Home / ಬಾಲ ಚಿಲುಮೆ / ಕಥೆ / ಕಾರುಗಳ್ಳೀ ವೀರಾಜಯ್ಯ

ಕಾರುಗಳ್ಳೀ ವೀರಾಜಯ್ಯ

ಹಿಂದೆ ಈ ನಮ್ಮ ಮೈಸೂರು ರಾಜ್ಯವನ್ನು ರಾಜವೊಡೆಯರು ಆಳುತ್ತಿದ್ದರು. ಆಗ ವೀರಾಜಯ್ಯನೆಂಬುವವನು ಒಬ್ಬನು ಇದ್ದನು. ಮಹಾರಾಜರು ಅವನು ಬದುಕಲೆಂದು ಕಾರುಗಳ್ಳಿಯನ್ನು ಅವನಿಗೆ ಮಾನ್ಯವಾಗಿ ಕೊಟ್ಟಿದ್ದರು.

ವೀರಾಜಯ್ಯನು ಬಹಳ ಜಂಭಗಾರನು. ಯಾರನ್ನು ಕಂಡರೂ ಲಕ್ಷ್ಯವಿರಲಿಲ್ಲ. ಒಂದು ದಿನ ಮಹಾರಾಜರ ಎದುರಿಗೆ ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಆಟ್ಟಹಾಸದಿಂದ ಬಂದನು. ಮಹಾರಾಜರ ಮಗ್ಗುಲಲ್ಲಿ ಇದ್ದ ಇತರ ದೊಡ್ಡ ಅಧಿಕಾರಿಗಳಗಿ ಇದು ಸರಿ ಬೀಳಲಿಲ್ಲ. “ಮಹರಾಜರೆಂದರೆ ನಮಗೆಲ್ಲಾ ದೊಡ್ಡವರು. ಅವರ ಸನ್ನಿಧಿಯಲ್ಲಿ ನಯ ಭಯಗಳಂದ ನಡೆದುಕೊಳ್ಳಬೇಕು. ಇಲ್ಲವಾದರೆ ನಿನಗೆ ಒಳ್ಳೆಯದಾಗುವುದಿಲ್ಲ” ಎಂದು ಮಂತ್ರಿಯು ಹೇಳಿ ಕಳುಹಿಸಿದನು. ವೀರಾಜಯ್ಯನು ಕೇಳಲಿಲ್ಲ.

ಮತ್ತೊಂದು ಸಲವೂ ಹೀಗೆಯೇ ಆಯಿತು. ಆ ಸಲವೂ ಮಂತ್ರಿಯು ಮತ್ತೆ ಬೇಡವೆಂದು ಹೇಳಿದನು. ಇನ್ನೊಂದು ಸಲವೂ ಹೀಗೆಯೇ ಆಯಿತು. ಮಂತ್ರಿಯು ಮಹಾರಾಜರ ಬಳಿಗೆ ಹೋಗಿ “ಮಹಾಸ್ವಾಮಿಯವರು ಮನ್ನಿಸಬೇಕು. ವೀರಾಜಯ್ಯನು ಪ್ರಭುಗಳನ್ನು ಕಂಡರೆ ಅಲಕ್ಷ್ಯಮಾಡುತ್ತಿರುವನು. ಇತರರು ಇವನನ್ನು ನೋಡಿ ಕೆಟ್ಟು ಹೋದಾರು. ಅದರಿಂದ ಅವನಿಗೆ ಶಿಕ್ಷೆಯಾಗಬೇಕು” ಎಂದು ಅರಿಕೆ ಮಾಡಿದನು. ಮಹಾರಾಜರು “ಅಹುದು, ಎರಡು ಸಲ ಮನ್ನಿಸಿದರೂ ಅವನಿಗೆ ಬುದ್ಧಿ ಬರಲಿಲ್ಲ. ಅವನ ಮಾನ್ಯವನ್ನೂ ಪಲ್ಲಕ್ಕಿಯನ್ನೂ ಕಿತ್ತುಕೊಂಡು ಓಡಿಸಿ ಬಿಡಿ” ಎಂದು ಅಪ್ಪಣೆ ಮಾಡಿದರು. ಮಂತ್ರಿಯು ಹಾಗೆಯೇ ಮಾಡಿದನು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...