ಗುಬ್ಬಿಮರಿ

ಮಬ್ಬುಗವಿದು ಕತ್ತಲಾಗೆ
ಎತ್ತ ಏನು ಕಾಣದಾಗೆ
ಮಳೆಯ ಹನಿಯು ಮೊತ್ತವಾಗಿ
ಬಂದು ಮೊಗವ ತಿವಿಯುತಿರಲು
ಸತ್ತು ಬಿದ್ದ ಬಂಟನಂತೆ
ಇಳೆಯು ಸುಮ್ಮನೊರಗುತಿರಲು
ಕತ್ತನೆತ್ತಿ ಅತ್ತ ಇತ್ತ
ನೋಡುತಿಹುದು ಗುಬ್ಬಿ ಎತ್ತ
ತನ್ನ ಪಯಣ ಬೆಳೆಸಿತೋ!
ತನ್ನ ಮನವ ಕಳಿಸಿತೋ!

ಮೇಲಿನಿಂದ ಬಿದ್ದ ಮರಿ!
ಸುತ್ತಲಿಹವು ನಾಯಿ ನರಿ!
ಭೋರೆಂದು ಗಾಳಿಮೊಳಗು!
ನೀರೆ ನೀರು ಮೇಲು ಕೆಳಗು!
ಎತ್ತಣಿಂದೆತ್ತ ಪಯಣ?
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ಮೋಡದಾಚೆ ತಮ್ಮ ಬೆಳಕ
ಬಯ್ತಿರಿಸಿತು ಅರಿಲ ಗಣವು.
ಮನೆಯೊಳೆಲ್ಲ ನಗೆಯ ಬೀರಿ
ನಲಿಯುತಿತ್ತು ಮರ್‍ತ್ಯಗಣವು.
ಮರಿಯು ನಿಲ್ಲಲದರ ಸಾವು
ಬರಲದೊಂದೆ, ಒಂದೆ, ಕ್ಷಣವು!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ರಕ್ತಪಾತದಿಂದ ಬಲಿತ
ರಾಜ್ಯಗಳಿಗೆ ಸಾವೆ ಇಲ್ಲ!
ವ್ಯರ್‍ಥವಿರುವನರ್‍ಥಗಳಾ
ಮೊನೆಗೆ ಕೊನೆಯೆ ಕೊನೆಯೆ ಇಲ್ಲ!
ನಿರಪರಾಧಿಯಾದ ಬಾಳು
ಏಕೊ ಏನೊ! ಹಾಳು ಎಲ್ಲ!
ನಾಣ್ದೊರೆದನೊ ಲೋಕದೊಡೆಯ?
ಸಣ್ಣ ಮರಿಯ ಕಾವರಿಲ್ಲ!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು

ಎತ್ತಿಕೊಂಡೆ ಸಣ್ಣ ಮರಿಯ,
ಅದುವೆ ಕಿರಿಯ, ನಾನು ಹಿರಿಯ!
ಚಳಿಗೆ ಮರಿಯ ಮೈ ಮುದುಡಿತು
ಅದಕೆ ನನ್ನ ಬಗೆ ಕದಡಿತು
ಕೈಯ್ಯಲಿಟ್ಟು ಕೊಂಡೆ ಇನ್ನು
ತೆರೆಯದಿರುವದದರ ಕಣ್ಣು
ನೆಲಮುಗಿಲಿನ ನಡುವೆ, ಮರಿಯೆ!
ಕೂಡಿ ನಡೆವೆವೆಂದೆನು!
ಇದ್ದ ದೇವನೆಡೆಗೆ ಹೋಗಿ
ಮೊರೆಯಿಡೋಣವೆಂದೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾತ್ಮನಿಗೆ
Next post ಕಾರುಗಳ್ಳೀ ವೀರಾಜಯ್ಯ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…