Home / ಕವನ / ಕವಿತೆ / ಕಪ್ತಾನ

ಕಪ್ತಾನ

ಹಿಂಸಿಸುವರು ನನ್ನನ್ನು ಸಾಮ್ರಾಜ್ಯವಾದಿಯೆಂದು:
ದೂಷಿಸುವರು ನನ್ನನ್ನು ಮಹಾಪಾತಕಿಯೆಂದು.
ಶಕ್ತಿಹೀನರ ಉಕ್ತಿಗಳಿವು, ಬಲವಂತರ ಬಲ್ನುಡಿಯಲ್ಲ!
ಪಂಜರದಿಂದ ಇಲಿಯನ್ನು ಹಿಡಿದ ಬೆಕ್ಕಿಗೆ ಹೇಳಿರಿ-ತಿನ್ನದಿರೆಂದು.
ಆನೆಯ ತಲೆ-ಮುತ್ತನುದುರಿಸಲು ಕಾಲೆತ್ತಿದ ಸಿಂಹಕುಸಿರಿರಿ-ಸೊಕ್ಕದಿರೆಂದು.

ಹುಲ್ಲೆಯ ಹಿಡಿದ ಹುಲಿಯ ರಂದಬಿಸಿರಿ-ಬಿಟ್ಟುಬಿಡೆಂದು.
ಹುಚ್ಚುಮಾತಿದು! ಬಲವಿದ್ದರೆ ಗುದ್ದು,-ಇಲ್ಲದಿರೆ ಗುದ್ದಿದೆನಿದೊ!
ಜೀವವ ಹಿಂಡಿ ಬದುಕುವೆಸಕ ಸಹಜವೆಂಬುದ ತಿಳಿಯದಿಹರೆ?

ಪ್ರಭುತ್ವವನೆಂತು ಬಿಡಲಿ? ರಾಜ್ಯವನೆಂತು ಒಲ್ಲೆನ್ನಲಿ?
ಒಲ್ಲೆಂದರೆ ಬಂದು ಪಾದಕೆ ಬೀಳುವರು ರಾಜಾಧಿರಾಜರು,
ತೆರವಾದ ಕಿರೀಟಗಳು ಬಂದು ಮೆರೆಯುವವೆನ್ನ ತಲೆಯ ಮೇಲೆ,
ಗತಿಗೆಟ್ಟ ರಾಜ್ಯಗಳಾಮಂತ್ರಿಸುವವೆನ್ನನಾಳಲಿಕ್ಕೆ-
ಗೊಂಬೆಗಳಂತೆ ಜನರೊಪ್ಪಿಸುವರೆನಗೆ ರಾಜ್ಯಸೂತ್ರಗಳನ್ನು!

ನೀರು, ಮುಗಿಲು, ನೆಲ, ಗಾಳಿಯಾಕಾಶ-ಇವೆಲ್ಲ
ಬಲ್ಲವೆನ್ನ ಶಕ್ತಿಯನು! ಪ್ರಕೃತಿ ನನ್ನಯ ದಾಸಿ.
ನನ್ನ ಶೋಧವು ಪ್ರತಿಸೃಷ್ಟಿ,-ಅಮೃತವನೊಂದುಳಿದು ನನ್ನದೆಲ್ಲ!
ಇದನೆಲ್ಲ ಗುಬ್ಬಿಮಾನವರೊಡನೆ ಪುಕ್ಕಟೆಯಾಗಿ ಹಂಚಿಕೊಡುವದೆ?
ದುಡಿಯಲಿ ಆಳಾಗಿ,-ಪಡೆಯಲಿ ಸಾಮಗ್ರಿಗಳನ್ನು!
ಮಾನವನು ನಾನು; ಸೊಕ್ಕಿದೆ ನನಗೆ! ನಿರ್ಲಿಪ್ಮ ನಿರ್ಜರನಲ್ಲ!

ಕಪ್ಪುಬಣ್ಣದವನು ನನ್ನೆದುರು ಮೈಮುರಿದು ದುಡಿಯುವಾಗ-
ನಾಯಿಯು ಮೂಸದ ಹೇಸಿಗೆಯನ್ನು ಹೊತ್ತು ಹೊತ್ತು ತರುವಾಗ-
ನನಗೆ ಹೊಳೆಯುವದೊಮ್ಮೊಮ್ಮೆ,-ನಾನು ಮಾಡಿದುದು ತಪ್ಪೆಂದು.
ಹುಲುಸಾಗಿ ತಿಂದು ಮದಿರೆಯ ಕುಡಿದು ನಾನು ಮನಬಂದಂತೆ ಕುಣಿವಾಗ-
ಹಗಲೆಲ್ಲ ದುಡಿದು ಹಣ್ಣಾಗಿ ಮತ್ತೆ ಹಡಗವ ನಡೆಸಲವನು ನಿಂತಿರಲು-
ಕಣ್ಣು ಮುಚ್ಚಿ ಯಂತ್ರದ ಮೇಲೆ ಕೈಯಿಟ್ಟು ಮನೆಯ ಮಂತ್ರವ ಜಪಿಸುತಿರಲು,-
ನನಗೆನಿಸುವದು ಕ್ಷಣಕ್ಷಣಕೆ,-ನಾನು ಮಾಡುವದು ತಪ್ಪೆಂದು.
ಪ್ರೀತಿಯೆಲ್ಲ ಪ್ರೇತವಾಗಿ ಪ್ರೇಮವೆಲ್ಲ ಕಾಮವಾಗಿ, ಒಗೆತನವೆಲ್ಲ ಹಗೆತನವಾಗಿ
ಪರಿಣಮಿಸಿದಾಗ,-ತಲೆಯೆಲ್ಲ ಭ್ರಮಿಸಿದಾಗ-
ಅರೆನಿಮಿಷ ಕಂಪಿಸುವದೆದೆಯೆಲ್ಲ,-ನಾನು ಮಾಡಲಿಹುದು ತಪ್ಪೆಂದು.

ಮತ್ತೆ ಎಚ್ಚರಿದು ನೋಡುವೆನು ನನ್ನ ಹಡಗವನ್ನು.
ಮುನ್ನೀರನೆಂತು ಭೇದಿಸಿ ಪಯಣ ಬೆಳೆಸಿದೆ ನೋಡು!
ಈ ಮಹಾದ್ಭುತವ ಬಿಟ್ಟು ವಿನಯದಿಂದಿರಬೇಕೆ?
ಆಗದು! ಅದಾಗದು! ದೈವಪರೀಕ್ಷೆಯಾಗಿಬಿಡಲಿ!
ಹೊನ್ನಿನ ಗಟ್ಟಿಯಂತೆ ಗಟ್ಟಿಯಾಗಿದೆ ನನ್ನ ದೈವವಿಲ್ಲಿಯವರೆಗೆ!
ಅದು ಪೊಳ್ಳಿದ್ದರೆ,-ಹಾಗೊಮ್ಮೆ ಅನುಭವ ಬರಲಿ!
*****

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...