Home / ಕವನ / ಕವಿತೆ / ನಿವೇದನೆ

ನಿವೇದನೆ

ಕಾರುಣ್ಯದಾ ಬೆಳಕೆ ಬಾ ಬೇಗ ಬಾ
ನನ್ನೆದೆಯ ಬಾಂದಳವ ಬೆಳಗಿಸಲು ಬಾ
ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು
ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು

ಮುಗಿಲಗಲ ಜಗಕೆಲ್ಲ
ರಸವೃಷ್ಟಿ ಸುರಿಸು,
ರವಿ ಶಶಿ ತಾರಾಹೊಳಪನ್ನು
ನಮ್ಮ ಕಣ್ಣುಗಳೊಳಗಿರಿಸು,

ಮೇದಿನಿಯ ಕಣ ಕಣದಲ್ಲೂ
ಫಲ ಫಲದೆನೆಯ ನಿರಿಸು,
ಜೀವ, ಜೀವ ಸಂಕುಲಕೆಲ್ಲ
ಉಲ್ಲಸದ ನೆಮ್ಮದಿಯ ಹರಸು,

ನದಿ ನದದ ಜುಳ ಜುಳದ
ಸಿರಿ ಬತ್ತದಂತಿರಿಸು,
ಅಂಬುಧಿಯ ಸಡಗರವ
ಜೀವಿತದಿ ಬೆರೆಸು,

ಪ್ರಾಣ ವಾಯುವಿನಲೆಯಲ್ಲಿ
ಸಂಜೀವಿನಿಯನಿರಿಸು
ಸುಮಸುಮದ ನಂದನದ
ಚೆಲ್ವ ಬಾಳ್ವೆಯಲಿ ಬೆರೆಸು

ಹಾರೋಹಕ್ಕಿಯ ಪಂಜರದ
ಪಾರತಂತ್ರ್‍ಯ ಧಿಕ್ಕರಿಸು
ಜಗದ ಜನಮನಕೆಲ್ಲ ಮುದದ
ಸ್ವಾತಂತ್ರ್‍ಯ ಕೊಡಿಸು

ಕ್ರೂರ ಕ್ರೌರ್ಯ ಮೃಗದ ರಣ
ದ್ವೇಷವನು ದಹಿಸು,
ಪ್ರೀತಿ ವಾತ್ಸಲ್ಯ ನೇಹ ಸಗ್ಗವನು
ಬಿತ್ತಿ ಬೆಳೆಸುತಾ ಬೆಸೆಸು.

ದುರಾಸೆಯಾಸೆಗಳಗ್ಗಳದ
ಕುತಂತ್ರವನೆ ಕೆಡಿಸು,
ಶ್ರಮದ ಅನ್ನವ ಸಮದಿ
ಉಣ್ಣುವುದ ತಿಳಿಸು.

ಶಸ್ತ್ರ ಶಾಸ್ತ್ರದ ಭಯದ
ಭೀತಿಯನು ಬಿಡಿಸು,
ವರ್ಣ ವರ್ಣದ ವರ್ಗ
ಕ್ಷುದ್ರತೆಯ ನಳಿಸು

ರಂಗು ರಂಗಿನರಂಗು
ಬೆಳ್ಮುಗಿಲ ರಂಗಿನ ಸೊಗಸು
ಭಿನ್ನ ಭಿನ್ನದ ಜನದ
ದೇಹ-ಗೇಹ ಒಂದೆಂದು ತಿಳಿಸು

ಆ ಧರ್ಮ ಈ ಧರ್ಮ ಕರ್ಮ
ಮೌಢ್ಯ ನಿಯತಿಗಳನಳಿಸು
ಈ ವಿಶ್ವ ವೀದೇಶ ನಾಡು ನುಡಿ
ನಿಜ ಧರ್ಮ ಸಾರ ತಿಳಿಸು

ಮತ ಪಥದ ಕುಲ ಕುಲದ
ಹುಚ್ಚು ಸಹವಾಸ ಬಿಡಿಸು
ಮಾನವತೆಯರಿವರಿವು
ನೆಚ್ಚಿ ಬದುಕಲೋಲೈಸು

ಗುಡಿ ಚರ್ಚು ಮಸೀದಿ ಬಸದಿಗಳ
ಕಟ್ಟುವುದ ಬಿಡಿಸು
ನಮ್ಮ ನಿಮ್ಮಯ ನಿಜ ತಿಳಿವು
ದೇವರಿರವೆಂದು ಕಲಿಸು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...