Home / ಬಾಲ ಚಿಲುಮೆ / ಕಥೆ / ಹುಲಿಯೂ ಬೆಕ್ಕೂ

ಹುಲಿಯೂ ಬೆಕ್ಕೂ

ಹುಲಿಯು ಚೆಕ್ಕಿನ ಹತ್ತಿರ ವಿದ್ಯೆಯನ್ನು ಕಲಿಯುವುದಕ್ಕೆ ಹೋಯಿತು. ಬೆಕ್ಕು “ಅಯ್ಯಾ! ನಿನಗೆ ಸಿಟ್ಟು ಬಹಳ, ನೀನು ಆ ಸಿಟ್ಟು! ಬಿಟ್ಟರೆ ಆಗಬಹುದು” ಎಂದಿತು. ಹುಲಿಯು “ಹಾಗೇ ಆಗಲಿ” ಎಂದು ಒಪ್ಪಿ ಕೊಂಡಿತು. ಬೆಕ್ಕು ಅಕ್ಕರೆಯಿಂದ ಕಲಿಸಲು ಮೊದಲು ಮಾಡಿತು.

ಆದರೆ ಬೆಕ್ಕಿಗೆ ಬಹಳ ಬುದ್ಧಿ. ತನಗಿಂತ ಗಾತ್ರದಲ್ಲಿ ದೊಡ್ಡದಾದ ಹುಲಿಯು ಮೇಲೆ ಬಿದ್ದರೆ ತಾನು ಉಳಿಯುವುದು ಅನುಮಾನವೆಂದು, ದೂರದಲ್ಲಿಯೇ ಇರುತ್ತಿತ್ತು. ಗುಟ್ಟರೆ ಹಾಕುವುದು, ಸದ್ದಾಗದಂತೆ ನಡೆಯುವುದು, ಪೊದೆಗಳಲ್ಲಿ ಅವಿತುಕೊಳ್ಳುವುದು, ಗುರಿಯಿಟ್ಟು ಹಾರುವುದು ಮೊದಲಾದ ವಿದ್ಯೆಗಳನ್ನು ಹೇಳಿಕೊಟ್ಟಿತು. ಹುಲಿಯು ಬಹಳ ವಿಧೇಯನಾಗಿ ಎಲ್ಲವನ್ನೂ ಕಲಿತುಕೊಂಡಿತು. ಅಲ್ಲಿಗೆ ಒಂದು ವರುಷವಾಯಿತು.

ಎರಡನೆಯ ವರುಷ ಕೊಂಚ ಕಷ್ಟದ ಪಾಠಗಳಿಗೆ ಆರಂಭವಾಯಿತು. ಕತ್ತಲಲ್ಲಿ ನೋಡುವುದು, ಹೊಂಚು ಹಾಕುವುದು, ಬಾಲವನ್ನು ನೆಲಕ್ಕಪ್ಪಳಿಸುವುದು, ಇವೆಲ್ಲವನ್ನೂ ಕಲಿತುಕೊಂಡಿತು.

ಮೂರನೆಯ ವರುಷ ಇನ್ನೂ ಕಷ್ಟದ ಪಾಠಗಳು. ಆದರೆ ಆಲ್ಲಿ ಕಲಿಯುವುದು ಹೆಚ್ಚಾಗಿರಲಿಲ್ಲ. ಆ ವರ್‍ಷ, ಉಗುರುಗಳನ್ನು ಬೇಕಾದಾಗ ಈಚೆಗೆ ಬಿಡುವುದು, ಬೇಡವಾದಾಗ ಒಳಗೆ ಎಳೆದುಕೊಳ್ಳುವುದು ಇದೊಂದು, ಮರ ಹತ್ತುವುದೊಂದು, ಹೀಗೆ ಎರಡೇ ಕಲಿಯಬೇಕಾಗಿದ್ದುದು. ಹುಲಿಯು ಉಗುರನ್ನು ಬಿಟ್ಟು ಎಳೆದುಕೊಳ್ಳುವುದನ್ನು ಕಲಿತುಕೊಂಡಿತು. ಬೆಕ್ಕು ಮರವನ್ನು ಹತ್ತುವುದನ್ನು ಹೇಳಿಕೊಡುತ್ತದೆ. ಎಷ್ಟುಸಲ ಹೇಳಿದರೂ ಹುಲಿಯು ಎಲ್ಲೋ ನೋಡಿಕೊಂಡಿತ್ತು. ಅದಕ್ಕೆ ತಿಳಿಯಲಿಲ್ಲ. ಅದಕ್ಕಾಗಿ ಬೆಕ್ಕು ಅದನ್ನು ಬೆತ್ತದಿಂದ ಹಾಗೆಂದಿತು, ಹುಲಿಯು ತಿರುಗಿ ತಟ್ಟನೆ ಮೇಲೆ ಬಿತ್ತು. ಆದರೆ ಬೆಕ್ಕು ಬಹಳ ಎಚ್ಚರಿಕೆಯಿಂದಿತ್ತು. ಹುಲಿಗೆ ಸಿಕ್ಕಲಿಲ್ಲ. ತಟ್ಟನೆ ಮರವನ್ನು ಹತ್ತಿ ಕೊಂಡಿತು. ಹುಲಿಗೆ ಮರ ಹತ್ತಲು ಆಗಲಿಲ್ಲ. ಆಗ ಅದಕ್ಕೆ “ನನಗೆ ಮರವನ್ನು ಹತ್ತುವುದು ಬರುವುದಿಲ್ಲ” ಎಂಬುದು ನೆನಪಿಗೆ ಬಂತು.

ಮತ್ತೆ ಬೆಕ್ಕು ಅವಿಧೇಯನಾದ ಹುಲಿಯನ್ನು ನಂಬಲಿಲ್ಲ. ತನ್ನ ಕೆಟ್ಟ ನಡತೆಗಾಗಿ ಹುಲಿಯು ಬಹಳ ನೊಂದುಕೊಂಡಿತು. ತಾನು ವಿಧೇಯನಾಗಿರುವೆನೆಂದು ಹೇಳಿಕೊಂಡಿತು. ಬೆಕ್ಕು “ನೀನು ಅವಿಧೇಯ. ಹೇಳಿದ ಹಾಗೆ ಕೇಳುವವನಲ್ಲ. ನಿನಗೆ ನಾನು ಪಾಠ ವನ್ನು ಹೇಳುವುದಿಲ್ಲ” ಎಂದು ಹೇಳಿಬಿಟ್ಟಿತು. ಹುಲಿಯು ಅತ್ತು, ಕಣ್ಣೀರು, ಕರೆಯಿತು. ಆದರೂ ಬೆಕ್ಕು ಮರ ಹತ್ತುವುದನ್ನು ಅದಕ್ಕೆ ಕಲಿಸಿ ಕೊಡಲಿಲ್ಲ. “ನನಗೆ ಮರ ಹತ್ತುವುದು ಬರುನುದಿಲ್ಲ” ಎಂದು ಹುಲಿಯು ಈಗಲೂ ಅಳುವುದಂತೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...