Home / ಕವನ / ಕವಿತೆ / ಬಾ ಮತ್ತೊಮ್ಮೆ

ಬಾ ಮತ್ತೊಮ್ಮೆ

ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ
ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ
ಅಸತ್ಯದ ಕುಲುಮೆಯೊಳಗೆ
ಸುತ್ತಿಗೆ ಹಿಡಿದು ಮತ್ತೊಮ್ಮೆ
ಬರಬಾರದೇ ನೀನು ‘ಕಮ್ಮಾರನಾಗಿ’
ಜಾತಿ ಮತ ಕುಲ ಧರ್ಮಗಳ
ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ
ಪಕ್ಷಗಳು ಗಂಟಲು ಹರಿದು ಕಿರುಚಿತಿಹರು
ಪಕ್ಷಗಳ ನೇತಾರರು
ಮೋಸ ಮಾಡುತಿವೆ ಬಡವರಿಗೆ
ಮೋಡಿ ಹಾಕುವ ಆಶ್ವಾಸನೆಯ ಭರವಸೆಗಳು
ಭಾವನೆಗಳಿಗೆ ಬೆಲೆ ಕೊಡದೆ
ಮತ ಗಳಿಸುವ ಕದೀಮರನೊಯ್ದು
ಚಿಲುಮೆಗೊಮ್ಮೆ ನೂಕಲು ಕರಕಾಗಿಸಲು
ಮತ್ತೊಮ್ಮೆ ಬರಬಾರದೇ ನೀನು….
ಬಾಂಬುಗಳಿಗೆ ಹತರಾಗುತ ನೋವಿನಲಿ ನಲಗುತ
ಮಾತನಾಡಲಾಗದವರ ಬಂಡೇಳದವರ
ಹಸಿದವರ ಬೆವರು ಹರಿಸುವವರ
ಕಾಲು ಕಸವಾಗುವವರ ಬೆಲೆಯೇ ಇಲ್ಲದವರ
ಕನಸುಗಳು ಕುಸಿಯುತಿವೆ.
‘ಬರುತ್ತಿಲ್ಲ ಈಗ ಸಾಂತ್ವನಕ್ಕೆ
ನಿನ್ನ ಸತ್ಯದ ಅಹಿಂಸೆಯ ಮಾತುಗಳು
ಹೋದವೆಲ್ಲಿ ನಿನ್ನ ಸತ್ಯ ಅಹಿಂಸೆಯ ಕ್ರಾಂತಿಗಳು’
ಅನರ್ಥಗಳಿಗೆ ಹಪಹಪಿಸುವ
ಚುನಾವಣೆ ಪ್ರಜಾಪ್ರಭುತ್ವಕ್ಕೆ ಹೊಡೆದಾಡುವ
ಈ ರಾಜಕೀಯ ಕ್ರಾಂತಿಗಳು ತೋಳ
ಕುರಿಯಾಟಗಳ ರಕ್ತಕ್ರಾಂತಿಗಳಾಗುತಲಿವೆ
ಬಿಡು ಇನ್ನು ಮೌನ ಹಿಡಿ ಇನ್ನು ಸುತ್ತಿಗೆ
ಕೊಡು ಇನ್ನು ಪೆಟ್ಟು ಬಾ ಮತ್ತೊಮ್ಮೆ…
ಮಾಂಸ ಮೃಷ್ಟಾನ್ನ ಭೋಜನದ ಬೊಜ್ಜುಗಾರರಿಗೆ
ಏರ್ ಕಂಡೀಷನ್‌ದ ಮೋಜುಗಾರರಿಗೆ
ಅಧಿಕಾರ ಮದದ ಗೂಳಿ ಗೂಂಡಾಗಳಿಗೆ
ಗುಂಡಿನ ಲಾಬಿಗಳಲಿ ಹೊರಳಾಡುವ ಹೆಗ್ಗಣ ಹದ್ದುಗಳಿಗೆ
ಧರ್ಮದ ನೆಪ ಧರ್ಮಾಂಧರಿಗೆ
ಸಮಯ ಸಾಧಕರಿಗೆ ಪಕ್ಷಾಂತರಿಗಳನೆಲ್ಲ
ಚಿಲುಮೆಯಗ್ನಿಯಲಿ ಹಾಕು ಸುಡು
ಕುಲುಮೆಯಲಿ ಕಾಯಿಸಿ ಕರಗಿಸಿ
ಸುತ್ತುಗೆಯಿಂದ ಹೊಡೆ ಹೊಡೆದು
ರೂಪ ಕೊಡಲು ಬಾ ಮತ್ತೊಮ್ಮೆ
ದೇಶಕ್ಕೆ ಕಮ್ಮಾರನಾಗಿ
ಕೇಳಿಸಲಿ ಮತ್ತೊಮ್ಮೆ ಆ
ಚಮ್ಮಟೆ ಧ್ವನಿ ದೇಶದೊಳ ಹೊರಗೆಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...