Home / ಲೇಖನ / ವಿಜ್ಞಾನ / ಒಬ್ಬರ ತಲೆ ಇನ್ನೊಬ್ಬರಿಗೆ !

ಒಬ್ಬರ ತಲೆ ಇನ್ನೊಬ್ಬರಿಗೆ !

ಶಿವಪುರಾಣದಲ್ಲಿ ಗಜಾನನ ತಲೆಗೆ ಆನೆಯ ಸೊಂಡಿಲಿನ ತಲೆ ಜೋಡಿಸಿದ ಕಥೆ. ಮಹಾಭಾರತದಲ್ಲಿ……………. ದಂತಕಥೆಗಳನ್ನು ಕೇಳಿದ್ದೇವೆ. ಅವು ಎಷ್ಟು ಸತ್ಯವಾದ ಕಥೆಗಳು ಎಂಬುವುದು ವಿಜ್ಞಾನಿಗಳೇ ಹೇಳಬೇಕು. ಮೂಲ ಒಂದಾದರೆ ಬಾಯಿಯಿಂದ ಬಾಯಿಗೆ ಹರಡುತ್ತ ವೈಭವೀಕರಣಗೊಂಡು, ಚಕಿತಗೂಳಿಸುತ್ತವೆ. ಆದಾಗ್ಯೂ ಅಂದಿನ ಕಾಲದಲ್ಲಿಯೇ ತಲೆಗಳ ಕಸಿಗೊಳಿಸುವ ತಂತ್ರವಿತ್ತೆಂದು ಪುರಾಣಗಳು ಹೇಳುತ್ತವೆ. ಆದರೆ ೨೦ನೇ ಶತಮಾನದವರೆಗೆ ಪ್ರಪಂಚದಲ್ಲಿ ತಲೆಯ ಕಸಿಗೊಳಿಸುವ ನಿಜವಾದ ಘಟನೆ ಕಂಡುಬಂದಿದ್ದಿಲ್ಲ. ಆದರೆ ಇಂದು ವಿಜ್ಞಾನಯುಗ ತಾಂತ್ರಿಕ ಆವಿಷ್ಕಾರಗಳೊಂದಿಗೆ ಏನೆಲ್ಲ ಸಾಧನೆಗಳನ್ನು ಮಾಡುತ್ತಿರುವ ಸಂದರ್ಭ ಇಂದು ತಲೆಕಸಿಗೊಳಿಸುವ ವಿಜ್ಞಾನ ಈದೀಗ ಬಂದಿದೆ. ಆಮೇರಿಕಾದ
ಶಸ್ತ್ರಚಿಕಿತ್ಸಕ ಡಾ|| ರಾಬರ್ಟ್ ಜೆ. ವೈಟ್ ಇವರು ಅನೇಕ ಸಣ್ಣಜೀವಿಗಳ ಮೇಲೆ ಪ್ರಯೋಗ ಮಾಡಿ ಈ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ತಲೆಯನ್ನು ಕಡಿದಾಗ ಕೆಳಗಿನ ಮುಂಡದ ಭಾಗದ ಅಂಗಾಗಗಳು ತಮ ಕಾರ್ಯವನು ಸ್ಥಗಿತಗೊಳಿಸುತ್ತವೆ. ಆದರೆ ತಲೆಬಾಗ ಮಾತ್ರ ಇನ್ನೂ ಜೀವಂತವಾಗಿರುತ್ತದೆ. ಇನ್ನೊಂದೆಡೆ ಓರ್ವವ್ಯಕ್ತಿಯ ಮಿದುಳು ಮೃತಗೊಂಡು ಇತರ ಆಂಗಗಳು ಕಾರ್ಯಶೀಲವಾಗಿದ್ದರೆ, ಅಂತಹ ರೋಗಿಗೆ ಇನ್ನೊಬ್ಬ ವ್ಯಕ್ತಿಯ ಶಿರಸ್ಸನ್ನು ಯಶಸ್ವಿಯಾಗಿ ಕಸಿ ಮಾಡಬಹುದೆನ್ನುವುದು ಅವರ ಹೇಳಿಕೆಯಾಗಿದೆ.

ಈ ಮೊದಲು ಈ ಪ್ರಯೋಗಗಳನ್ನು ಮಂಗಗಳ ಮೇಲೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಇದರಂತೆ ಮನುಷ್ಯರ ಮೇಲೂ ಸಹ ಯಶಸ್ವಿಯಾಗಿ ಚಿಕಿತ್ಸೆ
ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಇದು ಪರಿಶೀಲನಾ ಹಂತದಲ್ಲಿದೆ.

