Home / ಕವನ / ಕವಿತೆ / ಬಾ ಮತ್ತೊಮ್ಮೆ

ಬಾ ಮತ್ತೊಮ್ಮೆ

ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ
ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ
ಅಸತ್ಯದ ಕುಲುಮೆಯೊಳಗೆ
ಸುತ್ತಿಗೆ ಹಿಡಿದು ಮತ್ತೊಮ್ಮೆ
ಬರಬಾರದೇ ನೀನು ‘ಕಮ್ಮಾರನಾಗಿ’
ಜಾತಿ ಮತ ಕುಲ ಧರ್ಮಗಳ
ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ
ಪಕ್ಷಗಳು ಗಂಟಲು ಹರಿದು ಕಿರುಚಿತಿಹರು
ಪಕ್ಷಗಳ ನೇತಾರರು
ಮೋಸ ಮಾಡುತಿವೆ ಬಡವರಿಗೆ
ಮೋಡಿ ಹಾಕುವ ಆಶ್ವಾಸನೆಯ ಭರವಸೆಗಳು
ಭಾವನೆಗಳಿಗೆ ಬೆಲೆ ಕೊಡದೆ
ಮತ ಗಳಿಸುವ ಕದೀಮರನೊಯ್ದು
ಚಿಲುಮೆಗೊಮ್ಮೆ ನೂಕಲು ಕರಕಾಗಿಸಲು
ಮತ್ತೊಮ್ಮೆ ಬರಬಾರದೇ ನೀನು….
ಬಾಂಬುಗಳಿಗೆ ಹತರಾಗುತ ನೋವಿನಲಿ ನಲಗುತ
ಮಾತನಾಡಲಾಗದವರ ಬಂಡೇಳದವರ
ಹಸಿದವರ ಬೆವರು ಹರಿಸುವವರ
ಕಾಲು ಕಸವಾಗುವವರ ಬೆಲೆಯೇ ಇಲ್ಲದವರ
ಕನಸುಗಳು ಕುಸಿಯುತಿವೆ.
‘ಬರುತ್ತಿಲ್ಲ ಈಗ ಸಾಂತ್ವನಕ್ಕೆ
ನಿನ್ನ ಸತ್ಯದ ಅಹಿಂಸೆಯ ಮಾತುಗಳು
ಹೋದವೆಲ್ಲಿ ನಿನ್ನ ಸತ್ಯ ಅಹಿಂಸೆಯ ಕ್ರಾಂತಿಗಳು’
ಅನರ್ಥಗಳಿಗೆ ಹಪಹಪಿಸುವ
ಚುನಾವಣೆ ಪ್ರಜಾಪ್ರಭುತ್ವಕ್ಕೆ ಹೊಡೆದಾಡುವ
ಈ ರಾಜಕೀಯ ಕ್ರಾಂತಿಗಳು ತೋಳ
ಕುರಿಯಾಟಗಳ ರಕ್ತಕ್ರಾಂತಿಗಳಾಗುತಲಿವೆ
ಬಿಡು ಇನ್ನು ಮೌನ ಹಿಡಿ ಇನ್ನು ಸುತ್ತಿಗೆ
ಕೊಡು ಇನ್ನು ಪೆಟ್ಟು ಬಾ ಮತ್ತೊಮ್ಮೆ…
ಮಾಂಸ ಮೃಷ್ಟಾನ್ನ ಭೋಜನದ ಬೊಜ್ಜುಗಾರರಿಗೆ
ಏರ್ ಕಂಡೀಷನ್‌ದ ಮೋಜುಗಾರರಿಗೆ
ಅಧಿಕಾರ ಮದದ ಗೂಳಿ ಗೂಂಡಾಗಳಿಗೆ
ಗುಂಡಿನ ಲಾಬಿಗಳಲಿ ಹೊರಳಾಡುವ ಹೆಗ್ಗಣ ಹದ್ದುಗಳಿಗೆ
ಧರ್ಮದ ನೆಪ ಧರ್ಮಾಂಧರಿಗೆ
ಸಮಯ ಸಾಧಕರಿಗೆ ಪಕ್ಷಾಂತರಿಗಳನೆಲ್ಲ
ಚಿಲುಮೆಯಗ್ನಿಯಲಿ ಹಾಕು ಸುಡು
ಕುಲುಮೆಯಲಿ ಕಾಯಿಸಿ ಕರಗಿಸಿ
ಸುತ್ತುಗೆಯಿಂದ ಹೊಡೆ ಹೊಡೆದು
ರೂಪ ಕೊಡಲು ಬಾ ಮತ್ತೊಮ್ಮೆ
ದೇಶಕ್ಕೆ ಕಮ್ಮಾರನಾಗಿ
ಕೇಳಿಸಲಿ ಮತ್ತೊಮ್ಮೆ ಆ
ಚಮ್ಮಟೆ ಧ್ವನಿ ದೇಶದೊಳ ಹೊರಗೆಲ್ಲ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...