Home / ಲೇಖನ / ಇತರೆ / ವಚನ ವಿಚಾರ – ಸೋಂಕಿನ ಸೋಜಿಗ

ವಚನ ವಿಚಾರ – ಸೋಂಕಿನ ಸೋಜಿಗ

ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು
ಬರುಮಾತಿನ ಉಯ್ಯಲನೇರಿ ಒದೆದು ಒರಲಿ ಕೆಡುವ ದರಿದ್ರರು
ಅರಿವು ತೋರದೆ ಇರಬೇಕು ಕಾಯನಿರ್ಣಯ ನಿಃಪತಿಯೆಂಬಾತನು
ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು
ಅರಿವು ತೊರೆದ ಎರಂಡೆಂಬ ಭಿನ್ನವೇಷವ ತೊಟ್ಟು
ಡಂಬಕವ ನುಡಿದಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ

[ಬರುಮಾತಿನ–ಬರಿಯ ಮಾತಿನ, ಕಾಯನಿರ್ಣಯ ನಿಃಪತಿ-ಪೂರ್ಣಪ್ರಬುದ್ಧತೆಯ ಲಕ್ಷಣ]

ಅಲ್ಲಮನ ವಚನ.

ಕೆಲವರಿಗೆ ಜ್ಞಾನದ ಬಲ ಇರುತ್ತದೆ. ಅದನ್ನು ಬಳಸಿಕೊಂಡು ಅರಿಯದವರನ್ನು ಗೆಲ್ಲಬೇಕೆಂದು ಇನ್ನಿಲ್ಲದಂತೆ ಪ್ರಯತ್ನಿಸುತ್ತಾರೆ. ಮಾತಿನ ಉಯ್ಯಾಲೆಯನ್ನು ಏರಿ ಅತ್ತ ಇತ್ತ ತುಯ್ದಾಡುತ್ತಾರೆ, ಒಮ್ಮೆ ಹಾಗೆ, ಒಮ್ಮೆ ಹೀಗೆ ಅಭಿಪ್ರಾಯವ್ಯಕ್ತಪಡಿಸುತ್ತಾರೆ. ಇವರೆಲ್ಲ (ನಾವೆಲ್ಲ?) ಹೀಗೆ ಸುಮ್ಮನೆ ಮಾತು ಒರಲಿ ಕೆಡುವ ದರಿದ್ರರು.

ಮುಂದಿನ ಕೆಲವು ಪಾರಿಭಾಷಿಕಗಳನ್ನು ಬಿಟ್ಟರೂ `ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು’ ಅನ್ನುವ ಮಾತು ಗಮನಿಸಿ, ಸ್ಪರ್ಶದ ಸೋಜಿಗವನ್ನು ಅನುಭವಿಸಿ, ಪರಿಣತರಾಗಿ ಫಲಿಸಬೇಕು.

ನಾವಾಡುವ ವಿಷಯವೆಲ್ಲ ಬರಿಯ ಮಾತಿನ ಮಟ್ಟದ ಮಾಹಿತಿಯಾಗಿದ್ದರೆ ನಾವೆಲ್ಲ ಮಾತಿನ ಉಯ್ಯಾಲೆಯಾಡುವ, ಅನ್ಯರನ್ನು ಗೆಲ್ಲಬಯಸುವ, ಕೆಡುವ, ದರಿದ್ರರು ಅಷ್ಟೆ. ಆಡುವ ಮಾತಿನ ನಿಜವನ್ನು ಮುಟ್ಟಿ, ಸೋಂಕಿ, ಸೋಜಿಗಪಡುವುದು ಮುಖ್ಯ. ಸೋಜಿಗ ಫಲಿಸುವುದು, ಹಣ್ಣಾಗುವುದು ಮುಖ್ಯ. ಅದು ಆಗದಿದ್ದರೆ ಮಾತು ವ್ಯರ್ಥ.

ಇನ್ನು ಮಾತು ಬೇಡ, ಸುಮ್ಮನೆ ಪರಿಣಮಿಸೋಣ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...