ಅಮೇರಿದ ‘ಕ್ಲಿವ್‌ ಲ್ಯಾಂಡ್’ ವಿಶ್ವವಿದ್ಯಾನಿಲಯದ ಡಾ|| ವೈಟ್ ಅವರು ಮಸ್ತಿಷ್ಕದ ಜೈವ ರಾಸಾಯನಿಕ ಸಂರಚನೆಯ ಬಗೆಗೆ ಅತ್ಯಂತ ಸೂಕ್ಷ್ಮ ಅಧ್ಯಯನ ಕೈಗೊಂಡಿದ್ದಾರೆ. ಮಸ್ತಿಷ್ಕದಲ್ಲಿ ರೋಗ ನಿರೋಧಕ ಶಕ್ತಿ ಇತರ ಅಂಗಗಳಿಗಿಂತಲೂ ಹೆಚ್ಚಾಗಿರುತ್ತದೆ. ಮೆದುಳಿನ ಪ್ರತ್ಯಾರೋಹಣದ ನಂತರ ಶರೀರದಿಂದ ಅಸ್ವೀಕಾರ ಮಾಡುವ ಸಾಧ್ಯತೆ ಇತರ ಅಂಗಗಳಿಗಿಂತಲೂ ಕಡಿಮೆ. ರೋಗಗ್ರಸ್ತ ಶರೀರದಿಂದ ತಲೆಯನ್ನು ಬೇರ್ಪಡಿಸಿ ಒಂದು ಯಂತ್ರಕ್ಕೆ ಅಳವಡಿಸಲಾಗುತ್ತದೆ. ನಂತರ ಆದನ್ನು ಹೊಸ ದೇಹದ ಭಾಗಕ್ಕೆ ಅಳವಡಿಸುವವರೆಗೆ ಅದಕ್ಕೆ ಕೃತಕ ಶ್ವಾಸಕೋಶ, ಹೃದಯ, ಮೂತ್ರಕೋಶ, ಯಕೃತ್ತುಗಳ ಕಾರ್ಯದ ಸಂಪರ್ಕವನ್ನು ಮುಂದುವರಿಸಲಾಗುತ್ತದೆ. ನಂತರವೇ ಅದನ್ನು ಮುಂಡಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಅನಾರೋಗ್ಯದ ಶರೀರವನ್ನು ಬೇರ್ಪಡಿಸಿ ಹೊಸ ಶರೀರವನ್ನು ಅಳವಡಿಸಿದಲ್ಲಿ ಮಿದುಳಿನ ಶಕ್ತಿ ಇನ್ನಷ್ಟು ಪ್ರಖರಗೊಳ್ಳುತ್ತದೆಂದು ಡಾ|| ವೈಟ್ ತಿಳಿಸುತ್ತಾರೆ. ಆದರೆ ಅದರ ಮೂಲಸ್ಥಿತಿ ಮಾತ್ರ ಹಾಗೆಯೇ ಇರುತ್ತದೆ. ವ್ಯಕ್ತಿಯು ಮಾತನಾಡುವ ಕೇಳುವ, ನೋಡುವ, ಅನುಭವಿಸುವ ಕಾರ್ಯವು ಮಸ್ತಿಷ್ಕದಿಂದಲೆ ಸಂಚಲಿತಗೊಳ್ಳುತ್ತದೆ. ಹೀಗೆ ಅಳವಡಿಸಿದಾಗ ಅವರವರ ಸ್ಮೃತಿಗಳು ಮಿದುಳಿನಲ್ಲಿಯೇ ಸುರಕ್ಷಿತವಾಗಿರುತ್ತವೆ. ಹೀಗೆ ಕಸಿಮಾಡಿದ ನಂತರವೂ ಏನೂ ವ್ಯತ್ಯಾಸವಾಗಲಾರವು. ಶರೀರದ ಇತರೆ ಯಾವುದೇ ಅಂಗಗಳಿಗೆ ತಮ್ಮದೇ ಆದ ಸ್ಮೃತಿ ಆಥವಾ ಭಾವನೆಗಳಿರುವುದಿಲ್ಲ. ಈ ಪ್ರಯೋಗ ಮನುಷ್ಯರ ಮೇಲೆ ಯಶಸ್ವಿಯಾಗಿ ನಡೆದು ಬಂದರೆ ವೈದ್ಯಕೀಯ ರಂಗದಲ್ಲಿ ಹೊಸಗಾಳಿ ಬೀಸಿದಂತಾಗುತ್ತದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...