Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ಅದು ಶುಕ್ರವಾರ, ಜೂನ ೧೨, ನಾನು ಬೆಳಿಗ್ಗೆ ಆರಕ್ಕೆಲ್ಲಾ ಎದ್ದೆ. ಅಂದು ನನ್ನ ಹುಟ್ಟಿದ ದಿನ. ಆದರೆ ನಾನು ಅಷ್ಟು ಬೇಗನೇ ಏಳುವಂತಿರಲಿಲ್ಲ. ನನ್ನ ಆತುರವನ್ನು ಆರು ಮುಕ್ಕಾಲು ಗಂಟೆಯವರೆಗೂ ಅದು ಹೇಗೋ ತಡೆದುಕೊಳ್ಳಬೇಕಿತ್ತು. ಆನಂತರ ಎದ್ದು ಡೈನಿಂಗ್ ಕೋಣೆಗೆ ಹೋದೆ. ಅಲ್ಲಿ ನಮ್ಮ ಬೆಕ್ಕು ಮೂರ್ಜೆ ನನ್ನನ್ನು ಪ್ರೀತಿಯಿಂದ ಇದಿರುಗೊಂಡಿತು.
ಏಳು ಹೊಡೆಯುತ್ತಿದ್ದಂತೆ ಅಪ್ಪ ಅಮ್ಮನಿದ್ದಲ್ಲಿಗೆ ಹೋದೆ. ನಂತರ ಹೊರ ಜಗಲಿಯ ಮೇಲೆ ಬಂದು ನನಗೆ ಬಂದ ಕಾಣಿಕೆಗಳನ್ನು ಬಿಚ್ಚತೊಡಗಿದೆ. ಅದರಲ್ಲಿ ಮೊದಲ ಶುಭಾಶಯ ನಿನ್ನದಾಗಿತ್ತು. ಅದೇ ಎಲ್ಲಕ್ಕಿಂತಲೂ ಚೆಂದದ್ದಾಗಿತ್ತು. ಮೇಜಿನ ಮೇಲೆ ಹೂ ಗೊಂಚಲು, ಒಂದು ಸಸಿ, ಹಾಗೂ ಪಿಯೋನಿ ಗಿಡಗಳು [ಒಂದೇ ಸಲಕ್ಕೆ ಎರಡು ಹೂ ಬಿಡುವ ದೊಡ್ಡ ಸಸ್ಯ.] ಹಾಗೂ ಇನ್ನಿತರ ಅನೇಕ ವಸ್ತುಗಳಿದ್ದವು.

ಅಪ್ಪ ಅಮ್ಮ ನನಗೆ ಎಷ್ಟೊಂದು ವಸ್ತುಗಳನ್ನು ತಂದಿದ್ದರು. ಆ ದಿನ ಗೆಳೆಯರೆಲ್ಲ ನನ್ನನ್ನು ಸಾಕಷ್ಟು ಸತಾಯಿಸಿದರು. ಉಳಿದೆಲ್ಲ ವಸ್ತುಗಳ ಜೊತೆ ಜೊತೆಗೆ ನನಗೊಂದು ಒಬ್ಸ್ಕುರಾ ಕ್ಯಾಮರಾ, ಒಂದು ಪಾರ್ಟಿ ಗೇಮ್, ಸಾಕಷ್ಟು ಸಿಹಿತಿನಿಸುಗಳು, ಚಾಕಲೇಟುಗಳು, ಜೋಸೆಫ್ ಕೋಹೆನ್‌ನ “Tales and Legends of the Netherland”, “Daisy’s Mountain Holiday” ಮತ್ತು ಸ್ವಲ್ಪ ಹಣವೂ ಕಾಣಿಕೆ ರೂಪದಲ್ಲಿ ಸಿಕ್ಕಿತು. ಅದರಿಂದ “The Myths of Greece and Rome-Grand” ಖರೀದಿಸಬಹುದು.

ಅಷ್ಟೊತ್ತಿಗೆ ಲೀಸ್ ನನ್ನನ್ನು ಕರೆಯಲು ಬಂದಳು ಮತ್ತು ನಾವು ಶಾಲೆಗೆ ಹೋದೆವು. ವಿರಾಮದ ವೇಳೆಯಲ್ಲಿ ಎಲ್ಲರಿಗೂ ಸಿಹಿ ಬಿಸ್ಕೀಟುಗಳನ್ನು ನೀಡಿದೆ. ನಂತರ ನಾವು ಪಾಠಗಳಗೆ ಹಿಂದಿರುಗಬೇಕಿತ್ತು.

ಇವತ್ತು ಇಲ್ಲಿಗೆ ಸಾಕು- ಬೈ ಬೈ – ನಾವೀಗ ಒಳ್ಳೆಯ ಸ್ನೇಹಿತರಾಗುತ್ತಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...