆ ತಪ್ಪು

ನನ್ನದೆ ತಪ್ಪು

ಕುಂದಾಪುರ ಶಿವಮೊಗ್ಗ ರಸ್ತೆಯಲ್ಲಿ ನನ್ನ ಕನ್ನಡಕದ ಅಂಗಡಿ ತೆರೆದಿದ್ದೆ. ಅಲ್ಲಿಗೆ ಸಿದ್ದಾಪುರ, ಶಂಕರನಾರಾಯಣ, ಇತರ ಹತ್ತಾರು ಹಳ್ಳಿಗಳಿಂದ ನನ್ನ ಕನ್ನಡಕದ ಅಂಗಡಿಗೆ ನಿತ್ಯವೂ ನೂರಾರು ಗಿರಾಕಿ ಬರುತ್ತಿದ್ದರು. ಕನ್ನಡಕದ ಅಂಗಡಿ ಪಕ್ಕದಲ್ಲೇ ಸಣ್ಣದೊಂದು ಕಣ್ಣಿನ ಪರೀಕ್ಷೆಗೆ ಒಂದು ಕ್ಲಿನಿಕ್ ಸಹ ಹಾಕಿಕೊಂಡಿದ್ದೆ.

ದೇಶ ವಿದೇಶಗಳ ಹೊಸ ಮಾದರಿಯ ಕನ್ನಡಕದ ಜೊತೆಯಲ್ಲಿ ಕೂಲಿಂಗ್ ಗ್ಲಾಸ್‌ಗಳು ಕಡಿಮೆಯ ದರದಲ್ಲಿ ಕನ್ನಡಕ ದೊರೆಯುವ ಏಕಮೇವ ಅಂಗಡಿ ನನ್ನದಾಗಿತ್ತು.

“ಸೀಮಾ” ಕನ್ನಡಕದ ಅಂಗಡಿ ಎನ್ನುವುದು ನನ್ನ ಅಂಗಡಿಯ ಹೆಸರಾಗಿತ್ತು. ನನ್ನ ಮಲೆನಾಡು ಭಾಗದ ಆಗುಂಬೆಸೀಮೆಯವನಾಗಿದ್ದೆ. ನಾನು ಕಾಲೇಜು ವಿಧ್ಯಾಭ್ಯಾಸವೆಲ್ಲ ಶಿವಮೊಗ್ಗದಲ್ಲಿ ಮಗಿಸಿದ್ದೆ. ನಂತರ ಅಲ್ಲಿ ಇಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿದರೂ ಉದ್ಯೋಗ ಸಿಗದೆ ಈ ಕಣ್ಣು ಪರೀಕ್ಷೆ ಶಾಪಿನ ಜೊತೆಯಲ್ಲಿ ಕನ್ನಡಕದ ಅಂಗಡಿ ತೆರೆದೆ. ನನ್ನ ಈ ಸೀಮಾತೀತವಾದ ಸಾಧನೆಗಾಗಿ ನನ್ನ ಅಂಗಡಿಗೆ ನಾನೇ ನಾಮಕರಣ ಮಾಡಿದ್ದು “ಸೀಮಾ”.

ಅದೊಂದು ಮಧ್ಯಾಹ್ನ ಸಮಯಕ್ಕೆ ನಾನು ಊಟ ಮುಗಿಸಿ ಕುಳಿತಾಗ ಸುಮಾರು ನಲವತ್ತರ ಪ್ರಾಯದ ಹೆಂಗಸೊಬ್ಬರು ಅಂಗಡಿಗೆ ಬಂದರು.

– “ಏನಮ್ಮ? ಏನಾಗಬೇಕಿತ್ತು?”

“ಸಾರ್ ನನಗೆ ಕನ್ನಡಲ ಬೇಕಾಗಿತ್ತು, ನಾನು ದೂರ ಹಳ್ಳಿಯಿಂದ ಬಂದಿರುವೆ?”

