Home / ಕಥೆ / ಕಿರು ಕಥೆ / ಪರೀಕ್ಷೆ

ಪರೀಕ್ಷೆ

ಒಮ್ಮೆ ಗುರುಗಳು ತಮ್ಮ ಇಬ್ಬರು ಆಪ್ತ ಶಿಷ್ಯರನ್ನು ಕರೆದು ಒಂದು ಪರೀಕ್ಷೆಗೆ ಒಳಪಡಿಸಿದರು.

“ಶಿಷ್ಯಂದಿರೆ! ನೀವು ಝೆನ್‌ನನ್ನು ಬಹಳದಿನದಿಂದಲೂ ಕಲಿಯುತ್ತಿದ್ದೀರಿ. ನಿಮಗೆ ಈ ಪರೀಕ್ಷೆ ಎದುರಾಗಿದೆ. ಝೆನ್‌ನಲ್ಲಿ ನಿಮ್ಮ ಹೃದಯ ಎಷ್ಟು ಒಂದಾಗಿದೆ ಎಂದು ತಿಳಿಯಬೇಕು. ಈಗ ಒಂದು ಪ್ರಶ್ನೆ ನಿಮ್ಮ ಮುಂದಿಡುತ್ತೇನೆ. ನೀವು ಕೆಲವು ದಿನಗಳಾದ ನಂತರ ಬಂದು ನನಗೆ ಉತ್ತರಕೊಡಬೇಕು” ಅಂದರು.

ಶಿಷ್ಯಂದಿರು “ಹಾಗೇ ಆಗಲಿ ಗುರುಗಳೇ” ಎಂದು ಒಪ್ಪಿಕೊಂಡರು.

“ನೀವು ಎರಡು ಕೈ ಚಪ್ಪಾಳೆ ಕೇಳಿದ್ದೀರಿ ಅಲ್ಲವೇ?”

“ಹೌದು ಗುರುಗಳೇ?”

“ಈಗ ಅದಕ್ಕೆ ವಿರುದ್ಧವಾಗಿ ಎರಡೂ ಕೈ ಸೇರದ ಚಪ್ಪಾಳೆ ಬಗ್ಗೆ ನೀವು ತಿಳಿದು ಬರಬೇಕು” ಎಂದರು ಗುರುಗಳು.

“ಎರಡು ಕೈ ಸೇರದಿರುವಾಗ ಚಪ್ಪಾಳೆ ಎಲ್ಲಿ ಬಂತು? ಗುರುಗಳೇ?”- ಎಂದರು ಶಿಷ್ಯಂದಿರು.

“ನೀವು ತಿಳಿಯಬೇಕಾದದು ಅದೇ. ನೀವು ಕಾರ್‍ಯೋನ್ಮುಖರಾಗಿ ಶೋಧನೆಗೆ ಅಗಮ್ಯ ಯಾವುದೂ ಇಲ್ಲ” ಎಂದರು ಗುರುಗಳು.

ಇಬ್ಬರು ಶಿಷ್ಯರು ದೂರದ ಕಾಡಿಗೆ ಹೋದರು. ಅಲ್ಲಿ ಬೆಟ್ಟಗುಡ್ಡದ ಎದರು ನಿಂತರು, ಹರಿಯುವನದಿ, ಜಲಪಾತಗಳ ಸದ್ದು ಕೇಳಿಸಿಕೊಂಡರು. ವೃಕ್ಷದ ಕೆಳಗೆ ನಿಂತರು. ಎಲೆಗಳ ಮರ್‍ಮರ ಕೇಳಿಸಿಕೊಂಡರು. ಯಾವ ಸುಳಹು ಮೂಡಲಿಲ್ಲ. ಮತ್ತೆ ಧ್ಯಾನ ಭಂಗಿಯಲ್ಲಿ ಕುಳಿತು ಅಂತರ ಮುಖಿಗಳಾದರು. ಎದೆಯ ಢಬಡಬನಾದ ಕೇಳತೊಡಗಿತು. ಆತ್ಮ ನಿರತರಾಗಿ ಕೈಸೇರದ ಚಪ್ಪಾಳೆಯ ನಾದ ಕೇಳುತ್ತಾ ತನ್ಮಯರಾದರು. ಪ್ರಕೃತಿಯಲ್ಲಿ ಎಲ್ಲೆಲ್ಲೂ ಕೇಳುವ ಸಪ್ಪಳ ನದಿಯಲ್ಲಿ, ಝರಿಯಲ್ಲಿ, ಜಲಪಾತದಲ್ಲಿ, ಗಿಡಮರದಲ್ಲಿ ಮಹಾವೃಕ್ಷಗಳಲ್ಲಿ, ಕೈ ಇರದ ಚಪ್ಪಾಳೆಯು ಮಹಾ ಮೌನದ ಆಂತರ್ಯದಲ್ಲಿ ಸ್ಪುಟಗೊಂಡಿತು.

ಇಬ್ಬರೂ, ಗುರುಗಳಲ್ಲಿಗೆ ಬಂದು ತನಗಾದ ಒಂದೇ ಅನುಭವವನ್ನು ತಿಳಿಸಿದರು. ಮಹಾ ಮೌನದಲ್ಲಿ ನೀವು ಒಂದು ಕೈ ಚಪ್ಪಾಳೆಯ ಕೇಳಲು ಸಾಧ್ಯವಿರುವಾಗ, ಅದೇ ಮೌನದಲ್ಲಿ ಎರಡು ಕೈ ಇಲ್ಲದ ಚಪ್ಪಾಳೆಯನ್ನು ಕೇಳಿದರೆ ಅಚ್ಚರಿ ಏನು? ಝೆನ್ ಅಧ್ಯಯನ ನಿಮಗೆ ಇತ್ತ ವರವಲ್ಲವೇ ಇದು” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...