Home / ಕವನ / ಕವಿತೆ / ಬಸಿರು ಬಯಕೆ

ಬಸಿರು ಬಯಕೆ

ತಂಬಿಟ್ಟು ತಿಳಿದುಪ್ಪ, ನಿ೦ಬಿ ಉಪ್ಪಿನಕಾಯಿ
ರಂಬಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||

ಬಂಗಾರ ಬಳಿಯೊತ್ತಿ, ದುಂಡ ಕಂಕಣವೊತ್ತಿ
ಗೊಂಡೇವು ಒತ್ತಿ ಮಲಗ್ಯಾಳ । ನನ ತಂಗಿ
ದಂಡನಾಳವನ ಬಂಕೀಲಿ ||

ಸಂತೋಷದ ಸುದ್ದಿ, ಸಂತ್ಯಾಗ ಕೇಳೀನಿ
ಕೆಂಚಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||

ಸಜ್ಜೀಯ ರುಚಿ ರೊಟ್ಟಿ, ಸಜ್ಜಕದ ಹೋಳೀಗಿ
ಗಜ್ಜೂರಿ ಚೆಟ್ಟು ಎಳ್ಳೆಣ್ಣಿ | ತಂಗೆವ್ವ
ಗುಜ್ಚಿ ನಿನ ಬಂಕ ತಿಳಿಯಾವ ||

ಕ೦ದನೆ ಕೊಡುಶಿವನ, ಬಂದನ ಬಡಲಾರೆ
ಹಂಗಿನ ಬಾನ ಉಣಲಾರೆ | ಜನದಾಗ
ಬಂಜೆಂಬು ಸಬುದ ಹೊರಲಾರೆ ||

ಆಡುಮಕ್ಕಳ ಕಂಡು, ಬೇಡಿತ್ತ ನನ ಜೀವ
ಕೇಳಿದ್ದನೇನ ತಿವರಾಯ | ಹೊಟ್ಟ್ಯಾಗ
ಮೂಡಿದ್ದನೇನ ಮಗರಾಮ ||

ಹೆಣ್ಣು ಜನುಮಕ ಬಂದೆ, ಮಣ್ಣು ಮಾಡಲಿಬ್ಯಾಡ
ಹೆಣ್ಣುತನ ಶಿವನೆ ಜಗದಾಗ | ಕೈ ಮುಗಿವೆ
ಕಂಡಯ್ನ ಕೊಟ್ಟು ಕಡಿಮಾಡು ||

ಕೂಡಲ ಸಂಗಯ್ಯ, ನೀಡು ಮಕ್ಕಳ ನನಗ
ನನಗಲ್ಲ ನನ್ನ ಗೆಳತೀಗೆ | ಕೊಟ್ಟಽರ
ಬಾಗಿಲಕ-ಹೊನ್ನ ಬಡಿಸೇನ ||

ಬಂಜೀಯ ಮನಿಮುಂದ, ಸಿಂಗಾರ ಗಿಡ ಹುಟ್ಟಿ
ಕೊಂಗಿಕೊಂಗೀಲಿ ಗಿಳಿಕೂತು | ಓದ್ಯಾವ
ಬಂಜಿ ನಿನ ಬದಕು ಹೆರವರಿಗೆ ||

ಹತ್ತು ಗಂಡ್ಹಡದರೂ, ಮತ್ತೆ ಬಂಜೆಂಬೂರು
ದಟ್ಟೀಯ ಉಡುವ ಧರಣೀಯ | ಹಡೆದರ
ಹೆತ್ತಾಯಿಯೆಂದು ಕರೆದಾರ ||

ನಾಕ ಮಕ್ಕಳ ಕೊಟ್ಟು, ಸಾಕು ಮಾಡೊ ಶಿವನೆ
ನಾಕರ ಮ್ಯಾಲೆ ಆರೂತಿ | ಹಿಡಿಯಾಕ
ನಾರಿಯ ಕೊಟ್ಟು ಕಡಿಮಾಡೊ ||

ಗಂಡ ಮಗನ ಬೇಡಿ, ಬಂಡಿಲಿ ಬಾಗೇವ ಬೇಡಿ
ಗಂಡಗಾಸೇವ ಘನಬೇಡಿ | ನನ ಮಗಳು
ತಿಂಗಳೊಂದೊತ್ತು ಹಿಡಿದಾಳ ||

ಬಸರು ಇರುವೆನೆಂದು, ಖುಸಿ ಬಹಳ ಮನದಾಗ
ಹಡೆದೆ ನಾನೆಂಬ ಹವಣಿಕೆ | ಸಂಗಯ್ಯ
ಕರುಣ ತಪ್ಪಿದರ ಮರಣಾವು ||
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...