Home / ಕವನ / ಕವಿತೆ / ಕೋಣ ಮತ್ತು ನಾವು

ಕೋಣ ಮತ್ತು ನಾವು

ಏಕೆ ಜನುವ ಕೊಟ್ಟೆಯಮ್ಮಾ !
ಗಂಡಾಗಿ
ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ.

ನಾನು ಹುಟ್ಟಿದ ಕೂಡಲೆ
ಮಾರಿದೇವಿಯ ಒಳಿತು ಕೋರಿ
ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು
ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು.

ನಾನು ಕೋಣ! ಉಬ್ಬಿ ಹೋದೆ
ದುಡಿಸಿ ದಣಿಸದೆ
ತಿಂದು ತಿರುಗಾಡಿಕೊಂಡು ಬೆಳೆಯಲು ಬಿಟ್ಟಿದ್ದಕ್ಕೆ;
ಗೊತ್ತಾಗಲಿಲ್ಲ ಆಗ ಇದರ ಹಿಂದಿನ ಹಿಕ್ಮತ್ತು.

ಮತ್ತನಾದೆ
ಸಿಕ್ಕ ಸಿಕ್ಕ ಕಡೆಗೆ ನುಗ್ಗಿ
ಸಿಕ್ಕ ಸಿಕ್ಕದ್ದು ಮೇದು
ಸಿಕ್ಕ ಸಿಕ್ಕಂಗೆ ಅಡ್ಡಾಡುತ್ತ
ಸಿಕ್ಕ ಸಿಕ್ಕಲ್ಲಿ ಮಲಗಿ ಎದ್ದು
ಸಿಕ್ಕ ಸಿಕ್ಕಂಗೆ ಕೊಬ್ಬಿ ಬೆಳೆದೆ.

ಕಂಬದಂತ ಕಾಲು
ಹಳೇ ರುಬ್ಬು ಗುಂಡಿನಂತ ತಲೆ
ಉಕ್ಕಿನಂತ ಕೋಡು
ಬೆಂಕಿ ಉಂಡೆಯಂತ ಕಣ್ಣು

ಹೊಗೆ ಕಾರುವ ಹೊಳ್ಳೆ
ಕರ್ರಗೆ ಮಿರ ಮಿರ ಮಿಂಚುವ
ಸಣ್ಣ ಗುಡ್ಡದಂತ ದೇಹ
ನಡೆದಾಡುತಿದ್ದ ನೆಲ ನಡುಗುತಿತ್ತು
ಅಂತಕನ ಕೋಣದಂತೆ.

ಊರೊಳಗೆ ನುಗ್ಗಿದರೆ
ಸಾವನ್ನು ಕಂಡಂತೆ
ಓಡಿ ಹೋಗಿ
ಮಕ್ಕಳು ಮರಿ ಬಾಚಿಕೊಂಡು
ಬಯಲಲ್ಲಿ ಕಟ್ಟಿದ್ದ ದನ ಕರು ಕಣ್ಣಿ ಹರಿದು
ಬಾಗಿಲು ಹಾಕಿ ಕೊಳ್ಳುವರು;
ಕನಸಲ್ಲಿ ಕಂಡರೂ ಬೆಚ್ಚಿ ಬೀಳುವರು.

ನನ್ನ ದೇಹ, ಭಾವದಿ
ಮಾರಿದೇವಿ ಪರಿಭಾವಿಸಿ
ಕೇಡಿನ ಭೀತಿಯಲ್ಲಿ
ತಿರುಗಿ ಬೀಳರು
ಸಹಿಸಿ ನಡೆವರು.

ಅಂತ್ಯವಿಲ್ಲದದು ಯಾವುದಿದೆ ಈ ಲೋಕದಲಿ
ನನಗೂ ಬಂತು;
ಜಾತ್ರೆಯು ಗೊತ್ತಾಯಿತು
ಹುಡುಕಿಸಿ ತಂದರು ನನ್ನನ್ನು ಬಿಡದೆ
ಸುತ್ತಿಸಿದರು ಏಳೂರ ಮನೆ, ಮನೆಯನ್ನು.

