
ಹಂಪಿಯು ಶರಣರಿಗೆ, ಸಂಪಾದ ಪಟ್ಟಣ
ಕಂಪಲಿದು ನೆರಳು ಶರಣರಿಗೊ | ತುರುಕರಿಗೆ
ಕಂಪನವು ಕೇಳಿ ಎದೆಯಾಗೊ ೧
ಕಂಪಽಲಿ ರಾಯಽಗ, ಹಂಪಿ ವಿರುಪನ ಶಾಪ
ದಂಪತಿಗೆ ಬಂತೊ ವನವಾಸೊ । ಕಂಪಲಿಯು
ಸಿಂಪಾಗಿ ಸಿಡಿದು ಹಾಳಾತೊ
ಬೆಚ್ಚಪ್ಪ ಲಿಂಗಯ್ಯ, ಹೆಚ್ಚಿನಽ ಮಂತ್ರಿಗಳು
ರೊಚ್ಚಿಽನ ಕತ್ತಿ ರಣ ಕಟ್ಟಿ | ತುರುಕಽರು
ಹುಚ್ಚೆದ್ದು ಓಡಿ ರಣಬಿಟ್ಟು
ಮಾನವನೆ ಕಳಕೊಂಡು, ಬಾನರೋಡಿದರಂದು
ಖೂನಿ ಮಾಡುವದಕೆ ಮಾತಂಗಿ | ಹೆಣ್ಣೆದೆ
ಮಾನಗೇಡ್ಯಾಗಿ ಒಳಸಂಚು
ಕೊಂಕಣದ ಮಾತಂಗಿ, ಬಿಂಕ ಮಾದರ ಹುಡುಗಿ
ಕೊಂಕ ಗುಣ ಹೆಣ್ಣು ತುರುಕರಿಗೆ | ಮನಸೋತು
ವುಂಕಿ ಹಾಕ್ಯಾಳೊ ಕಂಪಲಿಗೊ ೫
ರಾಮರಾಯನು ಬಿದ್ದ, ನಾಮ ನಿರ್ನಾಮಾತೊ
ಧೂಮಧೂಮಾತೊ ಕಂಪಲಿಯೊ | ನಾರೇರ
ಹೇಮಕೊಂಡೊತಾ ಕಿಚ್ಚಾತೊ
ಏಳು ರಾಯರ ಗಂಡ, ಗಾಳರಿಗೆ ಕಾಟಣ್ಣ
ತಾಳದಲೆ ಕೊ೦ದ ಮಾತಂಗಿ | ಒಡೆಯಾಗ
ಕಾಳಗದಿ ಕಾದು ರಣಕಾದ
ಕಂಪಽಲಿ ಹಾಳಾಗಿ, ಕೊಂಪೆಯಾಯಿತು ನಸಿಬ
ಸಂಪತ್ತು ಹೊತ್ತು ತುರುಕರಿಗೊ | ಲಿಂಗಯ್ಯ
ಜಂಪಿಲ್ದ ಮಡಿದ ರಣರಾಗೊ ೮
*****
















