Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ಅದು ಶುಕ್ರವಾರ, ಜೂನ ೧೨, ನಾನು ಬೆಳಿಗ್ಗೆ ಆರಕ್ಕೆಲ್ಲಾ ಎದ್ದೆ. ಅಂದು ನನ್ನ ಹುಟ್ಟಿದ ದಿನ. ಆದರೆ ನಾನು ಅಷ್ಟು ಬೇಗನೇ ಏಳುವಂತಿರಲಿಲ್ಲ. ನನ್ನ ಆತುರವನ್ನು ಆರು ಮುಕ್ಕಾಲು ಗಂಟೆಯವರೆಗೂ ಅದು ಹೇಗೋ ತಡೆದುಕೊಳ್ಳಬೇಕಿತ್ತು. ಆನಂತರ ಎದ್ದು ಡೈನಿಂಗ್ ಕೋಣೆಗೆ ಹೋದೆ. ಅಲ್ಲಿ ನಮ್ಮ ಬೆಕ್ಕು ಮೂರ್ಜೆ ನನ್ನನ್ನು ಪ್ರೀತಿಯಿಂದ ಇದಿರುಗೊಂಡಿತು.
ಏಳು ಹೊಡೆಯುತ್ತಿದ್ದಂತೆ ಅಪ್ಪ ಅಮ್ಮನಿದ್ದಲ್ಲಿಗೆ ಹೋದೆ. ನಂತರ ಹೊರ ಜಗಲಿಯ ಮೇಲೆ ಬಂದು ನನಗೆ ಬಂದ ಕಾಣಿಕೆಗಳನ್ನು ಬಿಚ್ಚತೊಡಗಿದೆ. ಅದರಲ್ಲಿ ಮೊದಲ ಶುಭಾಶಯ ನಿನ್ನದಾಗಿತ್ತು. ಅದೇ ಎಲ್ಲಕ್ಕಿಂತಲೂ ಚೆಂದದ್ದಾಗಿತ್ತು. ಮೇಜಿನ ಮೇಲೆ ಹೂ ಗೊಂಚಲು, ಒಂದು ಸಸಿ, ಹಾಗೂ ಪಿಯೋನಿ ಗಿಡಗಳು [ಒಂದೇ ಸಲಕ್ಕೆ ಎರಡು ಹೂ ಬಿಡುವ ದೊಡ್ಡ ಸಸ್ಯ.] ಹಾಗೂ ಇನ್ನಿತರ ಅನೇಕ ವಸ್ತುಗಳಿದ್ದವು.

ಅಪ್ಪ ಅಮ್ಮ ನನಗೆ ಎಷ್ಟೊಂದು ವಸ್ತುಗಳನ್ನು ತಂದಿದ್ದರು. ಆ ದಿನ ಗೆಳೆಯರೆಲ್ಲ ನನ್ನನ್ನು ಸಾಕಷ್ಟು ಸತಾಯಿಸಿದರು. ಉಳಿದೆಲ್ಲ ವಸ್ತುಗಳ ಜೊತೆ ಜೊತೆಗೆ ನನಗೊಂದು ಒಬ್ಸ್ಕುರಾ ಕ್ಯಾಮರಾ, ಒಂದು ಪಾರ್ಟಿ ಗೇಮ್, ಸಾಕಷ್ಟು ಸಿಹಿತಿನಿಸುಗಳು, ಚಾಕಲೇಟುಗಳು, ಜೋಸೆಫ್ ಕೋಹೆನ್‌ನ “Tales and Legends of the Netherland”, “Daisy’s Mountain Holiday” ಮತ್ತು ಸ್ವಲ್ಪ ಹಣವೂ ಕಾಣಿಕೆ ರೂಪದಲ್ಲಿ ಸಿಕ್ಕಿತು. ಅದರಿಂದ “The Myths of Greece and Rome-Grand” ಖರೀದಿಸಬಹುದು.

ಅಷ್ಟೊತ್ತಿಗೆ ಲೀಸ್ ನನ್ನನ್ನು ಕರೆಯಲು ಬಂದಳು ಮತ್ತು ನಾವು ಶಾಲೆಗೆ ಹೋದೆವು. ವಿರಾಮದ ವೇಳೆಯಲ್ಲಿ ಎಲ್ಲರಿಗೂ ಸಿಹಿ ಬಿಸ್ಕೀಟುಗಳನ್ನು ನೀಡಿದೆ. ನಂತರ ನಾವು ಪಾಠಗಳಗೆ ಹಿಂದಿರುಗಬೇಕಿತ್ತು.

ಇವತ್ತು ಇಲ್ಲಿಗೆ ಸಾಕು- ಬೈ ಬೈ – ನಾವೀಗ ಒಳ್ಳೆಯ ಸ್ನೇಹಿತರಾಗುತ್ತಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...