Home / ಬಾಲ ಚಿಲುಮೆ / ಕಥೆ / ಮಂಥರನ ಕಥೆ

ಮಂಥರನ ಕಥೆ

ಒಂದೂರಿನಲ್ಲಿ ಮಂಥರನೆಂಬ ನೇಗೆಯವನಿದ್ದನು. ಒ೦ದು ದಿನ ಅವನ ಮಗ್ಗದ ಮರಮುಟ್ಟುಗಳೆಲ್ಲಾ ಮುರಿದು ಹೋಯಿತು. ಅದರಿಂದ ಮರವನ್ನು ತರಬೇಕೆಂದು ಒಂದು ಕೊಡಲಿ ತೆಗೆದುಕೊಂಡು ಕಾಡಿಗೆ ಹೊರಟನು. ಹಾಗೆಯೇ ತಿರುಗುತ್ತಾ ಸಮುದ್ರ ತೀರಕ್ಕೆ ಬಂದು, ಅಲ್ಲೊ೦ದು ಮರವನ್ನು ಕಂಡು ಅದನ್ನು ಕತ್ತರಿಸಬೇಕು ಎಂದುಕೊಂಡನು. ಆ ಮರದಲ್ಲಿ ಒ೦ದು ಯಕ್ಷವು ಇತ್ತು. ಅವನು ನೇಗೆಯವನ ಇಷ್ಟವನ್ನು ತಿಳಿದು ಅವನಿಗೆ ಕಾಣಿಸಿಕೊಂಡು “ಅಯ್ಯಾ, ಇದರಲ್ಲಿ ನಾನಿರುವೆನು. ಬೇರೆ ಮರವನ್ನು ನೋಡಿಕೊ. ಇಲ್ಲಿ ಸಮುದ್ರದ ಮೇಲಿನಿಂದ ಗಾಳಿಯು ಬೀಸುತ್ತ ನನಗೆ ಸುಖವಾಗಿರುವುದು. ಎಂದು ಕೇಳಿಕೊಂಡಿತು. ನೇಗೆಯವನು “ಅಯ್ಯಾ, ನಿಜ, ನಿನ್ನ ಸುಖ ನೋಡಿದರೆ ನನಗೇನು ಗತಿ? ದಿನವೂ ಮಗ್ಗ ನಡೆಯದಿದ್ದರೆ ನನ್ನ ಜೀವನ ಹೇಗೆ ಹೇಳು. ಇದೊಂದು ಮರ ಕಡಿದರೆ ನನಗೆ ಬೇಕಾದ ಪದಾರ್ಥಗಳೆಲ್ಲ ಆಗುವುವು” ಎಂದನು. ಯಕ್ಷವು “ಅಯ್ಯಾ, ಈ ಮರವನ್ನು ಬಿಡು. ನಿನಗೆ ಬೇಕಾದ ವರವನ್ನು ಕೊಡುವೆನು” ಎಂದಿತು. ನೇಗೆಯವನು “ಆಗಬಹುದು. ಆದರೆ ಹೋಗಿ ನನಗೆ ಬೇಕಾದ ವರವನ್ನು ಕೇಳಿ ಕೊಂಡು ಬಂದು ವರವನ್ನು ಕೇಳುವೆನು.” ಎಂದನು. ಯಕ್ಷವು ಒಪ್ಪಿತು.
ಅವನು ಬರುತ್ತ ದಾರಿಯಲ್ಲಿ ಅವನ ಸ್ನೇಹಿತನಾದ ನಾಪಿತನು ಸಿಕ್ಕಿದನು. “ಅವನಿಗೆ ಎಲ್ಲವನ್ನೂ ಹೇಳಿ “ಏನು ವರವನು, ಕೇಳಲಿ?” ಎನ್ನಲು, ಅವನು “ಒಂದು ರಾಜ್ಯವನ್ನು ಕೇಳಿಕೊ. ನೀನು ಅರಸು, ನಾನು ಮಂತ್ರಿ, ಆಗಿ ಸುಖವಾಗಿರೋಣ” ಎಂದನು. ನೇಗೆಯವನು “ಆಗಲಿ, ನನ್ನ ಹೆಂಡತಿಯನ್ನೂ ಕೇಳುವೆನು. ಅವಳೇನು ಹೇಳುವಳೋ ನೋಡೋಣ” ಎಂದನು. ಅವನು ಬೇಡ ಬೇಡ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ.
