Home / ಕಥೆ / ಕಿರು ಕಥೆ / ನನ್ನದೆ ತಪ್ಪು

ನನ್ನದೆ ತಪ್ಪು

ಕುಂದಾಪುರ ಶಿವಮೊಗ್ಗ ರಸ್ತೆಯಲ್ಲಿ ನನ್ನ ಕನ್ನಡಕದ ಅಂಗಡಿ ತೆರೆದಿದ್ದೆ. ಅಲ್ಲಿಗೆ ಸಿದ್ದಾಪುರ, ಶಂಕರನಾರಾಯಣ, ಇತರ ಹತ್ತಾರು ಹಳ್ಳಿಗಳಿಂದ ನನ್ನ ಕನ್ನಡಕದ ಅಂಗಡಿಗೆ ನಿತ್ಯವೂ ನೂರಾರು ಗಿರಾಕಿ ಬರುತ್ತಿದ್ದರು. ಕನ್ನಡಕದ ಅಂಗಡಿ ಪಕ್ಕದಲ್ಲೇ ಸಣ್ಣದೊಂದು ಕಣ್ಣಿನ ಪರೀಕ್ಷೆಗೆ ಒಂದು ಕ್ಲಿನಿಕ್ ಸಹ ಹಾಕಿಕೊಂಡಿದ್ದೆ.

ದೇಶ ವಿದೇಶಗಳ ಹೊಸ ಮಾದರಿಯ ಕನ್ನಡಕದ ಜೊತೆಯಲ್ಲಿ ಕೂಲಿಂಗ್ ಗ್ಲಾಸ್‌ಗಳು ಕಡಿಮೆಯ ದರದಲ್ಲಿ ಕನ್ನಡಕ ದೊರೆಯುವ ಏಕಮೇವ ಅಂಗಡಿ ನನ್ನದಾಗಿತ್ತು.

“ಸೀಮಾ” ಕನ್ನಡಕದ ಅಂಗಡಿ ಎನ್ನುವುದು ನನ್ನ ಅಂಗಡಿಯ ಹೆಸರಾಗಿತ್ತು. ನನ್ನ ಮಲೆನಾಡು ಭಾಗದ ಆಗುಂಬೆಸೀಮೆಯವನಾಗಿದ್ದೆ. ನಾನು ಕಾಲೇಜು ವಿಧ್ಯಾಭ್ಯಾಸವೆಲ್ಲ ಶಿವಮೊಗ್ಗದಲ್ಲಿ ಮಗಿಸಿದ್ದೆ. ನಂತರ ಅಲ್ಲಿ ಇಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿದರೂ ಉದ್ಯೋಗ ಸಿಗದೆ ಈ ಕಣ್ಣು ಪರೀಕ್ಷೆ ಶಾಪಿನ ಜೊತೆಯಲ್ಲಿ ಕನ್ನಡಕದ ಅಂಗಡಿ ತೆರೆದೆ. ನನ್ನ ಈ ಸೀಮಾತೀತವಾದ ಸಾಧನೆಗಾಗಿ ನನ್ನ ಅಂಗಡಿಗೆ ನಾನೇ ನಾಮಕರಣ ಮಾಡಿದ್ದು “ಸೀಮಾ”.

ಅದೊಂದು ಮಧ್ಯಾಹ್ನ ಸಮಯಕ್ಕೆ ನಾನು ಊಟ ಮುಗಿಸಿ ಕುಳಿತಾಗ ಸುಮಾರು ನಲವತ್ತರ ಪ್ರಾಯದ ಹೆಂಗಸೊಬ್ಬರು ಅಂಗಡಿಗೆ ಬಂದರು.

– “ಏನಮ್ಮ? ಏನಾಗಬೇಕಿತ್ತು?”

“ಸಾರ್ ನನಗೆ ಕನ್ನಡಲ ಬೇಕಾಗಿತ್ತು, ನಾನು ದೂರ ಹಳ್ಳಿಯಿಂದ ಬಂದಿರುವೆ?”

