Home / ಕವನ / ಕವಿತೆ / ಕಡಲ ಹುಣ್ಣಿಮೆ

ಕಡಲ ಹುಣ್ಣಿಮೆ

ಎಂತು ಬಿದ್ದೇಳುತಿಹುದು ನೋಡು ಬಿತ್ತರದ ವಾರಿಧಿಯು!
ಎಲ್ಲಿಹರೀ ಮಂಥನವ ಗೆಯ್ವ ದೇವತೆಗಳು?
ಬರಿಗಣ್ಣಿಗೆ ಕಾಣದೆ ಲಯವಾದರು ಬಯಲಿನಲ್ಲಿ:
ಕಾಣುವದು ಮಂಥನವೊಂದು; ಅಲ್ಲುದಿಸಿದ ಚಂದ್ರಮನೊಂದು,-
ಕಡಲಾಳವನುಗಿದು ಒಂದ ತುಂಬುವೆರೆ ತಾನು!

ಮುಗಿಲು ಕದ್ದ ರತ್ನೇ೦ದುವ ಕಂಡು ಮತ್ತಂತರಾಳದಿ ಬಚ್ಚಿಡುವ
ಹುಮ್ಮಸದಿ ಬಿಮ್ಮನೆ ಬಿಗಿಯುತಿದೆ ನೋಡು ಸಾಗರವು,
ಮುಗಿಲನಗಲವನೆಲ್ಲ ಮುಚ್ಚಿಬಿಡಲೆಂಬಂತೆ.
ಸೆರೆಸಿಕ್ಕ ನಾಯಕನ ಬಡಿಸಿಕೊಳಲೆಳಸುವ ಸೈನ್ಯದಂತೆ,
ಶತ್ರುಗಳ ಚದರಿಸಿ ಚಕ್ರವರ್ತಿಯ ಪಡೆವ ಸಾಮ್ರಾಜ್ಯದಂತೆ,
ಬಂಧನದಲಿದ್ದ ಲೋಕನಾಯಕನ ಬಿಡುಗಡೆಗೆದ್ದ ನಾಡವರಂತೆ:
ರೇಗುತಿದೆ, ಕಾಡುತಿದೆ, ಗದ್ದರಿಸಿ ಬೇಡುತಿದೆ ನೋಡು, ಸಾಗರವು!

ಅಲ್ಲ, ಸಾಗರವಲ್ಲವಿದು: ಶೂನ್ಯದ ತವರುಮನೆ, ನಶ್ವರತೆಯಾಗರವು;
ವಿಶ್ವವ ರಚಿಸಿದ ಪಂಚಭೂತಗಳ ಮೂಲಭೂತವಿದು,
ರಸವಾಗದ ಕಸ, ಅವಿದ್ಯೆ, ಅಂಧಂತಮಸ್ಸು.
ತನ್ನೆದೆಯುಗಿದು ಮುಗಿಲೆತ್ತಿದ ಚಂದ್ರನನ್ನು ಮುಳುಗಿಸಲೆನೆ
ಮತ್ತೆ ತೆರೆಗಳ ಜಾಲವ ಬೀಸಿದವ್ಯಕ್ತವಿದು.
ಪೆಡಂಭೂತಗಳು ಕುಣಿಯುವವು,-ತೆರೆಗಳ ಹೆಡೆಗಳ ಮೇಲೆ.
ಕೊಳ್ಳಿದೆವ್ವಗಳು ಬಳ್ಳಿಗಟ್ಟುವವು,-ಕರಿನೀರ ಕಂದರದಲ್ಲಿ.
ಪ್ರಳಯಕೌ‌ತಣವೀಯುವದು ಬ್ರಹ್ಮರಾಕ್ಷಸರ ಶಂಖನಾದ.
ಅಲ್ಲ, ಸಾಗರವಲ್ಲವಿದು : ಭಯಾನಕದಾಗರ!

ಮುಗಿಲೆಣಿಕೆಯನ್ನಳೆದವರಾರು?
ಹೃದಯಮಂಡಪದಿ ಮಂಡಿಸಿದ ಚಂದ್ರನನು ರಕ್ಷಿಸಲೆನೆ,-
ಮುಗಿಲಿಟ್ಟಿಹುದು ನೋಡು, ನಕ್ಷತ್ರಗಳ ಕಾವಲನ್ನು!
ಮುತ್ತುವೆದೆಗಾರಿಕೆಯಿರದೆ ಮೆತ್ತಗಾಗೆರಗಿಹುದು
ಚಂದ್ರನಡಿಗಂಗಲಾಚಿ,-ಮುನ್ನೀರಿದು ಬಡವನಂತೆ.
ಮುಗಿಲೆಣಿಕೆಯನ್ನಳೆದವರಾರು?

ಪರಿಧಾನದಿ ಸುರಿಯುತಿರೆ ಶುಂಬುವೆರೆಯ ಕಿರಣರಾಶಿ,
ಬೆಳಕ ಹೊಳೆಯೊಂದು ಹರಿದು ಭೇದಿಸಿದೆ ನೀಲೋದಧಿಯ.
ತುದಿಮೊದಲಿಗೆ ಕತ್ತಲೆ,-ನಡುವಷ್ಟೆ ಬೆಳಕು!
ತಾನೊಸೆದ ಚಂದ್ರಮನು ದೊರೆಯದಿರೆ, ದೊರೆಶ ಪಡಿನೆಳಲನ್ನು,-
ಮಣಿಸುತ ಕೋಟಿ ವಿಧಾನಗಳಿಂದ
ಎದೆಗವಚಿ ಕಳೆಯೇರಿ ಸಂತವಿಸಿಕೊಳುವದು ನೋಡಾ ಸಾಗರವು!
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...