ಪೂಜೆಯ ಮಾಡಿಸಿ
ಸುಲಭದಿ ಕಡಿಯಲು
ಪಟ್ಟೆ ಶಿರಕೆ ಎಣ್ಣೆ ಹೊಯ್ಯಿಸಿ
ಕೊಡತಿಯಲಿ ಗುದ್ದುತ್ತಿದ್ದರೆ
ಗುದ್ದು ಗುದ್ದಿಗೂ ಎದ್ದದ್ದು ಬೀಳುತಿತ್ತು ಜೀವ.

ಪಾಷಂಡಿಗಳು
ಕತ್ತರಿಸಿ ಎಸೆಯಲೊಲ್ಲರು!
ತೀರಿ ಹೋಗುತ್ತಿತ್ತಲ್ಲ! ಎಲ್ಲಾ!
ಎಚಿದೊರಲುತಿತ್ತು; ತರಹರಿಸುತಿತ್ತು ಜೀವ.

ಇವರವರೇ ಕೆಲವರು ಮಹಾನುಭಾವರು
ಹಿಂಸೆ ಬೇಡವೆಂದು ಸಾರಿ ಸಾರಿ ಹೇಳಿದರು
ಎಂದಿಗೂ ಕೇಳಿಲ್ಲ; ಕೇಳುವುದಿಲ್ಲ!
ಒಳ್ಳೆಯದನ್ನು ಹೇಳಿದ ಯಾರನ್ನೂ
ಸುಖವಾಗಿ ಸಾಯಲು ಬಿಟ್ಟಿಲ್ಲ
ನ್ಯಾಯವು ಇವರಿಗೆ ಒಂದಲ್ಲ; ಹೊಂದುವುದಿಲ್ಲ
ಜೀವ ಚಕ್ರದ ದುರ್ಬಳಕೆ ನಿಂತಿಲ್ಲ.

ಮೂಢ ನಂಬಿಕೆಯ
ಹೊಸ, ಹೊಸ ಬಟ್ಟೆಯುಟ್ಟುಕೊಂಡು
ಬಂಧು, ಬಳಗ ಕೂಡಿಕೊಂಡು
ಅಸಹಜ ಮಿಂಚನು ತುಂಬಿಕೊಂಡು
ವಿಧ, ವಿಧ ವಾದ್ಯಗಳ ಮೇಳದಲಿ
ಹಾಡುತ್ತ, ಕೂಗುತ್ತ, ಕುಣಿಯುತ್ತ,
ಉನ್ಮಾದ ಸೂಸುತ್ತ,
ಮೌರೆವಣಿಗೆಯಲಿ ಸಾಗಿದರು.

ಉತ್ತೇಜಿತ ಉತ್ಸವ ಗುಡಿಯನು ಸಾರಿತ್ತು
ಪೂಜೆಯು ಮೊದಲಾಯಿತು
ಸ್ಮಶಾನ ಮೌನವು ಕವಿಯಿತು
ಆರತಿಯಾಗಿ ಅಪ್ಪಣೆ ಹೊರಬಿತ್ತು
ಬಿದ್ದವು ತಲೆಗಳು ಸಾಲು, ಸಾಲಾಗಿ
ನನ್ನಿಂದ ಶುರುವಾಗಿ
ಕುರಿ, ಕೋಳಿ ತರುವಾಯ.

ನೋಡಿದರೆ…!
ಒಬ್ಬರ ತಲೆಯೂ ತಗ್ಗಿರಲಿಲ್ಲ
ಪಶ್ಚಾತ್ತಾಪದ ಒಂದು ಕ್ಷೀಣ ಶಬ್ಧವೂ ಕೇಳಿ ಬರಲಿಲ್ಲ.

ಸೃಷ್ಟಿಯಲಿ ಶ್ರೇಷ್ಠರೆನ್ನುವರು
ವಿಚಾರಿಸರು
ನಂಬಿಕಯಲಿ ಯಾವುದನ್ನೂ!!
ಸ್ವಹಿತವಾದಿಗಳು ಏನು ಮಾಡಲು ಹೇಸರು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್