Home / ಕವನ / ಕವಿತೆ / ಆಫ್ರಿಕ

ಆಫ್ರಿಕ

ಕೆಂಪು ಸಮುದ್ರದ ನೀರು ಕತ್ತಲೆಯಂತೆ ಕರ್‍ರಗಿರಲು
ಆಫ್ರಿಕದ ಕಾಡಿಗೆಯ ಮೇಲೆ ಸಂಜೆಗೆಂಪು ಮೂಡಿತ್ತು.
ಕರಿಬೆಟ್ಟಗಳ ಹೊದರಿನಲ್ಲಿ ಹುದುಗುತ್ತಿದ್ದನು ರವಿಯು.
ಅಬಿಸೀನಿಯದ ಕೊಲೆ, ನಿಗರ್ವಿಗಳ ದಾಸ್ಯ, ಸುಮಾಲಿಗಳ ಕೊರಗು,-
ಕಪ್ಪುಹಚ್ಚುವ ಕೃತಿಗಳಿವು,-ರಕ್ತವರ್ಣದವು!
ಆಫ್ರಿಕಖಂಡದ ಜನರ ಮೆಯ್ಯಲ್ಲಿಲ್ಲ ಮಾಂಸಖಂಡ,-
ಗುಲಾಮರ ಲೋಕವದು-ಮಾನವನು ಮೆಟ್ಟಿದ ಪಾತಾಳವದು-
ಅಂಧಂತಮಸ್ಸದು–ಕೊಲೆಗಡಕರಡುಮನೆಯದು-
ಅಲ್ಲಿ ಮುಳುಗುವ ರವಿಯು ಕೂಡ ರಕ್ತದ ಮಡುವಿನಲೀಸುತಿದ್ದ!

ಇ೦ತಿರಲು ಆಫ್ರಿಕದ ಮುಳುಗು,-ಮೂಡಿತೊಂದಾಸೆಯಲ್ಲಿ.
ಬೆಳ್ಳಿಯ ಕಡ್ಡಿಯನು ಬಿಳಿ ಬೆಳಕಿನಲೆದ್ದಿ ಬರೆದ ಗೆರೆಯಂತೆ
ಮುಗಿಲ ಪಟದ ಮೇಲೆ ವಿರಾಜಿಸಿದ ಬಿದಿಗೆಯ ಚಂದ್ರಮನು.
ಕಳೆಯೇರಿದನು, ಕರೆತಂದನು ಕೆಲವು ಚಿಕ್ಕೆಗಳನು,
ಹಿಡಿದ ಕೊಂಬಿನಲ್ಲಿ ಬಿಂಬಿಸಿದನು ಬೆಳಕನೆಲ್ಲ,
ಆಸೆಯಿದೆಯೆಂದನು, ಕೃಷ್ಣೋದಕದ ಹೃದಯವ ಕೂಡ
ಭೇದಿಸಿದನು ಹೊಳೆವ ಕಿರಣಗಳ ಕೂರಲಗಿನಿಂದ.

ಅರೆನಿಮಿಷ ಬೆಳಗಿರಲಿಲ್ಲ,-ಕಳೆಗುಂದಿದನು ಚಂದ್ರ.
ಕಂದಿತೆಲ್ಲ ಅವನ ಬಣ್ಣ! ಕೇದಿಗೆಯ ಬಿಳುಪು ಬಂತು:
ಬಾಗಿದನು, ಮೊಗ ತಗ್ಗಿಸಿದನು, ಹುದುಗಿದನು ಬೆಟ್ಟಗಳ ಹೊದರಿನಲ್ಲಿ.
ಹೆದರಬೇಡ ಆಫ್ರಿಕವೆ! ಬರಬಹುದು ನಿನ್ನ ಹುಣ್ಣಿಮೆ ನಾಳೆ.
ಹುಣ್ಣಿಮೆಯಿದ್ದಲ್ಲಿ ಅಮಾವಾಸ್ಯ,-ಅಮಾವಾಸ್ಯವಿದ್ದಲ್ಲಿ ಹುಣ್ಣಿಮೆ;
ಇಂತಿಹುದು ಕಾಲಚಕ್ರ, ಕದಲಬಹುದು ನಿನ್ನ ಕತ್ತಲೆ!
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...