Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಗಸ್ಟ ೨೧, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಗಸ್ಟ ೨೧, ೧೯೪೨

ಪ್ರೀತಿಯ ಕಿಟಿ,

ನಮ್ಮ ಅಡಗುತಾಣದ ಮುಖದ್ವಾರ ಯಾರಿಗೂ ಕಾಣದಂತೆ ರಹಸ್ಯವಾಗಿತ್ತು. ಹೊರ ಬಾಗಿಲಿನ ಮುಂಭಾಗದಲ್ಲಿ ಕಪಾಟೊಂದನ್ನು ಇಡುವುದು ಒಳ್ಳೆಯದೆಂದು ಕ್ರೇಲರ್ ಯೋಚಿಸಿದ್ದರು. [ಯಾಕೆಂದರೆ ಹಲವಾರು ಮನೆಗಳು ಸೈಕಲ್ಲುಗಳ ಕಾರಣದಿಂದ ಕಂಡುಹಿಡಿಯಲ್ಪಟ್ಟಿದ್ದವು.] ಆದರೆ ನಿಜಕ್ಕೂ ಈ ಕಪಾಟನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊತ್ತೊಯ್ಯಬಹುದಾಗಿದ್ದು, ಬಾಗಿಲಿನಂತೆ ತೆರೆಯಬಹುದಾಗಿತ್ತು.

ವೊಸನ್ ಈ ಎಲ್ಲವನ್ನೂ ಮಾಡಿದರು. ಗುಪ್ತಸ್ಥಾನಕ್ಕೆ ಬರಲು ಅವರಿಗೆ ಬಿಡಲಾಗಿತ್ತು. ಅವರು ಇದಕ್ಕಿಂತ ಹೆಚ್ಚು ಸಹಾಯ ಮಾಡಲಾರರು. ನಾವು ಕೆಳಗಡೆ ಹೋಗಬೇಕೆಂದರೆ ಮೊದಲು ತಲೆ ಬಗ್ಗಿಸಿ ನಡೆದು ನಂತರ ಹಾರಿ ಜಿಗಿಯಬೇಕಿತ್ತು. ಮೊದಲ ಮೂರು ದಿನಗಳೂ ನಮಗೆಲ್ಲ ಹಣೆಯಲ್ಲಿ ದೊಡ್ಡ ದೊಡ್ಡ ಗಂಟಿನ ಬಾವುಗಳೆದ್ದವು. ಕಾರಣವೆಂದರೆ ಹಾಗೆ ಹಾರುವಾಗ ನಾವು ನೇರವಾಗಿ ಕೆಳಗಿನ ಬಾಗಿಲಿಗೆ ರಭಸವಾಗಿ ಹೋಗಿ ದೂಡಲ್ಪಡುತ್ತಿದ್ದೆವು. ಆದರೆ ಈಗ ಬಟ್ಟೆಯೊಂದಕ್ಕೆ ಮರದ ತೊಗಟೆಯನ್ನು ಹಣೆದು ಬಾಗಿಲಿನ ಮೇಲ್ತುದಿಗೆ ತೂಗುಹಾಕಿ ಮೊಳೆಹೊಡೆದಿದ್ದೇವೆ. ಅದು ಸಹಕಾರಿಯಾದೀತೇ… ನೋಡೋಣ!

ನಾನು ಈಗ ಹೆಚ್ಚು ಕೆಲಸ ಮಾಡುವುದಿಲ್ಲ. ಸೆಪ್ಟೆಂಬರವರೆಗೂ ನನಗೆ ನಾನೇ ರಜೆ ಕೊಟ್ಟುಕೊಂಡಿದ್ದೇನೆ. ಡ್ಯಾಡಿ ನನಗೆ ಪಾಠ ಹೇಳಿಕೊಡುತ್ತಿದ್ದಾರೆ. ನಾನೆಷ್ಟೊಂದನ್ನು ಮರೆತಿದ್ದೇನೆ ಎಂಬುದೇ ನನಗೆ ಆಶ್ಚರ್ಯ! ಇಲ್ಲಿಗೆ ಬಂದ ಮೇಲೆ ನಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಿದೆ. ವ್ಯಾನ್ಡ್ಯಾನ್ ಮತ್ತು ನಾನು ಆಗಾಗ ಪರಸ್ಪರ ಜಗಳವಾಡುವುದನ್ನು ರೂಢಿಸಿಕೊಂಡಿದ್ದೇವೆ. ಇದಕ್ಕೆ ವ್ಯತಿರಿಕ್ತವಾಗಿ ಮಾರ್‍ಗೊಟ್‌ಳನ್ನು ಅವರು ಬಹಳ ಮೆಚ್ಚಿಕೊಳ್ಳುತ್ತಾನೆ. ಮಮ್ಮಿ ಕೆಲವೊಮ್ಮ ನನ್ನನ್ನು ಚಿಕ್ಕ ಮಕ್ಕಳಂತೆ ನಡೆಸಿಕೊಳ್ಳುವುದು ನನಗೆ ಸಹಿಸಲಾಗುವುದಿಲ್ಲ. ಉಳಿದಂತೆ ಎಲ್ಲ ಸಂಗತಿಗಳು ಚೆನ್ನಾಗಿ ನಡೆಯುತ್ತಿದೆ. ನನಗಿನ್ನೂ ಪೀಟರ ಎಂದರೆ ಇಷ್ಟವಾಗುವುದಿಲ್ಲ. ಆತ ತುಂಬಾ ಬೇಸರ ತರಿಸುತ್ತಾನೆ. ಅರ್ಧಕ್ಕಿಂತ ಹೆಚ್ಚು ವೇಳೆ ತನ್ನ ಹಾಸಿಗೆಯ ಮೇಲೆಯೇ ಬಿದ್ದುಕೊಂಡಿರುತ್ತಾನೆ. ಅಲ್ಪಸ್ವಲ್ಪ ಬಡಿಗತನ ಮಾಡುತ್ತಾನೆ. ಮತ್ತೆ ಇನ್ನೊಂದು ಸಣ್ಣನಿದ್ದೆ ಹೊಡೆಯುತ್ತಾನೆ. ಎಂತಹ ಹೆಡ್ಡ!

ಇದು ತುಂಬಾ ಸುಂದರವಾದ ವಾತಾವರಣ. ಬೇರೆಲ್ಲದರ ಹೊರತಾಗಿ ತೆರೆದ ಕಿಟಕಿಯಿಂದ ನುಸುಳುವ ಸೂರ್ಯ ಕಿರಣಗಳನ್ನು ಆಸ್ವಾದಿಸುತ್ತಾ ನಾವು ಅಟ್ಟದ ಮೇಲಿನ ಶಿಬಿರದ ಹಾಸಿಗೆಗಳಲ್ಲಿ ಬಿದ್ದುಕೊಳ್ಳುವುದನ್ನು ಚೆನ್ನಾಗಿ ಮಾಡಬಲ್ಲೆವು.

ನಿನ್ನ
ಆನ್

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...