Home / ಕವನ / ಕವಿತೆ / ಸೆಲ್ಫೀ ಸಂಭ್ರಮ

ಸೆಲ್ಫೀ ಸಂಭ್ರಮ

ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು
ನಮ್ಮ ನಾಡಿನವರಲ್ಲ ಬಿಡು ಭಂಟನೆ
ಇಂದು ಜುಲೈ ಐದು, ಎರಡುಸಾವಿರದ ಹದಿನೈದು
ಬದುಕಿದ್ದರೆ ಕಾಸರ್‌ಬಾನು, ಅವಳ ಮಗುವಿಗೆ
ಈಗ ಹದಿಮೂರರ ಹರೆಯ ಮೂಡುತ್ತಿತ್ತು.
ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದಿದ್ದರೆ.
ಬಿಸಿಲನಾಡು ಗುಲಬರ್ಗಾದಿಂದ ಗುಳೆಹೋದ
ಹೊಟ್ಟೆಪಾಡಿನ ಹೆಣ್ಣುಮಗಳು ಕೌಸರ್‌ಬಾನು.

ಇಪ್ಪತ್ತೆರಡರ ಹರೆಯದ ತುಂಬು ಗರ್ಭಿಣಿ
ಕೌಸರಳ ಹೊಟ್ಟೆಗೆ ತ್ರಿಶೂಲದಿಂದ ತಿವಿದು
ಮಗುವ ಬಗೆದು ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ಅವರು ನಿನ್ನ ರಕ್ಷೆಯಲ್ಲಿರುವ ಏಜೆಂಟರು.
ತನ್ನ ಮಗುವಿನನೊಂದಿಗೆ ಸೆಲ್ಫೀ ಕ್ಲಿಕ್ಕಿಸಲು
ಕೌಸರ್‌ಬಾನು ಕೈಬೀಸಿ ಕರೆಯುತ್ತಿದ್ದಾಳೆ.
ವಿದೇಶಿಯರ ಅಪ್ಪುಗೆಯಲ್ಲಿ ಸೆಲ್ಫಿಗೆ ಪೊಜು
ಕೌಸರಳೊಂದಿಗೆ ಸೆಲ್ಫೀ ತೆಗೆಸಲು
ನಿನಗೆ ಮುಖವಿದೆಯೇ ಭಂಟನೇ?

ಸಂದರ್ಶನದಲ್ಲಿ “ಮನ್ ಕಿಬಾತ್” ಹೇಳುತ್ತೀ
‘ದಿಲ್ ಕೆ ಅಂದರ’ ಒಮ್ಮೆ ಇಣುಕಿ ನೋಡು
ಹೊಟ್ಟೆ ಸೀಳಿಸಿಕೊಂಡು ಒದ್ದಾಡುತ್ತಿದ್ದಾಳೆ ಕೌಸರ್
ಮಾನ ಪ್ರಾಣ ಉಳಿಸಲು ಮೊರೆಯಿಡುತ್ತಿದ್ದಾಳೆ.
ರಕ್ತದ ಮಡುವಿನಲ್ಲಿ ಉರುಳಾಡುತ್ತಿದ್ದಾಳೆ.
ನಿನ್ನ ಕರ್ಣಗಳೇನು ಕೀವುಡಾದವೇ? ಧೈರ್ಯವಿದ್ದರೆ
ಅವಳೊಂದಿಗೆ ಒಂದು ಸೆಲ್ಫೀ ಕ್ಲಿಕ್ಕಿಸಿ ನೋಡು.
ದುಡಿದು ತಿನ್ನುವ ಕೌಸರಳ ಪಾಡಿದು.
ಶಾಸಕ ಎಹ್ಸಾನ್ ಜಾಫ್ರಿಗೂ ಕೊಂದಿರಿ
ಮಗಳು ತೀಸ್ತಾ ಕಟಕಟೆಗೆ ಕರೆಯುತ್ತಿದ್ದಾಳೆ.
ಗುಜುರಾತಿನ ಸೇತುವೆಯಡಿ ಶವದಬೆಟ್ಟವಿದೆ
ಆ ಕೊಳೆತ ಮೂಳೆಗಳು ಕೈಬೀಸಿ ಕರೆಯುತ್ತಿವೆ.
ಅವರೊಂದಿಗೆ ಒಂದು ಬಾರಿ ಒಂದೇ ಒಂದು ಬಾರಿ
ಸೆಲ್ಫೀ ಕ್ಲಿಕ್ಕಿಸಿ ನೋಡು ಚಹಾದಂಗಡಿಯವನೇ.

ಬೆಸ್ಟ್ ಬೇಕರಿಯ ಸುಟ್ಟ ಶವಗಳ ಹೊಗೆಯಲ್ಲಿ
ಕೆಟ್ಟ ಘಮಟು ವಾಸನೆಗೆ ಹೊಟ್ಟೆಯಲ್ಲಿ ತಳಮಳ
ಕೋಮು ಗಲಭೆಯಲಿ-ನೊಂದವರ ಕಣ್ಣೀರು
ಇಂದಿಗೂ ನಿಂತಿಲ್ಲ ದುಃಖದಲೆಗಳ ಅಬ್ಬರ
ನಿನ್ನ ಸೆಲ್ಫೀಯಲ್ಲಿ ಅವರ ಕಣ್ಣೀರ ಚಿತ್ರ
ಹೇಳಿ ನಾಯಕರೆ ಮೂಡಿ ಬರಲಾರದೇ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...