Home / ಕಥೆ / ಸಣ್ಣ ಕಥೆ / ಶ್ವೇತವರಾಹಸ್ವಾಮಿಯ ವಿಗ್ರಹ

ಶ್ವೇತವರಾಹಸ್ವಾಮಿಯ ವಿಗ್ರಹ

ಚಿಕ್ಕದೇವರಾಜ ಒಡೆಯರು ರಾಜ್ಯವನ್ನಾಳುತ್ತಿದ್ದಾಗ ತಂಜಾವೂರಿನಲ್ಲಿ ವೆಂಕೋಜಿಯ ಮಗ ಸಾಹುಜಿ ಎಂಬಾತನು ಆಳುತ್ತಿದ್ದನು. ಒಂದು ದಿನ ಈ ಸಾಹುಜಿಯು “ಈ ಚಿಕ್ಕದೇವರಾಜನದು ಎಷ್ಟು ಗರ್ವ! ಅವನ ಸಂಸ್ಥಾನದಲ್ಲಿ ಮೇಲುಕೋಟೆಯೊಂದು ವಿನಾ ಪ್ರಸಿದ್ದ ವಿಷ್ಣು ಕ್ಷೇತ್ರವನ್ನಾವುದೂ ಇಲ್ಲ. ನಮ್ಮ ದೇಶದಲ್ಲಾದರೋ ಶ್ರೀರಂಗ, ಶ್ರೀಮುಷ್ಟ, ಕುಂಭಕೋಣ, ಕಂಚಿ, ಮನ್ನಾರಗುಡಿ ಮುಂತಾದ ವಿಷ್ಟು ಕ್ಷೇತ್ರಗಳೇ ಅಲ್ಲದೆ ಚಿದಂಬರ, ಮಧ್ಯಾರ್ಜುನ, ಮಧುರೆ, ರಾಮೇಶ್ವರ ಮುಂತಾದ ಶಿವಕ್ಷೇತ್ರಗಳೂ ಇನ್ನೂ ಅನೇಕ ಪುಣ್ಯಸ್ಥಳಗಳೂ ಇವೆ. ಇವನದೇನು ಹೆಚ್ಚು-ಇವನ ಸಣ್ಣ ರಾಜ್ಯದ್ದೇನು ದೊಡ್ಡಸ್ತಿಕೆ?” ಎಂದು ಹಂಗಿಸಿ ಮಾತನಾಡಿದನು. ಈ ವರ್ತಮಾನವನ್ನು ಕೇಳಿ ಚಿಕ್ಕದೇವ ರಾಜಒಡೆಯರು ಖಿನ್ನತೆಯನ್ನೂ ಕೋಪವನ್ನೂ ಧರಿಸಿ ಯೋಚಿಸಿ, ಕಡೆಗೆ ಉಪಾಯದಿಂದ ಶ್ರೀಮುಷ್ಟದಲ್ಲಿದ್ದ ಶ್ವೇತವರಾಹಸ್ವಾಮಿಯ ಮೂರ್ತಿಯನ್ನು ತರಿಸಿಕೊಳ್ಳಬೇಕೆಂದು ನಿಶ್ಚಯಿಸಿದರು. ಕೂಡಲೆ ಜಾಣರೂ ಯುಕ್ತಿವಂತರೂ ಆಗಿದ್ದ ಜನರು ಕೆಲವರನ್ನು ಕರೆಯಿಸಿ, ಅವರಿಗೆ ದ್ರವ್ಯವನ್ನು ಕೊಟ್ಟು, ರಹಸ್ಯವಾಗಿ ಆ ವಿಗ್ರಹವನ್ನು ತರಲು ಕೊಟ್ಟು ಕಳುಹಿಸಿದರು. ಅವರು ಶ್ರೀಮುಷ್ಟಕ್ಕೆ ಹೋಗಿ ಅಲ್ಲಿಯ ಅರ್ಚಕ ಮುಂತಾದವರಿಗೆ ಹಣವನ್ನು ಕೊಟ್ಟು, ರಾತ್ರಿ ವೇಳೆಯಲ್ಲಿ ಯಾರೂ ಅರಿಯದಂತೆ ಆ ಶ್ವೇತವರಾಹಸ್ವಾಮಿಯ ಪ್ರತಿಮೆಯನ್ನು ಬಿಜಮಾಡಿಸಿಕೊಂಡು ಶ್ರೀರಂಗಪಟ್ಟಣವನ್ನು ಸೇರಿದರು. ಆಗ ದೊರೆಗಳು ಆನಂದಪಟ್ಟು ಅರಮನೆಯ ಬಲಗಡೆಯಲ್ಲಿ ವಿಚಿತ್ರವಾದ ಒಂದು ಗುಡಿಯನ್ನು ಕಟ್ಟಿಸಿ ಅಲ್ಲಿ ಅದನ್ನು ಪ್ರತಿಷ್ಠೆ ಮಾಡಿಸಿದರು.
*****
[ವಂಶರತ್ನಾಕರ ೧೧೦-೧೧೧, ಮತ್ತು ವಂಶಾವಳಿ ಪುಟ ೧೩೯-೧೪೦. ವಿಚಾರಕ್ಕೆ ಹೊಸ ಗೆಜಟಿಯರ್ ಸಂ. ೨, ಭಾಗ ೪ ಮತ್ತು ಡಾ|| ಯಸ್. ಕೃಷ್ಣ ಸ್ವಾಮಯ್ಯ೦ಗಾರ್ಯರು ಬರೆದ ಲೇಖನಗಳನ್ನು ನೋಡಬೇಕು.]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...