Home / ಕಥೆ / ಸಣ್ಣ ಕಥೆ / ಹೆಗ್ಗಡದೇವನಕೋಟೆ

ಹೆಗ್ಗಡದೇವನಕೋಟೆ

ರಾಜಒಡೆಯರ ತರುವಾಯ ಚಾಮರಾಜಒಡೆಯರೆಂಬುವರು ರಾಜ್ಯವನ್ನಾಳಿದರು. ಇವರ ಕಾಲದಲ್ಲಿ ರಾಜ್ಯವು ವಿಸ್ತಾರವಾಯಿತು. ಮೈಸೂರಿನ ಸೇನೆಯವರು ಸುತ್ತಮುತ್ತಣ ಸ್ಥಳಗಳನ್ನು ಗೆಲ್ಲುತ್ತಿದ್ದರು. ಆಗ ಹೆಗ್ಗಡದೇವನಕೋಟೆಯನ್ನು ಹಿಡಿಯಲು ಒಂದು ದಳವು ಹೊರಟಿತು.

ಆ ಕೋಟೆಯ ಯಜಮಾನನಾಗಿದ್ದ ಚನ್ನರಾಜಒಡೆಯನೆಂಬಾತನು ಆಗ ಕೋಟೆಯಲ್ಲಿರಲಿಲ್ಲ. ತನ್ನ ಸೈನ್ಯವನ್ನು ತೆಗೆದುಕೊಂಡು ದೂರವಾಗಿ ಹೋಗಿದ್ದರು. ಮೈಸೂರಿನ ದಳವು ಕೋಟೆಯನ್ನು ಮುತ್ತಿದಾಗ ಕೋಟೆಯ ಒಳಗಿದ್ದವರು ನಿಸ್ಸಹಾಯರಾಗಿದ್ದರು. ಅವರ ಕಡೆಯ ವಕೀಲನು ಅತಿಸಾಧುವಾಗಿದ್ದನು; ಆತನು ಕಾಣಿಸಿಕೊಂಡು “ನಮ್ಮ ಒಡೆಯರವರು ಸೈನ್ಯವನ್ನು ಕರೆದುಕೊಂಡು ದೂರದೇಶದಲ್ಲಿದ್ದಾರೆ. ರಾಣಿಯವರು ಗರ್ಭಿಣಿಯಾಗಿದ್ದಾರೆ ಮತ್ತು ನಿಮ್ಮ ಮುತ್ತಿಗೆಯಿಂದ ಬಹಳ ಗಾಬರಿಪಟ್ಟಿದ್ದಾರೆ. ಕೋಟೆಯಲ್ಲಿರುವವರು ೫೦ ಸೈನಿಕರು ಮಾತ್ರ. ಅಲ್ಲದೆ ದಕ್ಷಿಣಮುಖಕ್ಕೂ ಪೂರ್ವಮುಖಕ್ಕೂ ಮಳೆಗಾಲದ ಹಾವಳಿಯಿಂದ ಪೌಳಿಗೋಡೆಯು ಹಾಳಾಗಿದೆ. ಇಂತಹ ಸಮಯದಲ್ಲಿ ತೀವ್ರ ಬಂದು ಮುತ್ತುವುದು ಧರ್ಮವಲ್ಲ” ಎಂದು ಹೇಳಿದನು. ಮೈಸೂರಿನವರು ಕೊಳ್ಳೆಯನ್ನು ದಕ್ಕಿಸಿಕೊಂಡು ಹಿಂತಿರುಗಿದರು.
*****
[ವಿಲ್ಕ್ಸ್, ಸಂ. ೧ ಪುಟ ೨೯]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...