Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ೧೪ ಜೂನ, ೧೯೪೨

ಅದು ಶುಕ್ರವಾರ, ಜೂನ ೧೨, ನಾನು ಬೆಳಿಗ್ಗೆ ಆರಕ್ಕೆಲ್ಲಾ ಎದ್ದೆ. ಅಂದು ನನ್ನ ಹುಟ್ಟಿದ ದಿನ. ಆದರೆ ನಾನು ಅಷ್ಟು ಬೇಗನೇ ಏಳುವಂತಿರಲಿಲ್ಲ. ನನ್ನ ಆತುರವನ್ನು ಆರು ಮುಕ್ಕಾಲು ಗಂಟೆಯವರೆಗೂ ಅದು ಹೇಗೋ ತಡೆದುಕೊಳ್ಳಬೇಕಿತ್ತು. ಆನಂತರ ಎದ್ದು ಡೈನಿಂಗ್ ಕೋಣೆಗೆ ಹೋದೆ. ಅಲ್ಲಿ ನಮ್ಮ ಬೆಕ್ಕು ಮೂರ್ಜೆ ನನ್ನನ್ನು ಪ್ರೀತಿಯಿಂದ ಇದಿರುಗೊಂಡಿತು.
ಏಳು ಹೊಡೆಯುತ್ತಿದ್ದಂತೆ ಅಪ್ಪ ಅಮ್ಮನಿದ್ದಲ್ಲಿಗೆ ಹೋದೆ. ನಂತರ ಹೊರ ಜಗಲಿಯ ಮೇಲೆ ಬಂದು ನನಗೆ ಬಂದ ಕಾಣಿಕೆಗಳನ್ನು ಬಿಚ್ಚತೊಡಗಿದೆ. ಅದರಲ್ಲಿ ಮೊದಲ ಶುಭಾಶಯ ನಿನ್ನದಾಗಿತ್ತು. ಅದೇ ಎಲ್ಲಕ್ಕಿಂತಲೂ ಚೆಂದದ್ದಾಗಿತ್ತು. ಮೇಜಿನ ಮೇಲೆ ಹೂ ಗೊಂಚಲು, ಒಂದು ಸಸಿ, ಹಾಗೂ ಪಿಯೋನಿ ಗಿಡಗಳು [ಒಂದೇ ಸಲಕ್ಕೆ ಎರಡು ಹೂ ಬಿಡುವ ದೊಡ್ಡ ಸಸ್ಯ.] ಹಾಗೂ ಇನ್ನಿತರ ಅನೇಕ ವಸ್ತುಗಳಿದ್ದವು.

ಅಪ್ಪ ಅಮ್ಮ ನನಗೆ ಎಷ್ಟೊಂದು ವಸ್ತುಗಳನ್ನು ತಂದಿದ್ದರು. ಆ ದಿನ ಗೆಳೆಯರೆಲ್ಲ ನನ್ನನ್ನು ಸಾಕಷ್ಟು ಸತಾಯಿಸಿದರು. ಉಳಿದೆಲ್ಲ ವಸ್ತುಗಳ ಜೊತೆ ಜೊತೆಗೆ ನನಗೊಂದು ಒಬ್ಸ್ಕುರಾ ಕ್ಯಾಮರಾ, ಒಂದು ಪಾರ್ಟಿ ಗೇಮ್, ಸಾಕಷ್ಟು ಸಿಹಿತಿನಿಸುಗಳು, ಚಾಕಲೇಟುಗಳು, ಜೋಸೆಫ್ ಕೋಹೆನ್‌ನ “Tales and Legends of the Netherland”, “Daisy’s Mountain Holiday” ಮತ್ತು ಸ್ವಲ್ಪ ಹಣವೂ ಕಾಣಿಕೆ ರೂಪದಲ್ಲಿ ಸಿಕ್ಕಿತು. ಅದರಿಂದ “The Myths of Greece and Rome-Grand” ಖರೀದಿಸಬಹುದು.

ಅಷ್ಟೊತ್ತಿಗೆ ಲೀಸ್ ನನ್ನನ್ನು ಕರೆಯಲು ಬಂದಳು ಮತ್ತು ನಾವು ಶಾಲೆಗೆ ಹೋದೆವು. ವಿರಾಮದ ವೇಳೆಯಲ್ಲಿ ಎಲ್ಲರಿಗೂ ಸಿಹಿ ಬಿಸ್ಕೀಟುಗಳನ್ನು ನೀಡಿದೆ. ನಂತರ ನಾವು ಪಾಠಗಳಗೆ ಹಿಂದಿರುಗಬೇಕಿತ್ತು.

ಇವತ್ತು ಇಲ್ಲಿಗೆ ಸಾಕು- ಬೈ ಬೈ – ನಾವೀಗ ಒಳ್ಳೆಯ ಸ್ನೇಹಿತರಾಗುತ್ತಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...