Home / ಕವನ / ಕವಿತೆ / ಕಂಪಲಿ

ಕಂಪಲಿ

ಹಂಪಿಯು ಶರಣರಿಗೆ, ಸಂಪಾದ ಪಟ್ಟಣ
ಕಂಪಲಿದು ನೆರಳು ಶರಣರಿಗೊ | ತುರುಕರಿಗೆ
ಕಂಪನವು ಕೇಳಿ ಎದೆಯಾಗೊ  ೧
ಕಂಪಽಲಿ ರಾಯಽಗ, ಹಂಪಿ ವಿರುಪನ ಶಾಪ
ದಂಪತಿಗೆ ಬಂತೊ ವನವಾಸೊ । ಕಂಪಲಿಯು
ಸಿಂಪಾಗಿ ಸಿಡಿದು ಹಾಳಾತೊ
ಬೆಚ್ಚಪ್ಪ ಲಿಂಗಯ್ಯ, ಹೆಚ್ಚಿನಽ ಮಂತ್ರಿಗಳು
ರೊಚ್ಚಿಽನ ಕತ್ತಿ ರಣ ಕಟ್ಟಿ | ತುರುಕಽರು
ಹುಚ್ಚೆದ್ದು ಓಡಿ ರಣಬಿಟ್ಟು
ಮಾನವನೆ ಕಳಕೊಂಡು, ಬಾನರೋಡಿದರಂದು
ಖೂನಿ ಮಾಡುವದಕೆ ಮಾತಂಗಿ | ಹೆಣ್ಣೆದೆ
ಮಾನಗೇಡ್ಯಾಗಿ ಒಳಸಂಚು
ಕೊಂಕಣದ ಮಾತಂಗಿ, ಬಿಂಕ ಮಾದರ ಹುಡುಗಿ
ಕೊಂಕ ಗುಣ ಹೆಣ್ಣು ತುರುಕರಿಗೆ | ಮನಸೋತು
ವುಂಕಿ ಹಾಕ್ಯಾಳೊ ಕಂಪಲಿಗೊ  ೫
ರಾಮರಾಯನು ಬಿದ್ದ, ನಾಮ ನಿರ್ನಾಮಾತೊ
ಧೂಮಧೂಮಾತೊ ಕಂಪಲಿಯೊ | ನಾರೇರ
ಹೇಮಕೊಂಡೊತಾ ಕಿಚ್ಚಾತೊ
ಏಳು ರಾಯರ ಗಂಡ, ಗಾಳರಿಗೆ ಕಾಟಣ್ಣ
ತಾಳದಲೆ ಕೊ೦ದ ಮಾತಂಗಿ | ಒಡೆಯಾಗ
ಕಾಳಗದಿ ಕಾದು ರಣಕಾದ
ಕಂಪಽಲಿ ಹಾಳಾಗಿ, ಕೊಂಪೆಯಾಯಿತು ನಸಿಬ
ಸಂಪತ್ತು ಹೊತ್ತು ತುರುಕರಿಗೊ | ಲಿಂಗಯ್ಯ
ಜಂಪಿಲ್ದ ಮಡಿದ ರಣರಾಗೊ  ೮
*****
Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...