Home / ಕವನ / ಅನುವಾದ / ಅಳಿನಿ

ಅಳಿನಿ

ಅಳಿನಿಯತ್ತಲೆ ಹೋಗೆನಲ್ಲ,
ಇರುಳು ಹಗಲು ಕರೆವಳಲ್ಲ,
ಅಯ್ಯೊ, ಅತ್ತಲೆ ಹೋಗೆನಲ್ಲ,
ಹುಲಿಯಕೋಟೆಯ ಬಯಲಲಿ!
ಹೊಲ್ಲದಾ ಎದೆ ನೆನಹ ನೆನೆದುದು,
ಹೊಲ್ಲದೇ ಕೈ ಗುರಿಯನಿಟ್ಟುದು,
ಅಳಿನಿ, ಅರಗಿಣಿ, ಸತ್ತುಬಿದ್ದುದು
ನನ್ನನುಳಿಸಿ, ತೋಳಲಿ.
ಕುದಿಯದೇ ಎದೆ ಬೆಂಕಿ ಮೂಡಿ,
ಬಿದ್ದು ನುಡಿಯದ ಹೆಣ್ಣ ನೋಡಿ!
ಒಪ್ಪಗೈದೆನು ಬಕುತಿಗೂಡಿ
ಹುಲಿಯಕೋಟೆಯ ಬಯಲಲಿ.
ನೀರ ತಡಿಯಲಿ ನಾನು ಸೇರಿ,
ನನ್ನ ಹಗೆಯೇ ದಾರಿ ತೋರಿ,
ನನ್ನ ಹಗೆಯೇ ದಾರಿ ತೋರಿ,
ಹುಲಿಯಕೋಟೆಯ ಬಯಲಲಿ.
ಇಳಿದು ಕತ್ತಿಯ ಹಿರಿದುಕೊಂಡು,
ತರಿದೆನವನನು ತುಂಡು ತುಂಡು,
ತರಿದೆನವನನು ತುಂಡು ತುಂಡು-
ಸತ್ತವಳ ಹಗೆ ತೀರಲಿ!
ಅಳಿನಿ, ಚೆಲುವೆ! ಹೊಲಲಳವೆ?
ನಿನ್ನ ಕುರುಳನು ಮಾಲೆಗೊಳುವೆ,
ಬಿಡದೆ ಎದೆಯಲಿ ಬಿಗಿದುಕೊಳುವೆ-
ಸತ್ತ ಮೇಲದು ಸಡಿಲಲಿ!
ಅಯ್ಯೋ, ಅತ್ಯಲೆ ಹೋಗೆನಲ್ಲ,
ಇರುಳು ಹಗಲು ಕರೆವಳಲ್ಲ!
ಏಳು ಹಾಸಿಗೆಯುಳಿದು, ನಲ್ಲ,
ಬೇಗ ನೀ ಬಾ ನನ್ನಲಿ!
ಅಳಿನಿ, ಚೆಲುವೆ? ಅಳಿನಿ, ನಾರಿ!
ಏನು ಪುಣ್ಯವೆ ನಿನ್ನ ಸೇರಿ
ನಿದ್ದೆ ಹೋಗಲು ದುಃಖವಾರಿ,
ಹುಲಿಯಕೋಟೆಯ ಬಯಲಲಿ.
ಮೇಲೆ ಹಸುರು ಬೆಳೆಯದಯ್ಯೋ!
ಹಾಳು ಕಣ್ಣು ಮುಚ್ಚದಯ್ಯೋ!
ನಿನ್ನ ತೋಳಲಿ ಬೀಳೆನಯ್ಯೊ!
ಹುಲಿಯಕೋಟೆಯ ಬಯಲಲಿ.
ಅಳಿನಿಯತ್ತಲೆ ಹೋಗೆನಲ್ಲ,
ಇರುಳು ಹಗಲು ಕರೆವಳಲ್ಲ!
ನನಗೆ ಬೆಳಕೇ ಬೇಸರಲ್ಲ
ಒಲುಮೆಯಳಿದೀ ನೆಲದಲಿ!
*****
ANON : Fair Helen
Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...