ಅವನು ಬಂದು ಹೆಂಡತಿಗೆ ಹೇಳಿದನು: ನಾಪಿತನು ಹೇಳದುದನ್ನು ಕೇಳಿ, ಅವಳು “ಯಾರನ್ನು ಕೇಳಿದರೂ ಕೇಳಬಹುದು. ಅವನನ್ನು ಕೇಳುವುದೆ? ರಾಜ್ಯವೆಂದರೇನು? ಸುಮ್ಮನಾಯಿತೆ? ರಾಮನ ಗತಿ ಏನಾಯಿತು? ಪಾಂಡವರಿಗೇನಾಯಿತು? ರಾಜನಾದರೆ ಅಣ್ಣ ತಮ್ಮಂದಿರು, ಪುತ್ರ ಮಿತ್ರರು, ಕೂಡ ಅವನನ್ನು ರಾಜ್ಯಕ್ಕಾಗಿ ಕೊಲ್ಲುವುದಕ್ಕೆ ಸಿದ್ದರಾಗಿರುವರು. ಅದರಿಂದ ರಾಜ್ಯ ಬೇಡ. ಈಗ ನಿನಗೆ ಒಂದು ತಲೆ ಎರಡು ತೋಳು ಇವೆ. ಇದರಿಂದ ಒಂದು ದುಪ್ಪಟಿಯನ್ನು ನೇಯುವೆ.  ಹೋಗಿ ಇನ್ನೊಂದು ತಲೆ, ಇನ್ನೆರಡು ತೋಳು ಕೇಳಿಕೊ. ಅಗ ಎರಡು ದುಪಟಿಗಳಾಗುವುವು. ಒಂದನ್ನು ಮಾರಿದರೆ ಮನೆಯ ವೆಚ್ಚಕ್ಕಾಗುವುದು. ಇನೊಂದು ಮಾರಿದರೆ ಸುಖಕ್ಕಾಗುವುದು. ನಮಗೆ ಅಷ್ಟು ಸಾಕು” ಎಂದಳು.
ನೇಗೆಯವನಿಗೆ ಹೆಂಡತಿಯ ಮಾತು ಸರಿ ಎನ್ನಿಸಿತು. ಅದರಂತೆ ಹೋಗಿ ಯಕ್ಷವನ್ನು ಕೇಳಲು, ಅದು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟತು. ನೇಗೆಯವನಿಗೆ ಎರಡನೆಯ ತಲೆ ಇನ್ನೆರಡು ತೋಳು ಹುಟ್ಟಿದುವು. ವರವು ಸಿಕ್ಕಿತೆಂದು ಸಂತೋಷದಿಂದ ಅವನೂ ಊರಿಗೆ ಬಂದನು. ಆದರೆ ಊರಿನವರು “ಇದು ಯಾವುದೋ ಭೂತ, ನಮ್ಮ ಊರಿಗೆ ಬರುತ್ತಿದೆ” ಎಂದು ಕಲ್ಲು ಹೊಡೆದು ಅವನನ್ನು ಕೊಂದರು. ಅದರಿಂದ “ತನಗುಂ ಮತಿಯಿಲ್ಲದೆ” ಎಂಬ ಗಾದೆಯನ್ನು ಹೇಳಿದೆನು. ನಿಜ ಯಾರೇ ಆಗಲಿ, ಆಶಾ ಪಿಶಾಚಿಯು ಹಿಡಿದಾಗ ಅಪಹಾಸ್ಯಕ್ಕೆ ಗುರಿಯಾಗುವರು. ಸಂದೇಹವೇನು? ಕೇಳಿಲ್ಲವೆ? :-
ಫಲಿಸದ ಕಾರ್ಯದ ಫಲವಂ ಚಿಂತಿಸಿ | 
ಕೆಲಸವ ಮಾಡುವೆನೆನ್ನಲು ನಿಜವಾಗಿ ॥ 
ಅಪಜಯ ತಪ್ಪದು ತಪ್ಪದು ನಗೆಪಾಡು | 
ಸೋಮನ ತಂದೆಯು ಸಾಕ್ಷಿಯು ತಾನಿದಕೆ ॥ ೨೮ ॥ 
ಎಂದನು. ಸುವರ್ಣಸಿದ್ಧಿಯು “ಅದು ಹೇಗೆ?” ಎನ್ನಲು, ಚಕ್ರಧರನು ಹೇಳಿದನು,
*****
ಸೋಮನ ತಂದೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...