“ಹೊಸನಗರ ತಾಲ್ಲೂಕಿನ ಮೇಲುಸುಂಕ ಎಂಬ ಹಳ್ಳಿಯಿಂದ ಬಂದಿರುವೆ. ಅಲ್ಲಿಂದ ಹತ್ತಾರು ಮೈಲಿ ನಡೆದುಕೊಂಡು ಬಂದು ನಂತರ ಬಸ್ಸಿನಲ್ಲಿ ಬಂದಿರುವೆ”

“ಸರಿ ನಿಮ್ಮ ಸಮಸ್ಯೆ ಹೇಳು”

“ನೀವು ಕೊಡುವ ಕನ್ನಡಕ ಹಾಕಿಕೊಂಡರೆ ಸರಿಯಾಗಿ ಓದಬಹುದಂತೆ ಹೌದ”

ನಾನು ನಗುತ್ತಾ ಉತ್ತರಿಸಿದೆ

– “ಹೌದಮ್ಮ”

“ಸ್ವಾಮಿ ಹಾಗಾದರೆ ನನಗೂ ಒಂದು ಒಳ್ಳೆಯ ಕನ್ನಡಕ ಕೊಡಿ”.

ನಾನು ಅವಳನ್ನು ನನ್ನ ಶಾಪಿನೊಳಗೆ ಕರೆದುಕೊಂಡು ಹೋಗಿ ಅವಳಿಗೆ ನೂರಾರು ಕನ್ನಡಕ ಕೊಟ್ಟು ಅವಳನ್ನು ಪರೀಕ್ಷೆ ಮಾಡಿದೆ. ಎಷ್ಟು ರೀತಿಯ ಕನ್ನಡಕ ಕೊಟ್ಟರು ಅವಳಿಗೆ ಎದುರುಗಡೆ ಇಟ್ಟ ಬೋರ್ಡಿನಲ್ಲಿ ಇರುವ ಅಕ್ಷರ ಒಂದೇ ಒಂದನ್ನು ಓದಲಾಗಲಿಲ್ಲ.

ಕೊನೆ ಪ್ರಯತ್ನವೆಂಬಂತೆ ಉಳಿದ ಒಂದೇ ಒಂದು ಕನ್ನಡಕವನ್ನು ಕೊಟ್ಟು ಬೋರ್ಡ್ ನ್ನು ಎದುರುಗಡೆ ಇಟ್ಟು ಕೇಳಿದೆ.

“ಈಗಲಾದರೂ ಇದನ್ನು ಓದುತ್ತಿಯಾ?”

ಆಗ ಆಕೆ ಕೋಪದಿಂದ ಹೇಳಿದ್ಲು

– “ಎನ್ ಸ್ವಾಮಿ ಇಷ್ಟು ಕನ್ನಡಕ ಹಾಕಿದ್ರೂ ಸಹ ಓದೋಕೆ ಆಗ್ತಾ ಇಲ್ಲ…”

“ನಿನಗೆ ಕನ್ನಡ ಅಕ್ಷರ ತಿಳಿದಿದೆಯಾ?”

“ಏನ್ ಸ್ವಾಮಿ ಮಾತಾಡ್ತೀರಾ ನೀವು. ನಾನು ನಿಮ್ಮ ಅಂಗಡಿಗೆ ಬಂದಿರುವುದೇ ಕನ್ನಡಕ ಹಾಕಿಕೊಂಡು ಓದೋಣ ಅಂತ. ನೀವು ಕೊಡುವ ಕನ್ನಡಕವನ್ನು ಹಾಕಿದರೆ ಯಾವ ಭಾಷೆ ಬೇಕಾದರೂ ಸುಲಭವಾಗಿ ಓದಬಹುದು ಅಂತಾ ನಮ್ಮೂರ ಶೇಷಯ್ಯ ಹೇಳುತ್ತಾ ಇದ್ದರು ಅದಕ್ಕಾಗಿ ನಾನು ನಿಮ್ಮ ಅಂಗಡಿಯನ್ನು ಹುಡುಕಿಕೊಂಡು ಯಡೂರಿಗೆ ನಡೆದೇ ಬಂದು ಅಲ್ಲಿಂದ ಇಲ್ಲಿಗೆ ಬಸ್ಸಿನಲ್ಲಿ ಬಂದೆ” ಎಂದಾಗ ನಾನಂತೂ ಸುಸ್ತಾಗಿ ಬೀಳುವುದೊಂದು ಬಾಕಿ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...