Home / ಕವನ / ಕವಿತೆ / ಕಡಲ ಹುಣ್ಣಿಮೆ

ಕಡಲ ಹುಣ್ಣಿಮೆ

ಎಂತು ಬಿದ್ದೇಳುತಿಹುದು ನೋಡು ಬಿತ್ತರದ ವಾರಿಧಿಯು!
ಎಲ್ಲಿಹರೀ ಮಂಥನವ ಗೆಯ್ವ ದೇವತೆಗಳು?
ಬರಿಗಣ್ಣಿಗೆ ಕಾಣದೆ ಲಯವಾದರು ಬಯಲಿನಲ್ಲಿ:
ಕಾಣುವದು ಮಂಥನವೊಂದು; ಅಲ್ಲುದಿಸಿದ ಚಂದ್ರಮನೊಂದು,-
ಕಡಲಾಳವನುಗಿದು ಒಂದ ತುಂಬುವೆರೆ ತಾನು!

ಮುಗಿಲು ಕದ್ದ ರತ್ನೇ೦ದುವ ಕಂಡು ಮತ್ತಂತರಾಳದಿ ಬಚ್ಚಿಡುವ
ಹುಮ್ಮಸದಿ ಬಿಮ್ಮನೆ ಬಿಗಿಯುತಿದೆ ನೋಡು ಸಾಗರವು,
ಮುಗಿಲನಗಲವನೆಲ್ಲ ಮುಚ್ಚಿಬಿಡಲೆಂಬಂತೆ.
ಸೆರೆಸಿಕ್ಕ ನಾಯಕನ ಬಡಿಸಿಕೊಳಲೆಳಸುವ ಸೈನ್ಯದಂತೆ,
ಶತ್ರುಗಳ ಚದರಿಸಿ ಚಕ್ರವರ್ತಿಯ ಪಡೆವ ಸಾಮ್ರಾಜ್ಯದಂತೆ,
ಬಂಧನದಲಿದ್ದ ಲೋಕನಾಯಕನ ಬಿಡುಗಡೆಗೆದ್ದ ನಾಡವರಂತೆ:
ರೇಗುತಿದೆ, ಕಾಡುತಿದೆ, ಗದ್ದರಿಸಿ ಬೇಡುತಿದೆ ನೋಡು, ಸಾಗರವು!

ಅಲ್ಲ, ಸಾಗರವಲ್ಲವಿದು: ಶೂನ್ಯದ ತವರುಮನೆ, ನಶ್ವರತೆಯಾಗರವು;
ವಿಶ್ವವ ರಚಿಸಿದ ಪಂಚಭೂತಗಳ ಮೂಲಭೂತವಿದು,
ರಸವಾಗದ ಕಸ, ಅವಿದ್ಯೆ, ಅಂಧಂತಮಸ್ಸು.
ತನ್ನೆದೆಯುಗಿದು ಮುಗಿಲೆತ್ತಿದ ಚಂದ್ರನನ್ನು ಮುಳುಗಿಸಲೆನೆ
ಮತ್ತೆ ತೆರೆಗಳ ಜಾಲವ ಬೀಸಿದವ್ಯಕ್ತವಿದು.
ಪೆಡಂಭೂತಗಳು ಕುಣಿಯುವವು,-ತೆರೆಗಳ ಹೆಡೆಗಳ ಮೇಲೆ.
ಕೊಳ್ಳಿದೆವ್ವಗಳು ಬಳ್ಳಿಗಟ್ಟುವವು,-ಕರಿನೀರ ಕಂದರದಲ್ಲಿ.
ಪ್ರಳಯಕೌ‌ತಣವೀಯುವದು ಬ್ರಹ್ಮರಾಕ್ಷಸರ ಶಂಖನಾದ.
ಅಲ್ಲ, ಸಾಗರವಲ್ಲವಿದು : ಭಯಾನಕದಾಗರ!

ಮುಗಿಲೆಣಿಕೆಯನ್ನಳೆದವರಾರು?
ಹೃದಯಮಂಡಪದಿ ಮಂಡಿಸಿದ ಚಂದ್ರನನು ರಕ್ಷಿಸಲೆನೆ,-
ಮುಗಿಲಿಟ್ಟಿಹುದು ನೋಡು, ನಕ್ಷತ್ರಗಳ ಕಾವಲನ್ನು!
ಮುತ್ತುವೆದೆಗಾರಿಕೆಯಿರದೆ ಮೆತ್ತಗಾಗೆರಗಿಹುದು
ಚಂದ್ರನಡಿಗಂಗಲಾಚಿ,-ಮುನ್ನೀರಿದು ಬಡವನಂತೆ.
ಮುಗಿಲೆಣಿಕೆಯನ್ನಳೆದವರಾರು?

ಪರಿಧಾನದಿ ಸುರಿಯುತಿರೆ ಶುಂಬುವೆರೆಯ ಕಿರಣರಾಶಿ,
ಬೆಳಕ ಹೊಳೆಯೊಂದು ಹರಿದು ಭೇದಿಸಿದೆ ನೀಲೋದಧಿಯ.
ತುದಿಮೊದಲಿಗೆ ಕತ್ತಲೆ,-ನಡುವಷ್ಟೆ ಬೆಳಕು!
ತಾನೊಸೆದ ಚಂದ್ರಮನು ದೊರೆಯದಿರೆ, ದೊರೆಶ ಪಡಿನೆಳಲನ್ನು,-
ಮಣಿಸುತ ಕೋಟಿ ವಿಧಾನಗಳಿಂದ
ಎದೆಗವಚಿ ಕಳೆಯೇರಿ ಸಂತವಿಸಿಕೊಳುವದು ನೋಡಾ ಸಾಗರವು!
*****

Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...