Home / ಕಥೆ / ಸಣ್ಣ ಕಥೆ / ಬೆಟ್ಟದ ಒಡೆಯರು

ಬೆಟ್ಟದ ಒಡೆಯರು

ಬೋಳತಲೆ ಚಾಮರಾಜ ಒಡೆಯರರ ತರುವಾಯ ಬೆಟ್ಟದ ಒಡೆಯರೆಂದು ಪ್ರಸಿದ್ಧರಾದ ಒಡೆಯರು ಪಟ್ಟಕ್ಕೆ ಬಂದರು. ಇವರು ಶೂರರಾಗಿದ್ದರು; ಆದರೆ ಮುಂದಾಲೋಚನೆಯಿಲ್ಲದೆ ದುಡುಕುತ್ತಿದ್ದರು. ಮೃದು ಸ್ವಭಾವವಿದ್ದರೂ ನಿದಾನವಿರಲಿಲ್ಲ. ಇವರು ಎರಡು ವರ್ಷಗಳಾಳ್ವಿಕೆಯಲ್ಲಿ ಬೊಕ್ಕಸದಲ್ಲಿದ್ದ ಹಣವೆಲ್ಲವನ್ನೂ ವೆಚ್ಚ ಮಾಡಿಬಿಟ್ಟರು. ಶ್ರೀರಂಗಪಟ್ಟಣಕ್ಕೆ ಸಲ್ಲಬೇಕಾಗಿದ್ದ ಪೊಗದಿಯು, ಹಾಗೆಯೇ ಉಳಿದುಹೋಯಿತು. ಆಗ ಅರಮನೆಯ ಹಿರಿಯರು ಬೆಟ್ಟದ ಒಡೆಯರನ್ನು ಪಟ್ಟದಿಂದ ತಪ್ಪಿಸಿ ರಾಜ ಒಡೆಯರಿಗೆ ಪಟ್ಟವನ್ನು ಕಟ್ಟುವ ಆಲೋಚನೆ ಮಾಡಿದರು. ದುರಾಲೋಚನಾ ಪರರಾದ ರಾಜ ಒಡೆಯರು ಸಾಲ ತೀರುವಂತೆಯು ಹಣ ಬರವಂತೆಯೂ ಮುಖ್ಯಸ್ಥರಿಂದ ಮಾತು ತೆಗೆದುಕೊಂಡು ಪಟ್ಟಕ್ಕೊಪ್ಪಿದರು.

ಬೆಟ್ಟದ ಒಡೆದುರನ್ನು ಕೊಲೆಮಾಡಿಸಬೇಕೆಂದು ಯಾರೂ ಆಲೋಚಿಸಲಿಲ್ಲ. ರಾಜ ಒಡೆಯರಿಗೆ ಪಟ್ಟ ಕಟ್ಟುವ ನಿಶ್ಚಯವು ನಡೆಯುತ್ತಿದ್ದಾಗಲೇ ಬೆಟ್ಟದ ಒಡೆಯರು ಅಲ್ಲಿಗೆ ಬಂದರು. ಅಲ್ಲಿಯ ಪರಿವಾರದವರು ಕೂಡಲೆ ವಿನೀತರಾಗಿ ಆ ನಿಶ್ಚಯವನ್ನು ಅರಿಕೆ ಮಾಡಿ “ದೇಶದ ಸಾಲವನ್ನು ತೀರಿಸಲು ಈ ನಿಶ್ಚಯವು ಅವಶ್ಯವಾಯಿತು. ಇದರಿಂದ ತಾವು ಖಿನ್ನರಾಗಬಾರದು. ತಾವು ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯ ಸಭೆಯಲ್ಲಿ ಮೈಸೂರಿನ ಗೌರವವನ್ನುಳಿಸುತ್ತ ಇರಬಹುದು ; ಅಧವಾ ತಮಗೆ ಸ್ವತಂತ್ರವಾಗಿರಲು ಇಷ್ಟವಾದರೆ ಮೈಸೂರಿನಲ್ಲಿಯೇ ತಾವೂ ಇರಬಹುದು” ಎಂದು ಸೂಚಿಸಿದರು. ಆಗ ಬೆಟ್ಟದ ಒಡೆಯರಿಗೆ ಕೋಪ ಬಂದಿತು. “ನಾವು ಶ್ರೀರಂಗಪಟ್ಟಣದಲ್ಲಿ ಇರುವುದಿಲ್ಲ, ಮೈಸೂರಿನಲ್ಲಿಯೂ ಇರುವುದಿಲ್ಲ. ನಮಗೇನೂ ಬೇಡ” ಎಂದುಬಿಟ್ಟು ಆ ಸ್ಥಳದಿಂದ ಹೊರಟುಹೋದರು.

