Home / ಲೇಖನ / ಇತರೆ / ಶಾಲೆಗೆ ಬಂದ ಚಿರತೆ

ಶಾಲೆಗೆ ಬಂದ ಚಿರತೆ

ಜುಲೈ ೨೦೧೫ ರಂದು ಗುರುವಾರ ದಿನದಂದು ಚಿಕ್ಕ ಮಗಳೂರಿನಲ್ಲಿ ಜರುಗಿದ ಕತೆಯಿದು. ಚಿಕ್ಕ ಮಗಳೂರಿನ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜ ಶಾಲೆಗೆ (ಟಿ‌ಎಂಎಸ್) ಚಿರತೆಯೊಂದು ಬಂದೇ ಬಿಟ್ಟಿತು!

ಅಲ್ಲಿದ್ದ ಮಕ್ಕಳು ಶಿಕ್ಷಕರೆಲ್ಲ ಗಾಬರಿ ಬಿದ್ದು ಓಡಿದರು. ಈ ಚಿರತೆ ಶಾಲೆಗೆ ಬರುವ ಮುನ್ನ- ಕೋರ್ಟು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಟ್ಟಾಭಿರಾಮೇಗೌಡ ಎಂಬುವವರ ಮೇಲೆ ಎರಗಿ ಗಾಯ ಮಾಡಿದೆ!

ಶಾಲೆಗೆ ಬಂದ ಚಿರತೆಯನ್ನು ಕೊಠಡಿಯಲ್ಲಿ ಬಂದಿಯನ್ನಾಗಿಸಿ ಉಪಾಯವಾಗಿ ಮೆಲ್ಲಗೆ ಕಿಟಕಿ ಹಾಕುವಾಗ ಅದು ಅರಣ್ಯ ಇಲಾಖೆಯ ಚಾಲಕ ಗಣೇಶ್ ಎಂಬುವರ ಬಲಗೈಯ ನಾಲ್ಕು ಬೆರಳುಗಳನ್ನು ಕಚ್ಚಿದೆ! ಇವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿದ್ದಾರೆ! ಶಾಲೆ ಪಕ್ಕದ ಕಡೂರು ಕ್ಲಬ್ ಕಡೆಯಿಂದ ಮರದ ಮೇಲಿಂದ ರಸ್ತೆಗೆ ಚಿರತೆ ಜಿಗಿದಿದೆ. ಅಲ್ಲಿಂದ ಶಾಲೆಗೆ ಬಂದಿದೆ. ಅದನ್ನು ಕಂಡು ಎಲ್ಲರೂ ಹೌಹಾರಿದ್ದಾರೆ. ಅಲ್ಲೇ ಇದ್ದ ನೆರಳಚ್ಚು ಯಂತ್ರದ ಕೊಠಡಿ ಸೇರಿಕೊಂಡಿದೆ.

ತದ ನಂತರ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಸತತವಾಗಿ ಐದಾರು ತಾಸು ಕಾರ್ಯಚರಣೆಯ ಮೂಲಕ ಸುರಕ್ಷಿತವಾಗಿ ಚಿರತೆಯನ್ನು ಸೆರೆ ಹಿಡಿದರು.

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಡಾ. ವಿನಯ್‌ ಅವರು ಅರಿವಳಿಕೆಯ ಚುಚ್ಚುಮದ್ದನ್ನು ಅಲ್ಲಿದ್ದ ಚಿರತೆಗೆ ಯಶಸ್ವಿಯಾಗಿ ಸಿಡಿಸಿ ಅಲ್ಲಿದ್ದ ಜನರಿಂದ ಮೆಚ್ಚುಗೆ ಗಳಿಸಿದರು.

ಈ ಅರಿವಳಿಕೆಯ ಚುಚ್ಚುಮದ್ದನ್ನು ಸಿಡಿಸುವ ಪರಿಣಿತ ಪಶು ವೈದ್ಯರು ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇಲ್ಲದಿರುವುದರಿಂದ ಈ ಒಂದು ಚಿರತೆಯ ಕಾರ್‍ಯಚರಣೆಯು ತುಂಬಾ ತಡವಾಯಿತು.

ತದನಂತರ ಈ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಸಿಬ್ಬಂದಿ ಹಿಡಿದರು. ಸಕಲ ಬಂದೋಬಸ್ತೋವಿನ ನಡುವಿನ ಮಧ್ಯೆ ಭದ್ರಾ ಅಭಯಾರಣ್ಯಕ್ಕೆ ಕ್ಷೇಮವಾಗಿ ಬಿಟ್ಟು ಟಾಟಾ ಮಾಡಿ ಬಂದರು.

ಚಿಕ್ಕಮಂಗಳೂರಿನ ತುಂಬೆಲ್ಲ ಎರಡು ಮೂರು ದಿನ ಚಿರತೆ ಶಾಲೆಗೆ ಬಂದ ಸುದ್ದಿನೇ ಚರ್‍ಚೆಗೆ ಗ್ರಾಸವಾಯಿತು.

ಈಗೀಗ ಕಾಡಿನ ಪ್ರಾಣಿಗಳು ಆಹಾರ, ನೀರು, ಹರಸುತ್ತಾ ನಾಡಿಗೆ ಬರುತ್ತಿವೆ. ನಾಡಿನ ಜನ ಕಾಡನ್ನು ಉಳಿಸಿದರೆ ಮಾತ್ರ ನಾಡು ಉಳಿದೀತೂ ಇಲ್ಲವಾದರೆ ವಿಪತ್ತು ತಪ್ಪಿದ್ದಲ್ಲ! ಗಂಡಾಂತರ ಕಟ್ಟಿಟ್ಟ ಬುತ್ತಿ…
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...