Home / ಕವನ / ಕವಿತೆ / ಗಿಳಿವಿಂಡು

ಗಿಳಿವಿಂಡು

ಒಂದರಳೆ ಮರದಲ್ಲಿ
ಸಂಜೆಯಾಗಿರುವಲ್ಲಿ
ಒಂದೊಂದೆ ಮರಳುವವು ಸಾಲುಗೊಂಡು :
ಒಂದೊಂದೆ ಮರಳುವವು
ಗಿಳಿಯೆಲ್ಲ ತೆರಳುವವು
ಗೂಡುಗೊಂಡಿಹ ಮರವನಿದಿರುಗೊಂಡು.

ಸಂಧ್ಯೆಯಿಂದೀಚೆಗೆನೆ
ಸ್ಮರನೆಚ್ಚ ಶರಗಳೆನೆ
ತಾಗುತಿದೆ ಗಿಳಿಹಿಂಡು ಬಂದು ಮರಕೆ.
ಕೊಂಬೆಮೇಲೆಳೆಮರಿಯು
ನಂಬಿ ತಾಯಿಯನರಿಯು-
ತಿರೆ ಮಿಡಿಯಿತೆನ್ನೆದೆಯು ದೀನ ಸ್ವರಕೆ.

ಮರ, ಸ್ಮರನ ಬೀಡೆಂದು-
ಗಿಳಿಗಾವಲಿಹುದೆಂದು-
ಗಳಹುತಿದ್ದನು ಹಳೆಯ ದಿನದ ಕವಿಯು :
ಅಂದಿನಾ ಬಾಳಿನಾ
ಇಂದಿನಾ ಹಾಳಿನಾ
ಗತಿ ಬೇರೆ ಶ್ರುತಿ ಬೇರೆ,-ಕಹಿಯು ಸವಿಯು,

ನೂರಾರು ಗಿಳಿಯ ಮನೆ-
ಯೊಳಗೊಂಡ ಮರದ ಕೊನೆ-
ಯೆಲೆಗಳಲಿ ತೂರಾಡಿ ಚೀರಾಡುತ
ಒಂದು ಗಿಳಿಯಿನ್ನೊಂದ-
ನಲ್ಲಿ ಭೀ ಥೂ ಎಂದು,
ತನ್ನದಿದು ತನಗೆಂದು ಹೋರಾಡುತ

ಬರೆ, ಕೇಳಿ ಚೀರ್‍ದನಿಯ,
ನೋಡಿಲ್ಲಿ! ಹೂಗಣೆಯ
ಹಬ್ಬ ವಿಹುದೆನಬಹುದೆ ಕಣ್ಣು ಮುಚ್ಚಿ?
ಒಂದು ಗಿಳಿಯಿನ್ನೊಂದ-
ನೆದುರಿಸಲು ಕಡುನೊಂದು
ಕದನವೆಸಗುತ ಕೂಕ್ಕೆ ಚುಚ್ಚಿ ಚುಚ್ಚಿ?

ಒಂದೊಂದು ಗಿಳಿಗೊಂದು
ಮನೆಯಿಹುದು ಇದ್ದರೂ
ಗಿಳಿಯ ಗೊಂದಣನಿಂತು ಹಾರ್‍ವುದೇಕೆ?
ಬೇರೊಂದು ಗಿಳಿಯ ಮನೆ-
ಯನ್ನು ಸೇರುತ ಕಲಹ-
ವೆಸಗಿ ತಿಳಿವಿಲ್ಲದಲೆ ಸಾರ್‍ವುದೇಕೆ?

ಎಲ್ಲರಿಗೆ ಸವಿಗನಸು,
ಎಲ್ಲರಿಗೆ ಸವಿತಿನಸು,
ಎಲ್ಲರಿಗದೆಲ್ಲವನು ಕೊಡುವಳಿಳೆಯು.
ಕಲ್ಲೆದೆಯವರು ಕೆಲರು
ಮೆಲ್ಲುವರದೆಲ್ಲವನು
ಇಲ್ಲಿಹುದು ನೋಡು ಅನ್ಯಾಯದೆಳೆಯು!

ಬಳಿಗೆ ಸುಳಿವಳು ರಾತ್ರಿ
ಇವಳೆ ಎಲ್ಲರ ಧಾತ್ರಿ!
ತಲೆಗೊಂದು ಮಂಚವನು ಮಲಗಲಿತ್ತು
ಹಗಲೆಲ್ಲ ಹಿರಿ ವಯಣ,
ಮುಗಿಲುದ್ದ ಕುಡ್ಯಾಣ-
ಕಣಿಗೊಳಿಸುವಳು ಗಿಳಿಯ, ಕ್ರಾಂತಿವೆತ್ತು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...