Home / ಬಾಲ ಚಿಲುಮೆ / ಕಥೆ / ನರಿಯ ಮರಿಯ ಕಥೆ

ನರಿಯ ಮರಿಯ ಕಥೆ

ಒಂದಾನೊಂದು ಕಾಡಿನಲ್ಲಿ ಸಿಂಹ ದಂಪತಿಗಳು ಇದ್ದವು. ಸಿಂಹಿಯು ಒಂದು ಸಲ “ಎರಡು ಮರಿಗಳನ್ನು ಈದಿತು. ಸಿಂಹವು ದಿನವೂ ಹೋಗಿ ಬೇಟೆಯಾಡಿ ಆ ತಾಯಿ ಮಕ್ಕಳಿಗೆ ಮಾಂಸವನ್ನು ತಂದುಕೊಡುತ್ತಿತ್ತು. ಒಂದು ದಿನ ಬೇಟೆಯಿಂದ ಬರುವಾಗ ಒಂದು ನರಿಯ ಎಳೆಯ ಮರಿಯು ಸಿಕ್ಕಲು, ಸಿಂಹವು ಅದನ್ನು ತಂದು ಹೆಂಡತಿಗೆ ಕೊಟ್ಟಿತು. ಸಿಂಹಿಯು ಅದನ್ನು ಕೊಲ್ಲದೆ, ಅದಕ್ಕೂ ಹಾಲು ಕೊಟ್ಟು ಸಾಕಿತು. ಆಮರಿಗಳೊಡನೆ ಅದೂ ಬೆಳೆಯಿತು.
ಅವು ಒ೦ದು ದಿನ ಅರಣ್ಯದಲ್ಲಿ ಅಲೆಯುತ್ತಿರುವಾಗ ಅವುಗಳ ಎದುರಿಗೆ ಒ೦ದು ಆನೆಯು ಬಂತು. ಸಿಂಹದ ಮರಿಗಳು ಅದನ್ನು ಕಂಡು ರೇಗಿ ಅದರ ಮೇಲೆ ಬೀಳಲು ಹೋದುವು. ನರಿಯ ಮರಿಯು “ಬೇಡ ಬೇಡ” ಎಂದು ತಡೆಯಿತು; ಅವು ನಿಲ್ಲದಿರಲು ತಾನು ಮನೆಯ ಕಡೆಗೆ “ಓಡಿತು. ಇದು ಓಡುತ್ತಲೂ ಅವು ಏನೋ ಎಂತೋ ಎಂದು ಅದರ ಹಿಂದೆಯೇ ಬಂದುಬಿಟ್ಟುವು. ಕೇಳಿಲ್ಲವೆ?
ಉತ್ಸಾಹಿ ಧೀರನಿಂದುತ್ಸಾಹ ಸೇನೆಗೆಲ್ಲ | 
ಸೋತೊಬ್ಬನೋಡಲ್ಕೆ ಸೋತಂತೆ ಸೇನೆಯೆಲ್ಲ ॥೨೧॥ 
ಮನೆಗೆ ಬಂದಮೇಲೆ ಸಿಂಹದ ಮರಿಗಳೆರಡೂ ತಾಯಿ ಬಳಿಯಲ್ಲಿ “ಅಮ್ಮಾ, ಅಣ್ಣ ಈ ವೊತ್ತು ಹೆದರಿ ಓಡಿ ಬಂದುಬಿಟ್ಟ” ಎಂದು ಹಾಸ್ಯಮಾಡಿ ನಗುತ್ತ ನರಿಯ ಮರಿಯು ಮಾಡಿದುದನ್ನೆಲ್ಲಾ ಹೇಳಿದುವು. ಅದನ್ನು ಕೇಳಿ ನರಿಯ ಮರಿಗೆ ಕೋಪ ಬಂತು. ಅವರನ್ನು ಗದರಿಸಿಕೊಂಡು ಬಯ್ಯಿತು.
