Home / ಕವನ / ಕವಿತೆ / ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ಇರಬಹುದು ಭೂಲೋಕದಲ್ಲಿ ನಂದನವನವು;
ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು;
ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು!
ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ;
ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ
ಘನ್ನಮಹಿಮರ ನೋಡಿ ಸಾಃಕ್ರಟೀಸನಿಗೆರಗಿ, ವಂದಿಸಿ ಯುರೀಪಿಡಿಸನ!

ಆಗ ಬಂತೆದುರಾಗಿ ದೇವತೆಗಳನುರಾಗ;
ಸಾಗಿದೆನು ಜುಪಿಟಿರನ ಇಂದ್ರಪದನಿಯ ಕಂಡು
ತೂಗಿದೆನು ಹರುಷದಲಿ ಹರ್ಕ್ಯುಲೀಸನ ಬಲಕೆ, ಮರ್‍ಕ್ಯುರಿಯ ಬುದ್ಧಿ ಬಲಕೆ!
ನೋಡಿಲ್ಲಿ: ರವಿ-ಅಪಾಃಲೋನ ಶರಸಂಧಾನ!
ಬೇಡಿಲ್ಲಿ: ಓಶಿಯಾನಸನಿಗಿಹ ಕಡಲ ಸಿರಿ!
ಮಾಡಿಲ್ಲಿ ಮುಜುರೆಯನು: ಮತ್ತಿತರ ಸುರರೆಲ್ಲ ನಿಂತಿಹರು ವೈಭವದಲಿ!

ಕಂಡಿತಿಲ್ಲಿಯೆ ಆಫ್ರಿದಿತಿಯ ಮಾಲಕುಮಿ ಕಳೆ;
ಚಂದದಲಿ ಮಲಗಿಹಳು ಒಲಿದ ದೇಸೆಯಿದೇವಿ,
ವಂದಿಸಿದೆ ಭೂಗೋಲವನ್ನೆ ಕೈಯ್ಯಲಿ ಹಿಡಿದು ನಿಂತಿಹ ಯುರ್ಸಾನಿಯಳಿಗೆ!
ಆದಿಶೇಷನ ಭಾರವನೆ ಹೊತ್ತ ಅಟ್ಲಾಸ,
ನೋಡಿ ತನ್ನನು ತನ್ನೊಳೊಸೆದಿರುವ ನಾರ್‌ಸಿಸಸ!
ಹಾಡುವರು ಕೊಳಲೂದಿ ಯಕ್ಷಕಿನ್ನರರಂತೆ ಮತ್ತೆ ಸ್ಯಾ:ಟಿರ-ಫಾಃನರು!

ಅಹುದಹುದು! ಭೂಮಿಗಿಳಿದರು ಸ್ವರ್ಗದವರಿಲ್ಲಿ.
ಅಹಹ! ತಮ್ಮೊಳು ತಾವೆ ಆಳುವರು, ಬಾಳುವರು!
ಇಹರು ಕಾಲನ ಮೀರಿ ನಿಂತ ಚಕ್ರೇಶ್ವರರು ಕಾಲನೊಳನಾಡಿನಲ್ಲಿ!
ಅಹುದಾದರೋಂ ನಮೋ! ಶಿಲ್ಪಿಗಳ ಜೀವನಕೆ!
ಕಹಿ ಬಾಳ ವಿಷವನ್ನು ಕುಡಿದರಗಳಿಗೆ ಬಾಳಿ
ಸಹಿಸಿದರು ಮರಣವನು ತಮ್ಮಾತ್ಮದಮರತೆಯನಿತ್ತು ಬಾನ್ನವರಿಗೆಂದು!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...