Home / ಕವನ / ಕವಿತೆ / ಬಿಡಿ ಹಾಡುಗಳು

ಬಿಡಿ ಹಾಡುಗಳು

ಬೂದನಿಗೆ ಬಾಸಿಂಗ, ಭೂಮಿ ತಾಯಿಗೆ ದಂಡೆ
ಸಾಲ ಶರಣರಿಗೆ ಸರಮಾಲೆ || ಕಟಿಗೊಂಡು
ಮಾದಯ್ಯ ಗೆದ್ದ ಕೈಲಾಸ ೧

ಶಿವಶಿವ ಎಂದಾರ, ಸಿಡಿಲೆಲ್ಲ ಬಯಲಾಗಿ
ಕಲ್ಲ ಬಂದೆರಗಿ ಕಡೆಗಾಗಿ | ಎಲೆ ಮನವ
ಶಿವನೆಂಬ ಸಬುದ ಬಿಡಬ್ಯಾಡ ೨

ಹಂತಿ ಹೊಡೆಯುತ ನೆನೆದೆ, ಸಂತಸದಿ ಶರಣರನು
ಕಂತುಹರ ನಿನ್ನ ಭಕ್ತರನು | ನೆನೆಸಿದರ
ಸಂತಸದಿ ನೀಡೋ ವರಶಿವನೆ ೩

ಹಂತಿಪದಕೊಂದಿಲ್ಲ, ನಿಂತು ಬೆನಕನ ಪೂಜೆ
ಹಂತಿಯೋಳು ಪೂಜೆ ಶರಣರಿಗೆ | ಒಕ್ಕಲಿಗ
ಸ್ವಂತ ನೆನೆಯೆಂದ ಗಣಪನಿಗೆ ೪

ಬೇಡ ಬೇಟೆಗೆ ಹೋಗಿ, ಬೆಲ್ಲ ಪುತ್ತರಿ ಕೊಯ್ದ
ಬೇಡ ಕನ್ನಯ್ಯ ಶಿವಪೂಜೆ | ಮಾಡಿದರ
ನಾಡೆಲ್ಲ ನೋಡು ಶಿವರಾತ್ರಿ ೫

ಕನ್ನ ಬೇಟೆಯನಾಡಿ, ಹೊನ್ನಬೆಟ್ಟವ ತಿರುಗಿ
ಪನ್ನಂಗಧರಗೆ ಎಡೆಮಾಡಿ | ನರಿಕೂಗಿ
ಸಣ್ಣ ರಾಸ್ಯುಕ್ಕಿ ಕಣತುಂಬಿ ೬

ಹರನ ಶಿಖರದ ಮೇಲೆ, ಸಿರಿಗಂಧದ ಮರಹುಟ್ಟಿ
ಕಿರಿಟದೊಳೆರಡು ಗಿಳಿಕೂತು | ಓದ್ಯಾವ
ಹರಳಯ್ಯನೆಂಬು ಹಳೆಗಥೆಯ ೭

ಆರಾಣದಡಿವ್ಯಾಗ, ಆರು ಕಾಲಿನ ಮಂಚ
ನಾಗರ ಸರಪು ತೆಲೆಗಿಂಬು | ಶಿವಲಿಂಗ
ಹ್ಯಾಂಗ ಗವಿದಾವ ಸವನಿದ್ದೆ ೮

ಇಂಜಾಣದಡಿವ್ಯಾಗ, ಮಂಜ ಬಿದ್ದವ ತಾಯಿ
ಮಂಜಲ್ಲ ಮಳೆಯ ಸರುವಂದೆ | ಶಿವಲಿಂಗ
ಕೆಂಜಡೆ ಬಿಚ್ಯಾರ ಬಿಸಲೀಗೆ ೯

ಹರೆಯ ಹೊತ್ತೀಲೆದ್ದು, ನರಿಯ ಮಾರಿಯ ಕಂಡೆ
ತಿರುಗಾಡದ ಕಂಡೆ ಪವಳ್ಯಾಗ | ಶಿವಲಿಂಗ
ಸಾಲ ಸಂಪೀಗಿ ವನದಾಗ ೧೦

ಗುಡ್ಡದ ಮಲ್ಲಯ್ಯ, ಗುಡಿಯೆಲ್ಲ ಬಂಗಾರ
ಹಾಸೀಗಿ ಗಲ್ಲು ಹವಳಾವು | ಮಲ್ಲಯ್ಯ
ಬೀಸಣಿಕೆಗೆಲ್ಲ ಬಿಡಿ ಮುತ್ತು ೧೧

ರಾಗಿ ಬಣ್ಣದ ಕುದುರಿ, ರಾಜೇಕ ದೊಡ್ಡದು
ರಾಜರೊಳುರಾಜ ಮಳೆರಾಜ, ಬರುವಾಗ
ರಾಜೀವ ಕೈಯ ಮುಗಿದಾವ ೧೨

ಕೆಂದಗುದುರಿಯನೇರಿ, ಕೆರಿಯಾಗ ನಿಂತವನ್ಯಾರ
ಅಂಜತೀನಯ್ಯ ಹೆಸರ್ಹೇಳ | ಲೋಕಽದ
ಮಂಜಿನಾಗಿರುವ ಮಳೆರಾಜ ೧೩

ಹಚ್ಚನ್ನ ಹರಿನಾಮ, ಮುತ್ತಿನ ಗೋಪಾಳ
ಹೊತ್ತೇರಿ ಬರುವ ಇವನ್ಯಾರ, ಕೆರೂರ
ಗಚ್ಚಿನ ಗುಡಿಯ ಕರಿಹನುಮ ೧೪

ಕಪ್ಪೂರ ಬೆಳಕೀಲೆ, ಗುಗ್ಗೂಳ ಹೊಗೆಯಽಲಿ
ಅಪ್ಪ ರಾಷಣ್ಣ ಬೆವತಾನ, ಪೂಜ್ಯಾರಿ
ಮುತ್ತೀನ ಚೌರಿ ನೀ ಬೀಸೊ ೧೫

ಏಳ ಯಲ್ಲವ ತಾಯಿ, ಎಷ್ಟೊತ್ತ ಮಲಗೀದೆ
ಹೂವೆಂಜಲಾಗಿ ಹುಳಮುಟ್ಟಿ, ಕೊಳ್ಳದ
ನೀರೆಂಜಲಾಗಿ ಗಿಳಿ ಕುಡಿದು ೧೬

ಶರಣರ ನೆನದಽರ, ಸರಗೀಯ ಇಟ್ಹಾ೦ಗ
ಅರಳ ಮಲ್ಲೀಗಿ ಮುಡಿದ್ಹಾಂಗ, ಕಲ್ಯಾಣ
ಶರಣರ ನೆನೆಯೋ ಎಲೆ ಮನವ ೧೭

ದೈವ ದೇವರ ಹಂತಿ, ಭವದೊಳಗೆ ನಮ್ಹಂತಿ
ತೇದುಂಡ ಹಂತಿ ನಂಬಾಳು | ಒಕ್ಕಲಿಗ
ಕೋದ ತೆನಿಹಂತಿ ಜನುಮಾಕೊ ೧೮
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...