Home / ಕವನ / ಕವಿತೆ / ನಿವೇದನೆ

ನಿವೇದನೆ

ಕಾರುಣ್ಯದಾ ಬೆಳಕೆ ಬಾ ಬೇಗ ಬಾ
ನನ್ನೆದೆಯ ಬಾಂದಳವ ಬೆಳಗಿಸಲು ಬಾ
ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು
ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು

ಮುಗಿಲಗಲ ಜಗಕೆಲ್ಲ
ರಸವೃಷ್ಟಿ ಸುರಿಸು,
ರವಿ ಶಶಿ ತಾರಾಹೊಳಪನ್ನು
ನಮ್ಮ ಕಣ್ಣುಗಳೊಳಗಿರಿಸು,

ಮೇದಿನಿಯ ಕಣ ಕಣದಲ್ಲೂ
ಫಲ ಫಲದೆನೆಯ ನಿರಿಸು,
ಜೀವ, ಜೀವ ಸಂಕುಲಕೆಲ್ಲ
ಉಲ್ಲಸದ ನೆಮ್ಮದಿಯ ಹರಸು,

ನದಿ ನದದ ಜುಳ ಜುಳದ
ಸಿರಿ ಬತ್ತದಂತಿರಿಸು,
ಅಂಬುಧಿಯ ಸಡಗರವ
ಜೀವಿತದಿ ಬೆರೆಸು,

ಪ್ರಾಣ ವಾಯುವಿನಲೆಯಲ್ಲಿ
ಸಂಜೀವಿನಿಯನಿರಿಸು
ಸುಮಸುಮದ ನಂದನದ
ಚೆಲ್ವ ಬಾಳ್ವೆಯಲಿ ಬೆರೆಸು

ಹಾರೋಹಕ್ಕಿಯ ಪಂಜರದ
ಪಾರತಂತ್ರ್‍ಯ ಧಿಕ್ಕರಿಸು
ಜಗದ ಜನಮನಕೆಲ್ಲ ಮುದದ
ಸ್ವಾತಂತ್ರ್‍ಯ ಕೊಡಿಸು

ಕ್ರೂರ ಕ್ರೌರ್ಯ ಮೃಗದ ರಣ
ದ್ವೇಷವನು ದಹಿಸು,
ಪ್ರೀತಿ ವಾತ್ಸಲ್ಯ ನೇಹ ಸಗ್ಗವನು
ಬಿತ್ತಿ ಬೆಳೆಸುತಾ ಬೆಸೆಸು.

ದುರಾಸೆಯಾಸೆಗಳಗ್ಗಳದ
ಕುತಂತ್ರವನೆ ಕೆಡಿಸು,
ಶ್ರಮದ ಅನ್ನವ ಸಮದಿ
ಉಣ್ಣುವುದ ತಿಳಿಸು.

ಶಸ್ತ್ರ ಶಾಸ್ತ್ರದ ಭಯದ
ಭೀತಿಯನು ಬಿಡಿಸು,
ವರ್ಣ ವರ್ಣದ ವರ್ಗ
ಕ್ಷುದ್ರತೆಯ ನಳಿಸು

ರಂಗು ರಂಗಿನರಂಗು
ಬೆಳ್ಮುಗಿಲ ರಂಗಿನ ಸೊಗಸು
ಭಿನ್ನ ಭಿನ್ನದ ಜನದ
ದೇಹ-ಗೇಹ ಒಂದೆಂದು ತಿಳಿಸು

ಆ ಧರ್ಮ ಈ ಧರ್ಮ ಕರ್ಮ
ಮೌಢ್ಯ ನಿಯತಿಗಳನಳಿಸು
ಈ ವಿಶ್ವ ವೀದೇಶ ನಾಡು ನುಡಿ
ನಿಜ ಧರ್ಮ ಸಾರ ತಿಳಿಸು

ಮತ ಪಥದ ಕುಲ ಕುಲದ
ಹುಚ್ಚು ಸಹವಾಸ ಬಿಡಿಸು
ಮಾನವತೆಯರಿವರಿವು
ನೆಚ್ಚಿ ಬದುಕಲೋಲೈಸು

ಗುಡಿ ಚರ್ಚು ಮಸೀದಿ ಬಸದಿಗಳ
ಕಟ್ಟುವುದ ಬಿಡಿಸು
ನಮ್ಮ ನಿಮ್ಮಯ ನಿಜ ತಿಳಿವು
ದೇವರಿರವೆಂದು ಕಲಿಸು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...