Home / ಕವನ / ಕವಿತೆ / ಕಾಲ ಬ್ರಹ್ಮ

ಕಾಲ ಬ್ರಹ್ಮ

ಭೂತ ವರ್‍ತಮಾನ ಭವಿಷ್ಯ
ಅಂದು ಇಂದು ಮುಂದು
ಒಂದೇ ಗರ್‍ಭದಿಂ ಬಂದು
ಸ್ಫೋಟಗೊಂಡು ಅಂತರಿಕ್ಷದಲಿ
ಬೆರೆತು ಆದವೆ ಬೇರೆ?
ಸಹಸ್ರಾರು ತಾರೆಗಳ ಜನನ
ಒಂದನು ನಮಗಾಗಿ ಕಳಿಸಿರುವ
ಮೂಲ “ಸೂಪರ್ ಪ್ರೋಗ್ರಾಮರ್”
ಇತ್ತಿಹನು ಘಟನಾವಳಿ ಪಟ್ಟಿ ಜಗಜಟ್ಟಿ
ನಿನ್ನ ಸುತ್ತ ತಿರುಗುವವರಿಗೆ
ಬೆಳಕಿನ ಬಿಸಿ ಹಾಲು ಕೊಡಬೇಕು
ಜೀವಿಗಳು ಸಿಹಿ ಬೆರೆಸಿ ಮಾಡಲು ಪಾಯಸ
ಸಕಲ ಜೀವಜಾತಕೆ ಗ್ರಾಸ!
ವಿಕಸನದಿ ಹುಟ್ಟಿಕೊಂಡಿತು ಪ್ರಜ್ಞೆ-
ಬೆಳಕಿನ ಹಾಲು ಸುರಿದದ್ದು ಇಂದೋ
ಅಥವಾ ಎಂದೋ
ಅತೀತವೋ ವರ್‍ತಮಾನವೋ
ಭವಿಷ್ಯದ ಛಾಯೆಯೂ ಅಡಗಿದೆಯೊ
ಶುರುವಾಯಿತು ಲೆಕ್ಕ
ಮಾನದಂಡಕೆ ಬೇಕೊಂದು ಗಡಿಯಾರ
ಕೊಡಬೇಕು ಅದಕೊಂದು ಮೂರ್‍ತ ರೂಪ!
ಡವಗುಟ್ಟುವ ಎದೆಯ ತಾಳಕ್ಕೆ
ಅದರ ಟಿಕ್ ಟಿಕ್ ತಳಕು
ಬ್ರಹ್ಮಾಂಡದಲಿ ವಿವಿಧ ವೇಗದ ಬೆಳಕು
ಸಮಯ ಅನಂತ!
ಆದರೂ ಮರ್‍ತ್ಯರಿಗೆ ಇದೆ ಅಂತ
ಅಂತೆ ಕಂತೆಗಳಲಿ
ಸೋರಿಹೋಗುತಿದೆ
ಬಾಳಿನ ಪಾಯಸ
ಸವಿ ಅದನು ಪ್ರತಿ ಗಳಿಗೆ ಸವಿ
ಹಾರಿಹೋದರೂ ಸಮಯ
ದಕ್ಕಿಸಿಕೋ
ಬೊಗಸೆಯಲಿ ಸಿಕ್ಕದ್ದು
ಬಿಡಬೇಡ ಸೋರಲು
*****

Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...