ಗಾಳಿ ಮಾತು

ಗಾಳಿಯೊಳಗೆ ಬೆಸೆದು
ರೆಂಬೆ ಕೊಂಬೆಗಳಲ್ಲಿ ಹರಿದಾಡಿ
ಹಕ್ಕಿ ಗೂಡೊಳಗೆ ನುಸುಳಿ
ರೆಕ್ಕೆ ಪುಕ್ಕ ಕಟ್ಟಿಕೊಂಡು
ಬಾನಿಗೇರಿ ಬಲಿತು

ಕಂಡಕಂಡವರ ಹೆಗಲೇರಿ
ಹದತಪ್ಪಿ ಹಾಲಾಹಲವಾಗಿ
ಕೊನೆಗೂ ಬಾಯಿ ತೀಟೆ ತೀರಿಸಿಕೊಳ್ಳುತ್ತದೆ.

ಮನಸ್ಸುಗಳು ಮುರಿದು
ಮನೆಗಳು ಮುಚ್ಚಿಕೊಂಡ
ಹಂಚು ಹೊದಿಕೆಗಳೆಲ್ಲ ಹರಾಜಾಗಿ
ಇನ್ನೆನೋ ಆಗಿ
ಬೂದಿಯೊಳಗಣ ಕೆಂಡ
ಕಂಕುಳಲ್ಲೆ ಕಟ್ಟಿಕೊಳ್ಳುತ್ತದೆ.

ಆಗಾಗ ಪತ್ರಿಕೆಯ ಮುಖಪುಟ
ರಾರಾಜಿಸುತ್ತದೆ
ರುಂಡ ಮುಂಡ ಬೇರ್ಪಟ್ಟ
ದೇಹಗಳು ಪತ್ತೆ.
ಬಂಧ ಅನುಬಂಧಗಳು ಕೆಟ್ಟು
ಜೀವ ಭಾವ
ಬತ್ತಿದ ಒಡಲುಗಳು ಕಣ್ಣೀರಿನ
ಅಗುಳುಂಡು.
ಹಾಲ್ಕುಡಿದ ತುಟಿಗಳು ಹಂಬಲಿಸಿ
ಅಳುವುಂಡು
ಬದುಕ ನರಕದ ಮಹಲು
ಮಾಡುವ ಗಾಳಿಮಾತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೯
Next post ಮುಸ್ಸಂಜೆಯ ಮಿಂಚು – ೧೭

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…