Home / ಕವನ / ಕವಿತೆ / ಬಸಿರು ಬಯಕೆ

ಬಸಿರು ಬಯಕೆ

ತಂಬಿಟ್ಟು ತಿಳಿದುಪ್ಪ, ನಿ೦ಬಿ ಉಪ್ಪಿನಕಾಯಿ
ರಂಬಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||

ಬಂಗಾರ ಬಳಿಯೊತ್ತಿ, ದುಂಡ ಕಂಕಣವೊತ್ತಿ
ಗೊಂಡೇವು ಒತ್ತಿ ಮಲಗ್ಯಾಳ । ನನ ತಂಗಿ
ದಂಡನಾಳವನ ಬಂಕೀಲಿ ||

ಸಂತೋಷದ ಸುದ್ದಿ, ಸಂತ್ಯಾಗ ಕೇಳೀನಿ
ಕೆಂಚಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||

ಸಜ್ಜೀಯ ರುಚಿ ರೊಟ್ಟಿ, ಸಜ್ಜಕದ ಹೋಳೀಗಿ
ಗಜ್ಜೂರಿ ಚೆಟ್ಟು ಎಳ್ಳೆಣ್ಣಿ | ತಂಗೆವ್ವ
ಗುಜ್ಚಿ ನಿನ ಬಂಕ ತಿಳಿಯಾವ ||

ಕ೦ದನೆ ಕೊಡುಶಿವನ, ಬಂದನ ಬಡಲಾರೆ
ಹಂಗಿನ ಬಾನ ಉಣಲಾರೆ | ಜನದಾಗ
ಬಂಜೆಂಬು ಸಬುದ ಹೊರಲಾರೆ ||

ಆಡುಮಕ್ಕಳ ಕಂಡು, ಬೇಡಿತ್ತ ನನ ಜೀವ
ಕೇಳಿದ್ದನೇನ ತಿವರಾಯ | ಹೊಟ್ಟ್ಯಾಗ
ಮೂಡಿದ್ದನೇನ ಮಗರಾಮ ||

ಹೆಣ್ಣು ಜನುಮಕ ಬಂದೆ, ಮಣ್ಣು ಮಾಡಲಿಬ್ಯಾಡ
ಹೆಣ್ಣುತನ ಶಿವನೆ ಜಗದಾಗ | ಕೈ ಮುಗಿವೆ
ಕಂಡಯ್ನ ಕೊಟ್ಟು ಕಡಿಮಾಡು ||

ಕೂಡಲ ಸಂಗಯ್ಯ, ನೀಡು ಮಕ್ಕಳ ನನಗ
ನನಗಲ್ಲ ನನ್ನ ಗೆಳತೀಗೆ | ಕೊಟ್ಟಽರ
ಬಾಗಿಲಕ-ಹೊನ್ನ ಬಡಿಸೇನ ||

ಬಂಜೀಯ ಮನಿಮುಂದ, ಸಿಂಗಾರ ಗಿಡ ಹುಟ್ಟಿ
ಕೊಂಗಿಕೊಂಗೀಲಿ ಗಿಳಿಕೂತು | ಓದ್ಯಾವ
ಬಂಜಿ ನಿನ ಬದಕು ಹೆರವರಿಗೆ ||

ಹತ್ತು ಗಂಡ್ಹಡದರೂ, ಮತ್ತೆ ಬಂಜೆಂಬೂರು
ದಟ್ಟೀಯ ಉಡುವ ಧರಣೀಯ | ಹಡೆದರ
ಹೆತ್ತಾಯಿಯೆಂದು ಕರೆದಾರ ||

ನಾಕ ಮಕ್ಕಳ ಕೊಟ್ಟು, ಸಾಕು ಮಾಡೊ ಶಿವನೆ
ನಾಕರ ಮ್ಯಾಲೆ ಆರೂತಿ | ಹಿಡಿಯಾಕ
ನಾರಿಯ ಕೊಟ್ಟು ಕಡಿಮಾಡೊ ||

ಗಂಡ ಮಗನ ಬೇಡಿ, ಬಂಡಿಲಿ ಬಾಗೇವ ಬೇಡಿ
ಗಂಡಗಾಸೇವ ಘನಬೇಡಿ | ನನ ಮಗಳು
ತಿಂಗಳೊಂದೊತ್ತು ಹಿಡಿದಾಳ ||

ಬಸರು ಇರುವೆನೆಂದು, ಖುಸಿ ಬಹಳ ಮನದಾಗ
ಹಡೆದೆ ನಾನೆಂಬ ಹವಣಿಕೆ | ಸಂಗಯ್ಯ
ಕರುಣ ತಪ್ಪಿದರ ಮರಣಾವು ||
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...