ಈ ಸಮಾಚಾರವನ್ನು ಕೇಳಿದಕೂಡಲೆ ಕಾರುಗಹಳ್ಳಿಯ ಪಾಳೆಯಗಾರನು ತನಗೆ ಒಳ್ಳೆ ಸಮಯ ಬಂದಿತೆಂದು ನೆನೆದು ಸೈನ್ಯವನ್ನು ನಡೆಸಿಕೊಂಡು ಮೈಸೂರಿನಮೇಲೆ ಅಕಸ್ಮಾತ್ತಾಗಿ ದಂಡೆತ್ತಿ ಬಂದು ಮುತ್ತಿದನು. ಬೆಟ್ಟದ ಒಡೆಯರು ಎಲ್ಲವನ್ನೂ ಬಿಟ್ಟವರಂತೆ ತಿರಸ್ಕಾರಭಾವದಿಂದ ಒಂದೆಡೆಯಲ್ಲಿ ಶತಪಥ ತಿರುಗುತ್ತಿದ್ದರು. ಕೋಟೆಯ ಒಳಗೆ ಗಜಿಬಿಜಿ, ಕೋಟೆಯು ಹೊರಗಡೆ ಶತ್ರುಗಳ ಹಾವಳಿ. ಆದರೂ ಬೆಟ್ಟದ ಒಡೆಯರು ತಟಸ್ಥರಾಗಿದ್ದರನ್ನು ಕಂಡು ಹೆಂಗಸೊಬ್ಬಳು ಹತ್ತಿರ ಹೋಗಿ “ಇದೇನು ಈ ಕಾಲದಲ್ಲಿಯೂ ಒಡೆಯರ ವಂಶದಲ್ಲಿ ಹುಟ್ಟಿದವರು ತಟಸ್ಟರಾಗಿರುವದೇ!” ಎಂದು ಮೂದಲಿಸಿದಳು. ತಕ್ಷಣವೇ ಬೆಟ್ಟದ ಒಡೆಯರು ಒಂದು ಗಂಡು ಕೊಡಲಿಯನ್ನು ಎತ್ತಿಕೊಂಡು ತನ್ನ ಸೈನ್ಯವನ್ನು ಕೂಗಿ ಒಟ್ಟು ಕೂಡಿಸಿ” ಹಿಂದೆ ಬನ್ನಿ ಎಂದು ಕೋಟೆಯ ಬಾಗಿಲ ಕಡೆಗೆ ನುಗ್ಗಿದರು. ಬಾಗಿಲ ಆಗಣಿ ಹಾಕಿತ್ತು. ಬೆಟ್ಟದ ಒಡೆಯರು ತಮ್ಮ ಕೊಡಲಿಯಿಂದ ಒಂದೇ ಏಟು ಹೊಡೆದರು. ಬಾಗಿಲು ತೆರೆಯಿತು. ತರುವಾಯ ಒಡೆಯರು ತಮ್ಮ ಭಟರೊಡನೆ ಶತ್ರುಗಳ ಮಧ್ಯೆ ನುಗ್ಗಿದರು, ವೀರಾವೇಶದಿಂದ ಯುದ್ದ ಮಾಡಿ ಅವರನ್ನು ಸೋಲಿಸಿ ಅಟ್ಟಿ ಬಿಟ್ಟರು. ಈ ರೀತಿಯಲ್ಲಿ ಮುತ್ತಲು ಬಂದ ಶತ್ರುಗಳು ತಾವೇ ಸೋತು ಪಲಾಯನರಾದರು.
*****
[ವಿಲ್ಕ್ಸ್‌ ಸಂ೧; ಪುಟ ೨೫]

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...