Home / ಕವನ / ಕವಿತೆ / ಗುಬ್ಬಿಮರಿ

ಗುಬ್ಬಿಮರಿ

ಮಬ್ಬುಗವಿದು ಕತ್ತಲಾಗೆ
ಎತ್ತ ಏನು ಕಾಣದಾಗೆ
ಮಳೆಯ ಹನಿಯು ಮೊತ್ತವಾಗಿ
ಬಂದು ಮೊಗವ ತಿವಿಯುತಿರಲು
ಸತ್ತು ಬಿದ್ದ ಬಂಟನಂತೆ
ಇಳೆಯು ಸುಮ್ಮನೊರಗುತಿರಲು
ಕತ್ತನೆತ್ತಿ ಅತ್ತ ಇತ್ತ
ನೋಡುತಿಹುದು ಗುಬ್ಬಿ ಎತ್ತ
ತನ್ನ ಪಯಣ ಬೆಳೆಸಿತೋ!
ತನ್ನ ಮನವ ಕಳಿಸಿತೋ!

ಮೇಲಿನಿಂದ ಬಿದ್ದ ಮರಿ!
ಸುತ್ತಲಿಹವು ನಾಯಿ ನರಿ!
ಭೋರೆಂದು ಗಾಳಿಮೊಳಗು!
ನೀರೆ ನೀರು ಮೇಲು ಕೆಳಗು!
ಎತ್ತಣಿಂದೆತ್ತ ಪಯಣ?
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ಮೋಡದಾಚೆ ತಮ್ಮ ಬೆಳಕ
ಬಯ್ತಿರಿಸಿತು ಅರಿಲ ಗಣವು.
ಮನೆಯೊಳೆಲ್ಲ ನಗೆಯ ಬೀರಿ
ನಲಿಯುತಿತ್ತು ಮರ್‍ತ್ಯಗಣವು.
ಮರಿಯು ನಿಲ್ಲಲದರ ಸಾವು
ಬರಲದೊಂದೆ, ಒಂದೆ, ಕ್ಷಣವು!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ರಕ್ತಪಾತದಿಂದ ಬಲಿತ
ರಾಜ್ಯಗಳಿಗೆ ಸಾವೆ ಇಲ್ಲ!
ವ್ಯರ್‍ಥವಿರುವನರ್‍ಥಗಳಾ
ಮೊನೆಗೆ ಕೊನೆಯೆ ಕೊನೆಯೆ ಇಲ್ಲ!
ನಿರಪರಾಧಿಯಾದ ಬಾಳು
ಏಕೊ ಏನೊ! ಹಾಳು ಎಲ್ಲ!
ನಾಣ್ದೊರೆದನೊ ಲೋಕದೊಡೆಯ?
ಸಣ್ಣ ಮರಿಯ ಕಾವರಿಲ್ಲ!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು

ಎತ್ತಿಕೊಂಡೆ ಸಣ್ಣ ಮರಿಯ,
ಅದುವೆ ಕಿರಿಯ, ನಾನು ಹಿರಿಯ!
ಚಳಿಗೆ ಮರಿಯ ಮೈ ಮುದುಡಿತು
ಅದಕೆ ನನ್ನ ಬಗೆ ಕದಡಿತು
ಕೈಯ್ಯಲಿಟ್ಟು ಕೊಂಡೆ ಇನ್ನು
ತೆರೆಯದಿರುವದದರ ಕಣ್ಣು
ನೆಲಮುಗಿಲಿನ ನಡುವೆ, ಮರಿಯೆ!
ಕೂಡಿ ನಡೆವೆವೆಂದೆನು!
ಇದ್ದ ದೇವನೆಡೆಗೆ ಹೋಗಿ
ಮೊರೆಯಿಡೋಣವೆಂದೆನು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...