Home / ಲೇಖನ / ಇತರೆ / ಶಾಲೆಗೆ ಬಂದ ಚಿರತೆ

ಶಾಲೆಗೆ ಬಂದ ಚಿರತೆ

ಜುಲೈ ೨೦೧೫ ರಂದು ಗುರುವಾರ ದಿನದಂದು ಚಿಕ್ಕ ಮಗಳೂರಿನಲ್ಲಿ ಜರುಗಿದ ಕತೆಯಿದು. ಚಿಕ್ಕ ಮಗಳೂರಿನ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜ ಶಾಲೆಗೆ (ಟಿ‌ಎಂಎಸ್) ಚಿರತೆಯೊಂದು ಬಂದೇ ಬಿಟ್ಟಿತು!

ಅಲ್ಲಿದ್ದ ಮಕ್ಕಳು ಶಿಕ್ಷಕರೆಲ್ಲ ಗಾಬರಿ ಬಿದ್ದು ಓಡಿದರು. ಈ ಚಿರತೆ ಶಾಲೆಗೆ ಬರುವ ಮುನ್ನ- ಕೋರ್ಟು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಟ್ಟಾಭಿರಾಮೇಗೌಡ ಎಂಬುವವರ ಮೇಲೆ ಎರಗಿ ಗಾಯ ಮಾಡಿದೆ!

ಶಾಲೆಗೆ ಬಂದ ಚಿರತೆಯನ್ನು ಕೊಠಡಿಯಲ್ಲಿ ಬಂದಿಯನ್ನಾಗಿಸಿ ಉಪಾಯವಾಗಿ ಮೆಲ್ಲಗೆ ಕಿಟಕಿ ಹಾಕುವಾಗ ಅದು ಅರಣ್ಯ ಇಲಾಖೆಯ ಚಾಲಕ ಗಣೇಶ್ ಎಂಬುವರ ಬಲಗೈಯ ನಾಲ್ಕು ಬೆರಳುಗಳನ್ನು ಕಚ್ಚಿದೆ! ಇವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿದ್ದಾರೆ! ಶಾಲೆ ಪಕ್ಕದ ಕಡೂರು ಕ್ಲಬ್ ಕಡೆಯಿಂದ ಮರದ ಮೇಲಿಂದ ರಸ್ತೆಗೆ ಚಿರತೆ ಜಿಗಿದಿದೆ. ಅಲ್ಲಿಂದ ಶಾಲೆಗೆ ಬಂದಿದೆ. ಅದನ್ನು ಕಂಡು ಎಲ್ಲರೂ ಹೌಹಾರಿದ್ದಾರೆ. ಅಲ್ಲೇ ಇದ್ದ ನೆರಳಚ್ಚು ಯಂತ್ರದ ಕೊಠಡಿ ಸೇರಿಕೊಂಡಿದೆ.

ತದ ನಂತರ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಸತತವಾಗಿ ಐದಾರು ತಾಸು ಕಾರ್ಯಚರಣೆಯ ಮೂಲಕ ಸುರಕ್ಷಿತವಾಗಿ ಚಿರತೆಯನ್ನು ಸೆರೆ ಹಿಡಿದರು.

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಡಾ. ವಿನಯ್‌ ಅವರು ಅರಿವಳಿಕೆಯ ಚುಚ್ಚುಮದ್ದನ್ನು ಅಲ್ಲಿದ್ದ ಚಿರತೆಗೆ ಯಶಸ್ವಿಯಾಗಿ ಸಿಡಿಸಿ ಅಲ್ಲಿದ್ದ ಜನರಿಂದ ಮೆಚ್ಚುಗೆ ಗಳಿಸಿದರು.

ಈ ಅರಿವಳಿಕೆಯ ಚುಚ್ಚುಮದ್ದನ್ನು ಸಿಡಿಸುವ ಪರಿಣಿತ ಪಶು ವೈದ್ಯರು ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇಲ್ಲದಿರುವುದರಿಂದ ಈ ಒಂದು ಚಿರತೆಯ ಕಾರ್‍ಯಚರಣೆಯು ತುಂಬಾ ತಡವಾಯಿತು.

ತದನಂತರ ಈ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಸಿಬ್ಬಂದಿ ಹಿಡಿದರು. ಸಕಲ ಬಂದೋಬಸ್ತೋವಿನ ನಡುವಿನ ಮಧ್ಯೆ ಭದ್ರಾ ಅಭಯಾರಣ್ಯಕ್ಕೆ ಕ್ಷೇಮವಾಗಿ ಬಿಟ್ಟು ಟಾಟಾ ಮಾಡಿ ಬಂದರು.

ಚಿಕ್ಕಮಂಗಳೂರಿನ ತುಂಬೆಲ್ಲ ಎರಡು ಮೂರು ದಿನ ಚಿರತೆ ಶಾಲೆಗೆ ಬಂದ ಸುದ್ದಿನೇ ಚರ್‍ಚೆಗೆ ಗ್ರಾಸವಾಯಿತು.

ಈಗೀಗ ಕಾಡಿನ ಪ್ರಾಣಿಗಳು ಆಹಾರ, ನೀರು, ಹರಸುತ್ತಾ ನಾಡಿಗೆ ಬರುತ್ತಿವೆ. ನಾಡಿನ ಜನ ಕಾಡನ್ನು ಉಳಿಸಿದರೆ ಮಾತ್ರ ನಾಡು ಉಳಿದೀತೂ ಇಲ್ಲವಾದರೆ ವಿಪತ್ತು ತಪ್ಪಿದ್ದಲ್ಲ! ಗಂಡಾಂತರ ಕಟ್ಟಿಟ್ಟ ಬುತ್ತಿ…
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...