Home / ಕವನ / ಕವಿತೆ / ಬಿಡಿ ಹಾಡುಗಳು

ಬಿಡಿ ಹಾಡುಗಳು

ಬೂದನಿಗೆ ಬಾಸಿಂಗ, ಭೂಮಿ ತಾಯಿಗೆ ದಂಡೆ
ಸಾಲ ಶರಣರಿಗೆ ಸರಮಾಲೆ || ಕಟಿಗೊಂಡು
ಮಾದಯ್ಯ ಗೆದ್ದ ಕೈಲಾಸ ೧

ಶಿವಶಿವ ಎಂದಾರ, ಸಿಡಿಲೆಲ್ಲ ಬಯಲಾಗಿ
ಕಲ್ಲ ಬಂದೆರಗಿ ಕಡೆಗಾಗಿ | ಎಲೆ ಮನವ
ಶಿವನೆಂಬ ಸಬುದ ಬಿಡಬ್ಯಾಡ ೨

ಹಂತಿ ಹೊಡೆಯುತ ನೆನೆದೆ, ಸಂತಸದಿ ಶರಣರನು
ಕಂತುಹರ ನಿನ್ನ ಭಕ್ತರನು | ನೆನೆಸಿದರ
ಸಂತಸದಿ ನೀಡೋ ವರಶಿವನೆ ೩

ಹಂತಿಪದಕೊಂದಿಲ್ಲ, ನಿಂತು ಬೆನಕನ ಪೂಜೆ
ಹಂತಿಯೋಳು ಪೂಜೆ ಶರಣರಿಗೆ | ಒಕ್ಕಲಿಗ
ಸ್ವಂತ ನೆನೆಯೆಂದ ಗಣಪನಿಗೆ ೪

ಬೇಡ ಬೇಟೆಗೆ ಹೋಗಿ, ಬೆಲ್ಲ ಪುತ್ತರಿ ಕೊಯ್ದ
ಬೇಡ ಕನ್ನಯ್ಯ ಶಿವಪೂಜೆ | ಮಾಡಿದರ
ನಾಡೆಲ್ಲ ನೋಡು ಶಿವರಾತ್ರಿ ೫

ಕನ್ನ ಬೇಟೆಯನಾಡಿ, ಹೊನ್ನಬೆಟ್ಟವ ತಿರುಗಿ
ಪನ್ನಂಗಧರಗೆ ಎಡೆಮಾಡಿ | ನರಿಕೂಗಿ
ಸಣ್ಣ ರಾಸ್ಯುಕ್ಕಿ ಕಣತುಂಬಿ ೬

ಹರನ ಶಿಖರದ ಮೇಲೆ, ಸಿರಿಗಂಧದ ಮರಹುಟ್ಟಿ
ಕಿರಿಟದೊಳೆರಡು ಗಿಳಿಕೂತು | ಓದ್ಯಾವ
ಹರಳಯ್ಯನೆಂಬು ಹಳೆಗಥೆಯ ೭

ಆರಾಣದಡಿವ್ಯಾಗ, ಆರು ಕಾಲಿನ ಮಂಚ
ನಾಗರ ಸರಪು ತೆಲೆಗಿಂಬು | ಶಿವಲಿಂಗ
ಹ್ಯಾಂಗ ಗವಿದಾವ ಸವನಿದ್ದೆ ೮

ಇಂಜಾಣದಡಿವ್ಯಾಗ, ಮಂಜ ಬಿದ್ದವ ತಾಯಿ
ಮಂಜಲ್ಲ ಮಳೆಯ ಸರುವಂದೆ | ಶಿವಲಿಂಗ
ಕೆಂಜಡೆ ಬಿಚ್ಯಾರ ಬಿಸಲೀಗೆ ೯

ಹರೆಯ ಹೊತ್ತೀಲೆದ್ದು, ನರಿಯ ಮಾರಿಯ ಕಂಡೆ
ತಿರುಗಾಡದ ಕಂಡೆ ಪವಳ್ಯಾಗ | ಶಿವಲಿಂಗ
ಸಾಲ ಸಂಪೀಗಿ ವನದಾಗ ೧೦

ಗುಡ್ಡದ ಮಲ್ಲಯ್ಯ, ಗುಡಿಯೆಲ್ಲ ಬಂಗಾರ
ಹಾಸೀಗಿ ಗಲ್ಲು ಹವಳಾವು | ಮಲ್ಲಯ್ಯ
ಬೀಸಣಿಕೆಗೆಲ್ಲ ಬಿಡಿ ಮುತ್ತು ೧೧

ರಾಗಿ ಬಣ್ಣದ ಕುದುರಿ, ರಾಜೇಕ ದೊಡ್ಡದು
ರಾಜರೊಳುರಾಜ ಮಳೆರಾಜ, ಬರುವಾಗ
ರಾಜೀವ ಕೈಯ ಮುಗಿದಾವ ೧೨

ಕೆಂದಗುದುರಿಯನೇರಿ, ಕೆರಿಯಾಗ ನಿಂತವನ್ಯಾರ
ಅಂಜತೀನಯ್ಯ ಹೆಸರ್ಹೇಳ | ಲೋಕಽದ
ಮಂಜಿನಾಗಿರುವ ಮಳೆರಾಜ ೧೩

ಹಚ್ಚನ್ನ ಹರಿನಾಮ, ಮುತ್ತಿನ ಗೋಪಾಳ
ಹೊತ್ತೇರಿ ಬರುವ ಇವನ್ಯಾರ, ಕೆರೂರ
ಗಚ್ಚಿನ ಗುಡಿಯ ಕರಿಹನುಮ ೧೪

ಕಪ್ಪೂರ ಬೆಳಕೀಲೆ, ಗುಗ್ಗೂಳ ಹೊಗೆಯಽಲಿ
ಅಪ್ಪ ರಾಷಣ್ಣ ಬೆವತಾನ, ಪೂಜ್ಯಾರಿ
ಮುತ್ತೀನ ಚೌರಿ ನೀ ಬೀಸೊ ೧೫

ಏಳ ಯಲ್ಲವ ತಾಯಿ, ಎಷ್ಟೊತ್ತ ಮಲಗೀದೆ
ಹೂವೆಂಜಲಾಗಿ ಹುಳಮುಟ್ಟಿ, ಕೊಳ್ಳದ
ನೀರೆಂಜಲಾಗಿ ಗಿಳಿ ಕುಡಿದು ೧೬

ಶರಣರ ನೆನದಽರ, ಸರಗೀಯ ಇಟ್ಹಾ೦ಗ
ಅರಳ ಮಲ್ಲೀಗಿ ಮುಡಿದ್ಹಾಂಗ, ಕಲ್ಯಾಣ
ಶರಣರ ನೆನೆಯೋ ಎಲೆ ಮನವ ೧೭

ದೈವ ದೇವರ ಹಂತಿ, ಭವದೊಳಗೆ ನಮ್ಹಂತಿ
ತೇದುಂಡ ಹಂತಿ ನಂಬಾಳು | ಒಕ್ಕಲಿಗ
ಕೋದ ತೆನಿಹಂತಿ ಜನುಮಾಕೊ ೧೮
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...