Home / ಕಥೆ / ಕಿರು ಕಥೆ / ಪರೀಕ್ಷೆ

ಪರೀಕ್ಷೆ

ಒಮ್ಮೆ ಗುರುಗಳು ತಮ್ಮ ಇಬ್ಬರು ಆಪ್ತ ಶಿಷ್ಯರನ್ನು ಕರೆದು ಒಂದು ಪರೀಕ್ಷೆಗೆ ಒಳಪಡಿಸಿದರು.

“ಶಿಷ್ಯಂದಿರೆ! ನೀವು ಝೆನ್‌ನನ್ನು ಬಹಳದಿನದಿಂದಲೂ ಕಲಿಯುತ್ತಿದ್ದೀರಿ. ನಿಮಗೆ ಈ ಪರೀಕ್ಷೆ ಎದುರಾಗಿದೆ. ಝೆನ್‌ನಲ್ಲಿ ನಿಮ್ಮ ಹೃದಯ ಎಷ್ಟು ಒಂದಾಗಿದೆ ಎಂದು ತಿಳಿಯಬೇಕು. ಈಗ ಒಂದು ಪ್ರಶ್ನೆ ನಿಮ್ಮ ಮುಂದಿಡುತ್ತೇನೆ. ನೀವು ಕೆಲವು ದಿನಗಳಾದ ನಂತರ ಬಂದು ನನಗೆ ಉತ್ತರಕೊಡಬೇಕು” ಅಂದರು.

ಶಿಷ್ಯಂದಿರು “ಹಾಗೇ ಆಗಲಿ ಗುರುಗಳೇ” ಎಂದು ಒಪ್ಪಿಕೊಂಡರು.

“ನೀವು ಎರಡು ಕೈ ಚಪ್ಪಾಳೆ ಕೇಳಿದ್ದೀರಿ ಅಲ್ಲವೇ?”

“ಹೌದು ಗುರುಗಳೇ?”

“ಈಗ ಅದಕ್ಕೆ ವಿರುದ್ಧವಾಗಿ ಎರಡೂ ಕೈ ಸೇರದ ಚಪ್ಪಾಳೆ ಬಗ್ಗೆ ನೀವು ತಿಳಿದು ಬರಬೇಕು” ಎಂದರು ಗುರುಗಳು.

“ಎರಡು ಕೈ ಸೇರದಿರುವಾಗ ಚಪ್ಪಾಳೆ ಎಲ್ಲಿ ಬಂತು? ಗುರುಗಳೇ?”- ಎಂದರು ಶಿಷ್ಯಂದಿರು.

“ನೀವು ತಿಳಿಯಬೇಕಾದದು ಅದೇ. ನೀವು ಕಾರ್‍ಯೋನ್ಮುಖರಾಗಿ ಶೋಧನೆಗೆ ಅಗಮ್ಯ ಯಾವುದೂ ಇಲ್ಲ” ಎಂದರು ಗುರುಗಳು.

ಇಬ್ಬರು ಶಿಷ್ಯರು ದೂರದ ಕಾಡಿಗೆ ಹೋದರು. ಅಲ್ಲಿ ಬೆಟ್ಟಗುಡ್ಡದ ಎದರು ನಿಂತರು, ಹರಿಯುವನದಿ, ಜಲಪಾತಗಳ ಸದ್ದು ಕೇಳಿಸಿಕೊಂಡರು. ವೃಕ್ಷದ ಕೆಳಗೆ ನಿಂತರು. ಎಲೆಗಳ ಮರ್‍ಮರ ಕೇಳಿಸಿಕೊಂಡರು. ಯಾವ ಸುಳಹು ಮೂಡಲಿಲ್ಲ. ಮತ್ತೆ ಧ್ಯಾನ ಭಂಗಿಯಲ್ಲಿ ಕುಳಿತು ಅಂತರ ಮುಖಿಗಳಾದರು. ಎದೆಯ ಢಬಡಬನಾದ ಕೇಳತೊಡಗಿತು. ಆತ್ಮ ನಿರತರಾಗಿ ಕೈಸೇರದ ಚಪ್ಪಾಳೆಯ ನಾದ ಕೇಳುತ್ತಾ ತನ್ಮಯರಾದರು. ಪ್ರಕೃತಿಯಲ್ಲಿ ಎಲ್ಲೆಲ್ಲೂ ಕೇಳುವ ಸಪ್ಪಳ ನದಿಯಲ್ಲಿ, ಝರಿಯಲ್ಲಿ, ಜಲಪಾತದಲ್ಲಿ, ಗಿಡಮರದಲ್ಲಿ ಮಹಾವೃಕ್ಷಗಳಲ್ಲಿ, ಕೈ ಇರದ ಚಪ್ಪಾಳೆಯು ಮಹಾ ಮೌನದ ಆಂತರ್ಯದಲ್ಲಿ ಸ್ಪುಟಗೊಂಡಿತು.

ಇಬ್ಬರೂ, ಗುರುಗಳಲ್ಲಿಗೆ ಬಂದು ತನಗಾದ ಒಂದೇ ಅನುಭವವನ್ನು ತಿಳಿಸಿದರು. ಮಹಾ ಮೌನದಲ್ಲಿ ನೀವು ಒಂದು ಕೈ ಚಪ್ಪಾಳೆಯ ಕೇಳಲು ಸಾಧ್ಯವಿರುವಾಗ, ಅದೇ ಮೌನದಲ್ಲಿ ಎರಡು ಕೈ ಇಲ್ಲದ ಚಪ್ಪಾಳೆಯನ್ನು ಕೇಳಿದರೆ ಅಚ್ಚರಿ ಏನು? ಝೆನ್ ಅಧ್ಯಯನ ನಿಮಗೆ ಇತ್ತ ವರವಲ್ಲವೇ ಇದು” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...