Home / ಲೇಖನ / ಇತರೆ / ಎಫ್ ಎಮ್ ರೇಡಿಯೋ ಕತೆ

ಎಫ್ ಎಮ್ ರೇಡಿಯೋ ಕತೆ

ಹೊಸ ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳ ಹರಾಜು ಪ್ರಕ್ರಿಯೆಯ ೪೦ ಸುತ್ತುಗಳು ಈಗಾಗಲೇ ಪೂರ್ಣವಾಗಿದ್ದು ಬೆಂಗಳೂರಿನ ಒಂದು ರೇಡಿಯೊ ಚಾನೆಲ್ ಹರಾಜಿನ ಬಿಡ್ ಮೊತ್ತ ೧೦೫ ಕೋಟಿ ರೂಪಾಯಿ ದಾಖಲಿಸಿರುವುದು…!

ಅಬ್ಬಾ! ಬಿಡ್ ದಾಖಲಿಸಿದ ಎರಡನೆಯ ಮಹಾನಗರವಾಗಿ ಬೆಂಗಳೂರು ಈಗಾಗಲೇ ಹೊರ ಹೊಮ್ಮಿದೆ.

ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳು ಬೆಂಗಳೂರಿನಲ್ಲಿ ಬಲು ಜನಪ್ರಿಯತೆ ಹೆಚ್ಚಿಸಿಕೊಂಡಿರುವುದನ್ನು ಮತ್ತು ಅವುಗಳಿಗಿರುವ ಬಲು ಬೇಡಿಕೆಯನ್ನು ಇದು ಬಿಂಬಿಸಿರುವುದು.

ದಿನಾಂಕ ೦೭-೦೮-೨೦೧೫ ರಂದು ೪೦ ಸುತ್ತುಗಳು ಪೂರ್ಣಗೊಳ್ಳುವುದು. ಇದು ಮೂರನೆಯ ಹಂತದ ಹರಾಜು ಪ್ರತಿಕ್ರಿಯೆಯೆಂದು ಖಚಿತ ಪಡಿಸಿರುವುದು!

ದಿನಾಂಕ ೧೦-೦೮-೨೦೧೫ ರಂದು ೪೧ ನೆಯ ಸುತ್ತು ಹರಾಜು ಪ್ರಕ್ರಿಯೆ ಆರಂಭವಾಗಲಿದೆಯೆಂದು ಸ್ಪಷ್ಟ ಪಡಿಸಿರುವುದು.

ಮೊತ್ತ ಮೊದಲು ಹರಾಜು ಪ್ರಕ್ರಿಯೆಯಲ್ಲಿ ೬೯ ಮಹಾನಗರಗಳಿಗೆ ೧೩೫ ತರಂಗಾಂತರಗಳನ್ನು ಹರಾಜಿಗಿಡಲಾಗಿತ್ತು. ಇದು ಇದುವರೆಗೆ ಒಟ್ಟು ೯೪೬ ಕೋಟಿ ರೂಪಾಯಿ ಬಿಡ್ ದರ ಬಾರಿ ಬಾರಿ ದಾಖಲಾಗಿರುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ಅಂಕಿ ಅಂಶಗಳನ್ನು ಈಗಾಗಲೇ ಬಿಡುಗಡೆಗೊಳಿಸಿದೆ.

ನವ ದಿಲ್ಲಿಯಲ್ಲಿ ವಾಹಿನಿಯ ಬಿಡ್ ಮೌಲ್ಯ ೧೪೪ ಕೋಟಿ ರೂಪಾಯಿಗೆ ಈಗಾಗಲೇ ಏರಿಕೆಯಾಗಿದ್ದು ಇದುವರೆಗೆ ೫೬ ಮಹಾನಗರಗಳಲ್ಲಿ ೮೬ ಚಾನಲ್‌ಗಳ ಬಿಡ್ ಯಶಸ್ವಿಯಾಗಿದೆಯೆಂದು ಖಷಿತಪಡಿಸಿರುವುದು.

ನಮ್ಮ ದೇಶದಲ್ಲಿ ಎಫ್ ಎಮ್ ರೇಡಿಯೊ ವಾಹಿನಿಗಳ ಪ್ರಸಾರವನ್ನು ವಿಸ್ತರಿಸುವ ಸಲುವಾಗಿ ವಾರ್ತಾ ಮತ್ತು ಪ್ರಸಾರ ಖಾತೆಯು ೨೦೧೧ ರಲ್ಲಿ ಮಾರ್ಗದರ್ಶಿಯನ್ನು ಈಗಾಗಲೇ ಹೊರಡಿಸಿತ್ತು. ತದನಂತರ ಟ್ರಾಯ್ ಶಿಫಾರಸ್ಸುನ್ನು ಪಡೆದು ಈಗಿರುವ ಎರಡನೆಯ ಹಂತದ ಪರವಾನಗಿಯನ್ನು ಮೂರನೆಯ ಹಂತಕ್ಕೆ ವಿಸ್ತರಿಸಲು ಅದು ನಿರ್ಧರಿಸಿತ್ತು. ಅದರ ಪ್ರಕಾರ ಈಗ ಎಫ್ ಎಮ್ ಮೂರನೆಯ ಹಂತದ ಹರಾಜು ಪ್ರಕ್ರಿಯೆ ಜರುಗುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ದೃಢ ಪಡಿಸಿದ್ದು ಇರುತ್ತದೆ.

ಮುದ್ದು ಮಕ್ಕಳೆ… ಎಫ್‌ಎಮ್ ರೇಡಿಯೋ ಕತೆ ಕೇಳಿದಿರಲ್ಲ …? ಪ್ರತಿಯೊಂದು ಮನೋರಂಜನೆಯ ಚಾನಲ್ ಹಿಂದೆ, ಒಂದು ಕತೆಯಿರುವುದು ಅದನ್ನು ಆಲಿಸಿದಾಗಲೇ ಅದರ ಹಿನ್ನಲೆ ತಿಳಿಯುವುದು ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...