Home / ಕವನ / ಕವಿತೆ / ಬುದ್ಧ ಪಾದದ ಮೇಲೆ

ಬುದ್ಧ ಪಾದದ ಮೇಲೆ

ಹೆಜ್ಜೆ-೧

ಅವನ ದೃಢ ವಿಶಾಲ
ಪಾದದ ಮೇಲೆ
ಪುಟ್ಟಾಣಿ ಹುಳು
ಅಂಗುಲಂಗುಲ ಏರಿ
ಪುಟ್ಟ ಪಾದವನೂರಿ
ಅತ್ತಿಂದಿತ್ತ ಜೀಕುತ್ತಾ ಜೋಕಾಲೆ.
ಅವನ ಪಾದದ ಮೇಲೆ
ಅದರ ಪದತಳ.

ಒಂದಿಂಚೋ ಎರಡಿಂಚೋ ಮೂರೋ
ತಗುಲದೇ ಬಿಟ್ಟೂ ಅಂಟುವ
ಆ ಪುಟಾಣಿ ಪಾದ
ಭೂಮಿಗಪ್ಪಿದ ಅವನ ಪಾದಕ್ಕೆ
ಖೋ ಕೊಟ್ಟೆಬ್ಬಿಸಿ
ಆತು ಹಿಡಿದ
ಚುಲ್ಟಾಣಿ ಹುಳುವಿನ ಪಾದ
ಹೆಜ್ಜೆಯೂರಲು ಉಳಿದ
ಕೊನೆಯ ಜಾಗ!

ಹೆಜ್ಜೆ-೨

ಅವನ ದೃಢ ವಿಶಾಲ
ಪಾದದ ಮೇಲೆ
ಚಿಕ್ಕಾಣಿ ಚಿಕ್ಕ ಕೀಟ
ತನ್ನ ಅಂಗೈ ಇಟ್ಟು
ಒತ್ತುತ್ತಾ ಒತ್ತುತ್ತಾ
ಹೆಬ್ಬೆರಳು ಅದರ ಪಕ್ಕದ್ದು
ನಡುಕಿನದು, ಉಂಗುರದ್ದು, ಕಿರಿಯದು
ನೆಕ್ಕುತ್ತಾ ನೇವರಿಸುತ್ತಾ
ಆಟವೋ ಹುಡುಗಾಟವೋ….

ಹೆಜ್ಜೆ-೩

ಅವನ ದೃಢ ವಿಶಾಲ
ಪಾದದ ಮೇಲೆ
ಬೊಟ್ಟಿನಗಲದ ಕ್ರಿಮಿಯೊಂದು ತಲೆಯೂರಿ
ತನ್ನ ತಲೆಗೂದಲಲೇ ಗುಡಿಸಿ ಒರೆಸಿ
ತಲೆಕೆಳಗೆ ಕಾಲು ಮೇಲೆತ್ತಿ ಶಿರ್ಷಾಸನ
ಪಾದದ ಮೇಲಿಂದ
ಬೆರಳ ತುದಿವರೆಗೆ
ಜೊಯ್ಯನೆ ಜಾರೋಬಂಡಿ
ಮತ್ತೆ ಮೊದಲಿಂದ
ಪಾದಕ್ಕೆ ತಲೆಯೂರಿ
ಉಲ್ಟಾಪಲ್ಟಾ ಸರ್ಕಸ್
ಆಟಕ್ಕೆ ಉಳಿದ ಏಕೈಕ ಮೈದಾನ!

ಹೆಜ್ಜೆ-೪

ಅವನ ದೃಢ ವಿಶಾಲ
ಪಾದದ ಮೇಲೆ
ಬೆನ್ನುತಿಕ್ಕಿ ಹಗುರಾಗುವ
ಈ ಕ್ಷುದ್ರಜಂತು
ಅಂಗಾತ ಮಲಗಿ ಶವಾಸನ.
ಕ್ಷಣಕ್ಕೇ ತಿರುವು ಮುರುವಾಗಿ
ಹೊಟ್ಟೆ ಮೇಲೆ ದೇಕುತ್ತಾ
ಬೆರಳಿಂದ ಪಾದಬುಡಕ್ಕೆ
ಪಾದ ಮೂಲದಿಂದ
ಬೆರಳ ತುತ್ತತುದಿಗೆ ಉರುಳಾಟ
ಕೊಬ್ಬಿದ ದೇಹ ಸವೆತಕ್ಕೆ ಒದ್ದಾಟ!

ಹೆಜ್ಜೆ-೫

ಕೊಟ್ಟಕೊನೆಯ ವಿಹಾರಧಾಮ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...