Home / ಕವನ / ಕವಿತೆ / ಕಪ್ತಾನ

ಕಪ್ತಾನ

ಹಿಂಸಿಸುವರು ನನ್ನನ್ನು ಸಾಮ್ರಾಜ್ಯವಾದಿಯೆಂದು:
ದೂಷಿಸುವರು ನನ್ನನ್ನು ಮಹಾಪಾತಕಿಯೆಂದು.
ಶಕ್ತಿಹೀನರ ಉಕ್ತಿಗಳಿವು, ಬಲವಂತರ ಬಲ್ನುಡಿಯಲ್ಲ!
ಪಂಜರದಿಂದ ಇಲಿಯನ್ನು ಹಿಡಿದ ಬೆಕ್ಕಿಗೆ ಹೇಳಿರಿ-ತಿನ್ನದಿರೆಂದು.
ಆನೆಯ ತಲೆ-ಮುತ್ತನುದುರಿಸಲು ಕಾಲೆತ್ತಿದ ಸಿಂಹಕುಸಿರಿರಿ-ಸೊಕ್ಕದಿರೆಂದು.

ಹುಲ್ಲೆಯ ಹಿಡಿದ ಹುಲಿಯ ರಂದಬಿಸಿರಿ-ಬಿಟ್ಟುಬಿಡೆಂದು.
ಹುಚ್ಚುಮಾತಿದು! ಬಲವಿದ್ದರೆ ಗುದ್ದು,-ಇಲ್ಲದಿರೆ ಗುದ್ದಿದೆನಿದೊ!
ಜೀವವ ಹಿಂಡಿ ಬದುಕುವೆಸಕ ಸಹಜವೆಂಬುದ ತಿಳಿಯದಿಹರೆ?

ಪ್ರಭುತ್ವವನೆಂತು ಬಿಡಲಿ? ರಾಜ್ಯವನೆಂತು ಒಲ್ಲೆನ್ನಲಿ?
ಒಲ್ಲೆಂದರೆ ಬಂದು ಪಾದಕೆ ಬೀಳುವರು ರಾಜಾಧಿರಾಜರು,
ತೆರವಾದ ಕಿರೀಟಗಳು ಬಂದು ಮೆರೆಯುವವೆನ್ನ ತಲೆಯ ಮೇಲೆ,
ಗತಿಗೆಟ್ಟ ರಾಜ್ಯಗಳಾಮಂತ್ರಿಸುವವೆನ್ನನಾಳಲಿಕ್ಕೆ-
ಗೊಂಬೆಗಳಂತೆ ಜನರೊಪ್ಪಿಸುವರೆನಗೆ ರಾಜ್ಯಸೂತ್ರಗಳನ್ನು!

ನೀರು, ಮುಗಿಲು, ನೆಲ, ಗಾಳಿಯಾಕಾಶ-ಇವೆಲ್ಲ
ಬಲ್ಲವೆನ್ನ ಶಕ್ತಿಯನು! ಪ್ರಕೃತಿ ನನ್ನಯ ದಾಸಿ.
ನನ್ನ ಶೋಧವು ಪ್ರತಿಸೃಷ್ಟಿ,-ಅಮೃತವನೊಂದುಳಿದು ನನ್ನದೆಲ್ಲ!
ಇದನೆಲ್ಲ ಗುಬ್ಬಿಮಾನವರೊಡನೆ ಪುಕ್ಕಟೆಯಾಗಿ ಹಂಚಿಕೊಡುವದೆ?
ದುಡಿಯಲಿ ಆಳಾಗಿ,-ಪಡೆಯಲಿ ಸಾಮಗ್ರಿಗಳನ್ನು!
ಮಾನವನು ನಾನು; ಸೊಕ್ಕಿದೆ ನನಗೆ! ನಿರ್ಲಿಪ್ಮ ನಿರ್ಜರನಲ್ಲ!

ಕಪ್ಪುಬಣ್ಣದವನು ನನ್ನೆದುರು ಮೈಮುರಿದು ದುಡಿಯುವಾಗ-
ನಾಯಿಯು ಮೂಸದ ಹೇಸಿಗೆಯನ್ನು ಹೊತ್ತು ಹೊತ್ತು ತರುವಾಗ-
ನನಗೆ ಹೊಳೆಯುವದೊಮ್ಮೊಮ್ಮೆ,-ನಾನು ಮಾಡಿದುದು ತಪ್ಪೆಂದು.
ಹುಲುಸಾಗಿ ತಿಂದು ಮದಿರೆಯ ಕುಡಿದು ನಾನು ಮನಬಂದಂತೆ ಕುಣಿವಾಗ-
ಹಗಲೆಲ್ಲ ದುಡಿದು ಹಣ್ಣಾಗಿ ಮತ್ತೆ ಹಡಗವ ನಡೆಸಲವನು ನಿಂತಿರಲು-
ಕಣ್ಣು ಮುಚ್ಚಿ ಯಂತ್ರದ ಮೇಲೆ ಕೈಯಿಟ್ಟು ಮನೆಯ ಮಂತ್ರವ ಜಪಿಸುತಿರಲು,-
ನನಗೆನಿಸುವದು ಕ್ಷಣಕ್ಷಣಕೆ,-ನಾನು ಮಾಡುವದು ತಪ್ಪೆಂದು.
ಪ್ರೀತಿಯೆಲ್ಲ ಪ್ರೇತವಾಗಿ ಪ್ರೇಮವೆಲ್ಲ ಕಾಮವಾಗಿ, ಒಗೆತನವೆಲ್ಲ ಹಗೆತನವಾಗಿ
ಪರಿಣಮಿಸಿದಾಗ,-ತಲೆಯೆಲ್ಲ ಭ್ರಮಿಸಿದಾಗ-
ಅರೆನಿಮಿಷ ಕಂಪಿಸುವದೆದೆಯೆಲ್ಲ,-ನಾನು ಮಾಡಲಿಹುದು ತಪ್ಪೆಂದು.

ಮತ್ತೆ ಎಚ್ಚರಿದು ನೋಡುವೆನು ನನ್ನ ಹಡಗವನ್ನು.
ಮುನ್ನೀರನೆಂತು ಭೇದಿಸಿ ಪಯಣ ಬೆಳೆಸಿದೆ ನೋಡು!
ಈ ಮಹಾದ್ಭುತವ ಬಿಟ್ಟು ವಿನಯದಿಂದಿರಬೇಕೆ?
ಆಗದು! ಅದಾಗದು! ದೈವಪರೀಕ್ಷೆಯಾಗಿಬಿಡಲಿ!
ಹೊನ್ನಿನ ಗಟ್ಟಿಯಂತೆ ಗಟ್ಟಿಯಾಗಿದೆ ನನ್ನ ದೈವವಿಲ್ಲಿಯವರೆಗೆ!
ಅದು ಪೊಳ್ಳಿದ್ದರೆ,-ಹಾಗೊಮ್ಮೆ ಅನುಭವ ಬರಲಿ!
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...