Home / ಕವನ / ಅನುವಾದ / ಸೃಷ್ಟಿ

ಸೃಷ್ಟಿ

ಮೂಲ: ಮಣೀಂದ್ರ ಗುಪ್ತ

“ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ
ಆಗಬೇಕಿದೆ ಅಂತ ಇಟ್ಟುಕೊ
ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ
ಹೇಳು ನೋಡೋಣ ಆ ಹೊಸಗೋಲದಲ್ಲಿ
ಏನೇನಿರಬೇಕು ಅಂತ ಬಯಸುತ್ತೀಯೆ ನೀನು?”

“ಸೂರ್ಯ, ಚಂದ್ರ, ಗಾಳಿ, ನದಿ ಸರೋವರಗಳು.
ಅಂದ ಹಾಗೇ ಮರೆತೆ
ಚಿಗುರು, ಹೂ ಮರಗಳು”

“ನೀನಿರುವುದಿಲ್ಲವೇ ?”

“ಎಲ್ಲಾದರೂ ಉಂಟೆ? ಹೇಳುವ ಅಗತ್ಯವಿದೆಯೆ?
ನಾನು ಇದ್ದೇ ಇರುವೆ”

“ಇನ್ನೂ ಏನಾದರೂ?”

“ಮುಗಿಲು ಅವಕ್ಕೆ ಬಣ್ಣ
ನೀರಲ್ಲಿ ಮೀನುಗಳು, ಗಾಳಿಯಲ್ಲಿ ಹಕ್ಕಿಗಳು”

“ಋತುಗಳು ಸ್ವಪ್ನಗಳು ನೆನಪುಗಳು ಮರವೆಗಳು
ಬೇಡವೆ ಇವೆಲ್ಲ?”

“ಸ್ವಲ್ಪ ಯೋಚಿಸಿ ಎಲ್ಲ ಮತ್ತೆ ಹೇಳುವೆ ತಾಳು
ತಪ್ಪಾಗಬಾರದಲ್ಲ”

“ಮೋಹಕ ಬೆಳಗಿನ ದೃಶ್ಯ, ಮಧ್ಯಾಹ್ನ, ಸಂಜೆ?
ನವಿಲಗರಿ ಕಾಂತಿಯ ಮುಗಿಲಮರೆ ಶಿಖರ?
ಹಣ್ಣುಗಳು, ಮಗುವಿಗೆ ಬಾಯ್ಬಿಡುವ ಹೆಣ್ಣುಗಳು?
ಹಬ್ಬ ಹರಿದಿನಗಳು, ಮದ್ದುಗುಂಡುಗಳು,
ಯುದ್ಧ ಜಯ ಸೋಲುಗಳು?
ಬೇಡವೆ ಹೊಟೇಲುಗಳು, ಜಿಂಕೆಗಳು ಕುದುರೆಗಳು,
ರೈಲು ಕಾರುಗಳು?”

“ಆಹ! ಬೇಡದೆ ಉಂಟೆ?”

“ನೃತ್ಯ ಸಂಗೀತ ಚಿತ್ರ, ಕಟು ತೀಕ್ಷ್ಯ ಮಧುಗಳು?
ಜೇನಿನ ರುಚಿ ಮರೆಸುವ ಸಲ್ಲಾಪ ಸುರತಗಳು?
ಹಕ್ಕಿಗಳ ಸಿಕ್ಕಿಸಿ ನೆಲಕ್ಕೆಳೆವ ಬಲೆಗಳು?”

“ಎಂಥದೋ ತೊಡಕಾದ ಬಲೆಯೊಳಗೆ ನನ್ನನ್ನು
ಸಿಕ್ಕಿಸುತ್ತಿರುವೆ.
ದಟ್ಟಮಾವಿನ ಮರದ ಹಚ್ಚನೆಯ ತೋಪಿನಲ್ಲಿ
ದಿಕ್ಕುಕಾಣದೆ ನಾನು ನಿಂತಿದ್ದೇನೆ.
ಸತ್ತ ಹುಡುಗನನ್ನು ಸುಡಲು ಒಯ್ಯುತ್ತಿರುವೆ
ಸುತ್ತಲೂ ಸಂಜೆಕಾಂತಿಯ ತೊಯಿಸಿ ಸುರಿವ ಮಳೆ
ಮೋಹಕ ಭಯಾನಕ!
ಕಾಪಾಡು ದೇವರೇ
ಹೋಗಬೇಕಿದೆ ನಾನು ಸುಡುವ ಜಾಗಕ್ಕೆ, ನನ್ನ ಕೆಲಸಕ್ಕೆ”

“ಸರಿ, ಹೋಗು, ಯೋಚಿಸು
ವಿಶ್ವವನು ಸೃಷ್ಟಿಸಿದ ದೈವ ನಿನಗಿಂತ ಎಷ್ಟು
ಎತ್ತರದ ಕವಿಯೆಂದು”
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...