Home / ಕಥೆ / ಸಣ್ಣ ಕಥೆ / ಶ್ವೇತವರಾಹಸ್ವಾಮಿಯ ವಿಗ್ರಹ

ಶ್ವೇತವರಾಹಸ್ವಾಮಿಯ ವಿಗ್ರಹ

ಚಿಕ್ಕದೇವರಾಜ ಒಡೆಯರು ರಾಜ್ಯವನ್ನಾಳುತ್ತಿದ್ದಾಗ ತಂಜಾವೂರಿನಲ್ಲಿ ವೆಂಕೋಜಿಯ ಮಗ ಸಾಹುಜಿ ಎಂಬಾತನು ಆಳುತ್ತಿದ್ದನು. ಒಂದು ದಿನ ಈ ಸಾಹುಜಿಯು “ಈ ಚಿಕ್ಕದೇವರಾಜನದು ಎಷ್ಟು ಗರ್ವ! ಅವನ ಸಂಸ್ಥಾನದಲ್ಲಿ ಮೇಲುಕೋಟೆಯೊಂದು ವಿನಾ ಪ್ರಸಿದ್ದ ವಿಷ್ಣು ಕ್ಷೇತ್ರವನ್ನಾವುದೂ ಇಲ್ಲ. ನಮ್ಮ ದೇಶದಲ್ಲಾದರೋ ಶ್ರೀರಂಗ, ಶ್ರೀಮುಷ್ಟ, ಕುಂಭಕೋಣ, ಕಂಚಿ, ಮನ್ನಾರಗುಡಿ ಮುಂತಾದ ವಿಷ್ಟು ಕ್ಷೇತ್ರಗಳೇ ಅಲ್ಲದೆ ಚಿದಂಬರ, ಮಧ್ಯಾರ್ಜುನ, ಮಧುರೆ, ರಾಮೇಶ್ವರ ಮುಂತಾದ ಶಿವಕ್ಷೇತ್ರಗಳೂ ಇನ್ನೂ ಅನೇಕ ಪುಣ್ಯಸ್ಥಳಗಳೂ ಇವೆ. ಇವನದೇನು ಹೆಚ್ಚು-ಇವನ ಸಣ್ಣ ರಾಜ್ಯದ್ದೇನು ದೊಡ್ಡಸ್ತಿಕೆ?” ಎಂದು ಹಂಗಿಸಿ ಮಾತನಾಡಿದನು. ಈ ವರ್ತಮಾನವನ್ನು ಕೇಳಿ ಚಿಕ್ಕದೇವ ರಾಜಒಡೆಯರು ಖಿನ್ನತೆಯನ್ನೂ ಕೋಪವನ್ನೂ ಧರಿಸಿ ಯೋಚಿಸಿ, ಕಡೆಗೆ ಉಪಾಯದಿಂದ ಶ್ರೀಮುಷ್ಟದಲ್ಲಿದ್ದ ಶ್ವೇತವರಾಹಸ್ವಾಮಿಯ ಮೂರ್ತಿಯನ್ನು ತರಿಸಿಕೊಳ್ಳಬೇಕೆಂದು ನಿಶ್ಚಯಿಸಿದರು. ಕೂಡಲೆ ಜಾಣರೂ ಯುಕ್ತಿವಂತರೂ ಆಗಿದ್ದ ಜನರು ಕೆಲವರನ್ನು ಕರೆಯಿಸಿ, ಅವರಿಗೆ ದ್ರವ್ಯವನ್ನು ಕೊಟ್ಟು, ರಹಸ್ಯವಾಗಿ ಆ ವಿಗ್ರಹವನ್ನು ತರಲು ಕೊಟ್ಟು ಕಳುಹಿಸಿದರು. ಅವರು ಶ್ರೀಮುಷ್ಟಕ್ಕೆ ಹೋಗಿ ಅಲ್ಲಿಯ ಅರ್ಚಕ ಮುಂತಾದವರಿಗೆ ಹಣವನ್ನು ಕೊಟ್ಟು, ರಾತ್ರಿ ವೇಳೆಯಲ್ಲಿ ಯಾರೂ ಅರಿಯದಂತೆ ಆ ಶ್ವೇತವರಾಹಸ್ವಾಮಿಯ ಪ್ರತಿಮೆಯನ್ನು ಬಿಜಮಾಡಿಸಿಕೊಂಡು ಶ್ರೀರಂಗಪಟ್ಟಣವನ್ನು ಸೇರಿದರು. ಆಗ ದೊರೆಗಳು ಆನಂದಪಟ್ಟು ಅರಮನೆಯ ಬಲಗಡೆಯಲ್ಲಿ ವಿಚಿತ್ರವಾದ ಒಂದು ಗುಡಿಯನ್ನು ಕಟ್ಟಿಸಿ ಅಲ್ಲಿ ಅದನ್ನು ಪ್ರತಿಷ್ಠೆ ಮಾಡಿಸಿದರು.
*****
[ವಂಶರತ್ನಾಕರ ೧೧೦-೧೧೧, ಮತ್ತು ವಂಶಾವಳಿ ಪುಟ ೧೩೯-೧೪೦. ವಿಚಾರಕ್ಕೆ ಹೊಸ ಗೆಜಟಿಯರ್ ಸಂ. ೨, ಭಾಗ ೪ ಮತ್ತು ಡಾ|| ಯಸ್. ಕೃಷ್ಣ ಸ್ವಾಮಯ್ಯ೦ಗಾರ್ಯರು ಬರೆದ ಲೇಖನಗಳನ್ನು ನೋಡಬೇಕು.]

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...