Home / ಲೇಖನ / ವಿಜ್ಞಾನ / ಬಹುರೂಪಿ ಉಪಯೋಗದ ಭತ್ತದ ಹೊಟ್ಟು

ಬಹುರೂಪಿ ಉಪಯೋಗದ ಭತ್ತದ ಹೊಟ್ಟು

ವಿಜ್ಞಾನ ಅವಿಷ್ಕಾರಗೊಂಡಂತೆ ನಿರುಪಯುಕ್ತ ವಸ್ತುಗಳಿಂದಲೂ ಕೂಡ ಹೊಸವಸ್ತುವನ್ನು ನಿರ್ಮಾಣ ಮಾಡುವ ಪ್ರಯೋಗಗಳು ನಡೆಯುತ್ತಲಿದೆ. ನಿರುಪಯುಕ್ತ ವಸ್ತುಗಳಾದ ಕಸ, ಕಡ್ಡಿ ಎಲೆ, ಸಿಪ್ಪೆಗಳಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತವೆ. ಇದರಂತೆ ವಿಜ್ಞಾನಿಗಳು ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿ ಅಮೂಲ್ಯ ವೈವಿಧ್ಯ ವಸ್ತು- ಗಳನ್ನು, ಉಪಯೋಗಗಳನ್ನು ಕಂಡು ಹಿಡಿದಿದ್ದಾರೆ. ಈ ಭತ್ತದ ಬೂದಿಯಿಂದ ಉತ್ಕೃಷ್ಠಗುಣಮಟ್ಟದ ಸಿಮೆಂಟ್ ತಯಾರಿಸಲು ವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಬಳಕೆಯಲ್ಲಿರುವ ಇಂತಹ ಭತ್ತದ ಸಿಪ್ಪೆಯ ಬೂದಿ ಆಧಾರಿತ ಸಿಮೆಂಟ್ ಸಾಧಾರಣ ಸಿಮೆಂಟಿಗಿಂತಲೂ ಶ್ರೇ‍ಷ್ಠಮಟ್ಟದ್ದೆಂದು ತಿಳಿದು ಬರಿದಿದೆ. ಭತ್ತದ ಸಿಪ್ಪೆಯ ಬೂದಿಯು ಕಾಂಕ್ರಿಟ್ ತಂತ್ರಜ್ಞಾನದಲ್ಲಿಯೇ ಹೊಸಶಾಖೆಯೊಂದನ್ನು ತೆರೆದಿದೆ ಮಾತ್ರವಲ್ಲ “ಬಹುಪಯೋಗಿ” ಎಂದು ಖಚಿತವಾಗುತ್ತಲಿದೆ. ಸಿಮೆಂಟಿನಂತಹ ಪುಡಿರೂಪದ ವಸ್ತು ಅಷ್ಟೇ ಅಲ್ಲದೇ ಹೊಸ ನಮೂನೆಯ ಇಟ್ಟಗೆಗಳ ತಯಾರಿಕೆಯಲ್ಲಿಯೂ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಲಾಗುತ್ತದೆ. ಕಾಂಕ್ರೀಟ್ ರಸ್ತೆನಿರ್ಮಾಣ ಕಾರ್ಯ- ದಲ್ಲಿಯೂ ಇಂತಹ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿಕೊಳ್ಳಬಹುದೆಂದು ಪ್ರಯೋಗಗಳಿಂದ ಕಂಡುಹಿಡಿಯ- ಲಾಗಿದೆ. ದಿನನಿತ್ಯ ಮನೆ ಮತ್ತು ಹೋಟೆಲ್‌ಗಳಲ್ಲಿ ಭತ್ತವನ್ನು ಸುಟ್ಟು ಬೂದಿಯಾದ ನಂತರ ನಿರುಪಯುಕ್ತವೆಂದು ಬಿಸಾಕುತ್ತಾರೆ. ಬಹುತೇಕ ಭತ್ತಕುಟ್ಟುವ ಯಂತ್ರಗಳು ಉಗುಳಿದ ಹೊಟ್ಟನ ರಾಶಿಯನ್ನು ತಿಪ್ಪೆಗೆಸೆಯುತ್ತಾರೆ. ಅಥವಾ ಬಿಸಾಕುತ್ತಾರೆ. ಅತ್ಯಂತ ಉಪಯುಕ್ತವಾಗುವ ಈ ಭತ್ತದ ಹೊಟ್ಟನಿಂದಾಗುವ ಉಪಯೋಗಗಳನ್ನು ತಿಳಿದು ಸದುಪಯೋಗಪಡಿಸಿಕೊಳ್ಳಬೇಕಿದೆ. ಅಥವಾ ಇಂತಹ ತಂತ್ರಜ್ಞಾನ ಇರುವಲ್ಲಿಗೆ ಭತ್ತದ ಹೊಟ್ಟನ ಲೋಡುಗಳನ್ನು ಸಾಗಾಣಿಕೆ ಮಾಡಿ ಅದರಿಂದಲೂ ಹಣಗಳಿಸಬಹುದು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...