ಸಿಂಹಿಯು ನರಿಯ ಮರಿಯನ್ನು ಬೇರೆಯಾಗಿ ಕರೆದು “ಮಗು, ನೀನು ಹೀಗೆಲ್ಲ ಹಾರಾಡಬಾರದು. ನಿನ್ನ ತಮ್ಮಂದಿರು ಅವರು” ಎನ್ನಲು, ಅದು ಇನ್ನೂ ರೇಗಿ ಹಾರಾಡಿತು. “ನಾನೇನು ಇವರಿಗಿಂತ ಕಡಿಮೆಯೋ? ನನಗೆ ಶೌರ್ಯವಿಲ್ಲವೋ? ರೂಪವಿಲ್ಲವೋ? ವಿದ್ಯೆಯಿಲ್ಲವೋ? ನನ್ನನ್ನು ಇವರು ಏಕೆ ಹಾಸ್ಯ ಮಾಡುವುದು?” ಎಂದು ಕೂಗಿತು. ಆಗ ಸಿಂಹಿಯು ನಗುತ್ತ ಹೇಳಿತು:-“ನೀನು ಎಲ್ಲವೂ ಅಹುದು. ಅದರೂ ನಿನ್ನವರು ಆನೆಯನ್ನು ಕೊಂದವರಲ್ಲ. ನೀನು ನರಿಯ ಮಗನು. ನಾನು ನಿನ್ನನ್ನು ಕಾಪಾಡಿದೆ ಅಷ್ಟೆ? ನನ್ನ ಮರಿಗಳಿಗೆ ನೀನು ನರಿಯೆಂಬುದು ಇನ್ನೂ ತಿಳಿಯದು. ಈಗಲೇ ಹೊರಟು ಹೋಗಿ ನಿನ್ನವರ ಜೊತೆ ಸೇರಿಕೊ. ಇಲ್ಲದಿದ್ದರೆ ಇವರ ಏಟು ತಿಂದು ಸತ್ತೀಯೆ” ಎಂದು ಹೇಳಿ ಅದನ್ನು ಅಲ್ಲಿಂದ ಕಳುಹಿಸಿ ಕೊಟ್ಟಿತು.
ಅದರಂತೆಯೇ ನೀನೂ ಈ ರಾಜಪುತ್ರರು ನೀನು ಕುಂಬಾರನೆಂದು ತಿಳಿಯುವುದಕ್ಕಿಂತ ಮುಂಚೆಯೇ ಓಡಿಬಿಡು.ಇಲ್ಲವಾದರೆ ಇವರ ಕೈಗೆ ಸಿಕ್ಕಿ ಬದುಕವುದೇ ಕಷ್ಟವಾದೀತು.” ಎಂದು ಹೇಳಲು ಅವನೂ ಹೋಗಿ ಬದಕಿದನು.
“ಎಲೆ ಮೊಸಳೆ, ನೀನು ನಿಜವಾಗಿ ಮೂರ್ಖನು. ಹೆಂಗಸಿನ ಮಾತು ಕೇಳಿ ಕೆಟ್ಟೆ. ಕಥೆಯನ್ನು ಕೇಳಿಲ್ಲವೇ?
ಹೆಣ್ಣು ಮಾಡೆನೆ ಗಂಡು ಮಾಡನದೇನ? 
ಕುದುರೆಯಿಲ್ಲದ ಅರಸು ಕೆನೆಯುವ ॥ ಪರ್ವ 
ಕಾಲವೆನ್ನದೆ ಮಂತ್ರಿ ಬೋಳಿಪ ತಲೆಯನು ॥ 
ಮೊಸಳೆಯು ಅದು ಹೇಗೆ ಎನ್ನಲು ಕಪಿಯು ಹೇಳಿತು: –
*****
ಅರಸು ಮಂತ್ರಿಗಳ ಕಥೆ ಓದಿ
Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...