“ಹೊಸನಗರ ತಾಲ್ಲೂಕಿನ ಮೇಲುಸುಂಕ ಎಂಬ ಹಳ್ಳಿಯಿಂದ ಬಂದಿರುವೆ. ಅಲ್ಲಿಂದ ಹತ್ತಾರು ಮೈಲಿ ನಡೆದುಕೊಂಡು ಬಂದು ನಂತರ ಬಸ್ಸಿನಲ್ಲಿ ಬಂದಿರುವೆ”

“ಸರಿ ನಿಮ್ಮ ಸಮಸ್ಯೆ ಹೇಳು”

“ನೀವು ಕೊಡುವ ಕನ್ನಡಕ ಹಾಕಿಕೊಂಡರೆ ಸರಿಯಾಗಿ ಓದಬಹುದಂತೆ ಹೌದ”

ನಾನು ನಗುತ್ತಾ ಉತ್ತರಿಸಿದೆ

– “ಹೌದಮ್ಮ”

“ಸ್ವಾಮಿ ಹಾಗಾದರೆ ನನಗೂ ಒಂದು ಒಳ್ಳೆಯ ಕನ್ನಡಕ ಕೊಡಿ”.

ನಾನು ಅವಳನ್ನು ನನ್ನ ಶಾಪಿನೊಳಗೆ ಕರೆದುಕೊಂಡು ಹೋಗಿ ಅವಳಿಗೆ ನೂರಾರು ಕನ್ನಡಕ ಕೊಟ್ಟು ಅವಳನ್ನು ಪರೀಕ್ಷೆ ಮಾಡಿದೆ. ಎಷ್ಟು ರೀತಿಯ ಕನ್ನಡಕ ಕೊಟ್ಟರು ಅವಳಿಗೆ ಎದುರುಗಡೆ ಇಟ್ಟ ಬೋರ್ಡಿನಲ್ಲಿ ಇರುವ ಅಕ್ಷರ ಒಂದೇ ಒಂದನ್ನು ಓದಲಾಗಲಿಲ್ಲ.

ಕೊನೆ ಪ್ರಯತ್ನವೆಂಬಂತೆ ಉಳಿದ ಒಂದೇ ಒಂದು ಕನ್ನಡಕವನ್ನು ಕೊಟ್ಟು ಬೋರ್ಡ್ ನ್ನು ಎದುರುಗಡೆ ಇಟ್ಟು ಕೇಳಿದೆ.

“ಈಗಲಾದರೂ ಇದನ್ನು ಓದುತ್ತಿಯಾ?”

ಆಗ ಆಕೆ ಕೋಪದಿಂದ ಹೇಳಿದ್ಲು

– “ಎನ್ ಸ್ವಾಮಿ ಇಷ್ಟು ಕನ್ನಡಕ ಹಾಕಿದ್ರೂ ಸಹ ಓದೋಕೆ ಆಗ್ತಾ ಇಲ್ಲ…”

“ನಿನಗೆ ಕನ್ನಡ ಅಕ್ಷರ ತಿಳಿದಿದೆಯಾ?”

“ಏನ್ ಸ್ವಾಮಿ ಮಾತಾಡ್ತೀರಾ ನೀವು. ನಾನು ನಿಮ್ಮ ಅಂಗಡಿಗೆ ಬಂದಿರುವುದೇ ಕನ್ನಡಕ ಹಾಕಿಕೊಂಡು ಓದೋಣ ಅಂತ. ನೀವು ಕೊಡುವ ಕನ್ನಡಕವನ್ನು ಹಾಕಿದರೆ ಯಾವ ಭಾಷೆ ಬೇಕಾದರೂ ಸುಲಭವಾಗಿ ಓದಬಹುದು ಅಂತಾ ನಮ್ಮೂರ ಶೇಷಯ್ಯ ಹೇಳುತ್ತಾ ಇದ್ದರು ಅದಕ್ಕಾಗಿ ನಾನು ನಿಮ್ಮ ಅಂಗಡಿಯನ್ನು ಹುಡುಕಿಕೊಂಡು ಯಡೂರಿಗೆ ನಡೆದೇ ಬಂದು ಅಲ್ಲಿಂದ ಇಲ್ಲಿಗೆ ಬಸ್ಸಿನಲ್ಲಿ ಬಂದೆ” ಎಂದಾಗ ನಾನಂತೂ ಸುಸ್ತಾಗಿ ಬೀಳುವುದೊಂದು ಬಾಕಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...