Home / ಕಥೆ / ಸಣ್ಣ ಕಥೆ / ರಾಜಭಕ್ತ ಮೈಸೂರಿನ ಸೆಟ್ಟಿ

ರಾಜಭಕ್ತ ಮೈಸೂರಿನ ಸೆಟ್ಟಿ

ಇಮ್ಮಡಿ ತಿಮ್ಮರಾಜಒಡೆಯರು ದೊರೆತನಮಾಡುತ್ತಿದ್ದ ಕಾಲದಲ್ಲಿ ಸಿಂಧುವಳ್ಳಿ, ಹುಣಸನಾಳುಗಳ ಪಾಳಯಗಾರರು ಅವರ ಅಶ್ರಿತರಾಗಿದ್ದರು.

ಒಂದುಸಲ ನಂಜನಗೂಡಿನ ರಥೋತ್ಸವ ಕಾಲದಲ್ಲಿ ದೊರೆಗಳು ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಕೆಲವರು ಪಾಳಯಗಾರರು ದೇವರ ಸೇವೆಗೆಂದು ಬಂದಿದ್ದರು. ಪಾಳಯಗಾರರು ಬಹಳ ಅಟ್ಟಹಾಸದಿಂದ ಮೆರೆಯುತ್ತಲಿದ್ದು `ಬಿರುದೆಂತೆಂಬರಗಂಡ’ ನೆಂದು ಹೊಗಳಿಸಿ ಕೊಳ್ಳುತ್ತ ತಮ್ಮ ಸಮಾನರಿಲ್ಲವೆಂಬ ಜಂಭವನ್ನು ತೋರುತ್ತಿದ್ದರು.

ಇದನ್ನು ಕಂಡು ಮೈಸೂರಿನವರು ಸಹಿಸಲಿಲ್ಲ. ಅವರಲ್ಲಿ ಮುಖ್ಯನೂ ರಾಜಭಕ್ತನೂ ಆಗಿದ್ದ ಮೈಸೂರ ಸೆಟ್ಟಿಯು ಸಾಹಸದಿಂದ ಅವರೆದುರಿಗೆ ಹೋಗಿ “ಬಿರುದೆಂತೆಂಬರಗಂಡನೆಂಬ ಬಿರುದು ನಮ್ಮ ಮೈಸೂರಿನ ಒಡೆಯರಿಗೇ ಅಲ್ಲದೆ ನಿಮ್ಮಂತಹವರಿಗೆ ಸಲ್ಲುವುದಿಲ್ಲ; ನೀವು ಆ ಬಿರುದನ್ನು ಬಿಟ್ಟುಬಿಡಬೇಕು” ಎಂದು ಗಂಭೀರವಾಗಿ ಹೇಳಿದನು. ಪಾಳಯಗಾರರಿಗೆ ಕೋಪ ಬಂತು; ಈ ಅಧಿಕಪ್ರಸಂಗಿ ಸೆಟ್ಟಿಯನ್ನು ಶಿಕ್ಷಿಸಬೇಕೆಂದು ಅವನನ್ನು ಸೆರೆಹಿಡಿಸಿ ಒಯ್ದರು.

ಈ ಸಮಾಚಾರವು ಒಡೆಯರಿಗೆ ತಲಪಿತು; “ನಮ್ಮ ಧೀರ ಪ್ರಜೆಯಾದ ಸೆಟ್ಟಿಯನ್ನು ಹಿಡಿದುಕೊಂಡು ಹೋಗಲು ಆ ಪಾಳಯಗಾರರಿಗೆಷ್ಟು ಗರ್ವ! ನಮ್ಮ ಆಪ್ತನಾದ ಸೆಟ್ಟಿಯನ್ನು ಹಾಗೆ ಬಿಟ್ಟುಕೊಟ್ಟೇವೆಯೆ ನಾವು!” ಎಂದು ತಾವೇ ಸೈನ್ಯದೊಡನೆ ಹೊರಟು ಪಾಳಯಗಾರರ ಶಿಬಿರಕ್ಕೆ ಹೋಗಿ ಕೂಗಿಸಿ ಹೇಳಿಸಿದರು : “ಪಾಳಯಗಾರರಲ್ಲಿ ಯಾರಾದರೂ ಧೀರರೂ ಸಾಹಸಿಗಳೂ ಇದ್ದರೆ ಯುದ್ಧಕ್ಕೆ ಬರಬಹುದು; ಇಲ್ಲವಾದರೆ ಎಲ್ಲರೂ ಬಂದು ಸೆಟ್ಟಿಯನ್ನೊಪ್ಪಿಸಿ ತಪ್ಪಾಯಿತೆಂದು ದೊರೆಗಳ ಮನ್ನಣೆಯ ಬೇಡಬಹುದು” ಎಂದು. ಮದಿಸಿದ್ದ ಪಾಳಯಗಾರರು ಯುದ್ಧಕ್ಕೆ ಬಂದರು. ಒಡೆಯರು ಅವರೆಲ್ಲರನ್ನು ಸೋಲಿಸಿ ಸೆರೆಯಾದ ಸೆಟ್ಟಿಯನ್ನು ಕರೆತರಿಸಿ ಮರ್ಯಾದೆಯಿಂದ ಕಂಡು ಮೈಸೂರಿಗೆ ಜಯಶೀಲರಾಗಿ ಹಿಂತಿರುಗಿದರು. ಈ ಸಂಗತಿಯಿಂದ ರಾಜರಿಗೆ ‘ಮೊನೆಗಾರ’ ನೆಂಬ ಬಿರುದು ವಾಡಿಕೆಯಾಯ್ತು. ಅಂದಿನಿಂದ ಅರಮನೆಯಲ್ಲಿ ಸೆಟ್ಟಿಗೆ ಗೌರವವೂ ಹೆಚ್ಚಿತು.
*****
[ವಂಶರತ್ನಾಕರ ಪುಟ ೧೯; ವಂಶಾವಳಿ ಸಂಪುಟ ೧ ಪುಟ ೧೫- ೧೬]

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...