Home / ಕವನ / ಕವಿತೆ / ಕುಂತಿ

ಕುಂತಿ

ಸೂರ್ಯ ಕಂತಿದ್ದಾನೆ ಅವಳು
ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ
ಧೂಳು ಕಾಲುದಾರಿಯಲ್ಲಿ
ಉಸುಕಿನಲ್ಲಿ ಅವಳ ಹೆಜ್ಜೆಗಳು
ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ.

ಮಗಳು ಈ ದಿನ ಯಾಕೋ
ಮಂಕಾಗಿದ್ದಳು ಹಾರಿ ಬರುವ
ಹಗಲ ಬಿಸಿಲಿಗೆ ಹೆದರಿದ್ದಾಳೆ,
ಅಪ್ಪನ ಕಣ್ಣಲ್ಲಿ ನಿಗಿ ನಿಗಿ ಸೂರ್ಯ!
ಉತ್ತರ ಸಿಗದ ಪ್ರಶ್ನೆ ಪತ್ರಿಕೆಗಳು

ಭ್ರಮೆಯಲಿ ನಡುಗೆಯ ಕನಸು
ತೊಯ್ದ ಒರೆಯಲಿ ಗಂಜೀ
ಬೇಯಿಸುವ ಪರಿಪಾಠ, ಮುಳ್ಳು
ತುಂಬಿದ ಕಳ್ಳೀಕಂಠಿ ಓಣಿ
ನದಿಯೊಳಗೆ ಅತ್ತ ಇತ್ತ ತೇಲುವ ದೋಣಿ.

ತಲೆಯಿರುವ ಜಾಗದಲಿ ಹಣ್ಣಾದ
ಕೂದಲು ಗಂಟು, ಮಾಸಿದ ಚಿಕ್ಕೀ ಬಳೆಗಳು
ಹಚ್ಚಾಗಿವೆ ಎದೆಯ ಭಾರ ಪುಟ್ಟೀ
ಒಂಟಿಯಾಗಿ ನಡೆದಿದ್ದಾಳೆ ಕುಂತೀ
ಎಲ್ಲಾ ಸರಿಯುವ ಜಗದ ಪಾಡು.

ಮಕ್ಕಳು ಕಾಲು ತುಂಬ ಬಿಗಿದ ಸರಪಳಿ
ಹಾಲು ಉಣಿಸಿದ ತಟ್ಟೆಯಲಿ ವಿಷ
ಮನೆತುಂಬ ಹರಡಿದ ಹಗೆ ಹೊಗೆ
ಬೀದಿಗೆ ಬಂದು ಹೊರಳಾಡಿದ ಕವಿತೆ
ಕತ್ತಲು ಆಕಾಶದ ಅಂಬರದಲಿ ಚಿಕ್ಕಿಗಳಿಲ್ಲ.

ಒಂಟಿ ಮನೆಯಲಿ ಹೊರಳಾಡಿದ
ಕುಂತಿ ತಾಯಿ ಮನಸ್ಸು ಮರುಗಿತು
ಬೆನ್ನಿಗಂಟಿದ ಯುದ್ಧ ವಾಸನೆ ತಿಳಿ
ಗೇಡಿನ ಕೇಡಿನ ಆಟದಲಿ ಮೈಮರೆತವರು
ಕೇಳಲಿಲ್ಲ ಅವಳ ಹೃದಯದ ಕೂಗು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...