Home / ಕವನ / ಕವಿತೆ / ನಾಗರಿಕ ಅವತಾರಿ

ನಾಗರಿಕ ಅವತಾರಿ

ತಾಯಿ ಹೊರಳಿದಳು ನರಳಿ ಸುಪ್ತ ಮನಸಿನಲೇನೊ ತುಂಬ ಕನಸು;
ಹಗಲೆಲ್ಲ ದುಡಿದು ದಣಿದಿಹ ದೇಹ-
ಯಾವಾಗ ನೆಲವ ಕಂಡೇನೆಂದು ತೂಗಿ ಮಲಗಿರಬೇಕು.
ಮೈ ಮುದುರಿ ಮಲಗಿರುವ ಎಲುಬು ಹಂದರ ಗೂಡು
ಮುರಿದು ಬಿದ್ದಿಹ ಹಳೆಯ ಕೊಡೆಯ ಪಾಡು;
ಆದರೂ….ಆದರೂ….
ಬದುಕಬೇಕೆನುವಾಸೆ ಬಹಳ ಹಿರಿದು!
ಮಲಗುವಾಗಲೆ ತಾಯಿ-
ಹಸಿದ ಕೂಸಿಗೆ ಮೊಲೆಯನುಣಿಸಿದಳು
ಚಪ್ಪಡಿಸಿ ತೂಗಿದಳು ತೊಟ್ಟಿಲಲ್ಲಿ;
ಇಷ್ಟರಲ್ಲಿಯೆ ಎಣ್ಣೆ ತೀರಿ ಆರೇನೆಂದು
ಕಣ್ಣಿನಲ್ಲಿಯೆ ಜೀವ ಹಿಡಿದಿತ್ತು
ಕುರುಡಿ ಚಿಮಣಿಯ ದೀಪ ಜಗುಲಿಯಲ್ಲಿ.
ನೂರು ನೋವಿನ ಸಂತೆ ಜಗದ ಗುಜುಗುಜು ಗುಲ್ಲು
ಇರುಳಿನಲಿ ಮೈಮರೆತು ಮಲಗಿ ಬಿಟ್ಟಿಹವೇನೊ
ಗೂಗೆ ಘೋಕರಿಸಿ ಕೊನೆಯ ಸಲ ಎಚ್ಚರಿಸಿ
ಹಾರಿ ಹೋಯಿತು ದೂರ ಯಾವ ಕಡೆಗೊ,
ಗೋಪುರದ ಗಡಿಯಾರ ನಿಂತು?….ಹೊಡೆಯಿತು ಗಂಟೆ
ತಾಸು ತಾಸಿತು ವ್ಯರ್ಥ ಸುತ್ತಿ ತಿರುಗುವ ಚಿಂತೆ
ಅಂತೆ ತಿರುಗಿತು ಪಾಪ
ನಾಗರಿಕ ಅವತಾರಿಗಂಜಿದಂತೆ!
ಮೈಲು ಮೈಲುಗಳಾಚೆ ನೂರ್ಕೋಟಿ ನಕ್ಷತ್ರ
ಪಿಳಪಿಳನೆ ನೋಡುತಿವೆ ಕಣ್ಣ ಬಿಟ್ಟು.
ತೊಟ್ಟಿಲಲಿ ಕೂಸು – ಕಂದಮ್ಮ!
ಚಟ್ಟನೆ ಚೀರಿ ಬೋರಿಟ್ಟಿತು;
ಬಳಲಿ ಮಲಗಿದ ತಾಯಿ ಸಿಡಿದೆದ್ದು ನೋಡಿದಳು
ಸಾವು-ಬದುಕಿನ ಮೇಲೆ ಹೊರಳಾಡಿತು.
ಹೊಟ್ಟೆಯಲಿ ಕರುಳುರಿದು ಸುಡುವ ಬೆಂಕಿ
ಮೈಯೆಲ್ಲ ಸುಟ್ಟ ಅರಳಂತಾಗಿ
ಆ ತಾಯಿ ಹಲುಬಿದಳು ಬಿಕ್ಕಿ ಬಿಕ್ಕಿ
****
ದೂರ ಎಲ್ಲಿಯೊ ಪ್ಯಾಸಿಫಿಕದಲ್ಲಿ-
ಜಲಜನಕ ಬಾಂಬು ಹಾರಿ… ಹಾಹಾಕಾರ
ತಾಮ್-ಕರುಳು ಸತ್ತ ಮಗುವನ್ನಪ್ಪಿ ಚೀರುತಿತ್ತು
ಖಾಲಿ ತೊಟ್ಟಿಲು ತಾನೆ ತೂಗುತಿತ್ತು.
*****
Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...