Home / ಕವನ / ಕವಿತೆ / ಕಾಡುಗೊಲ್ಲತಿಯರ ಪಾಡು

ಕಾಡುಗೊಲ್ಲತಿಯರ ಪಾಡು

ಗೊಲ್ಲರ ಹಟ್ಟಿಯಾಚೆಗಿನ ಕಾಡಿನಲ್ಲಿ
ಬೀಡು ಬಿಟ್ಟಿವೆ ಗೊಲ್ಲತಿಯರ ಕುಟೀರ
ಶಿಲುಬೆಗೇರುವ ಯಾತನಾ ಶಿಬಿರ
ತಿಂಗಳಿಗೊಂದಾವರ್ತಿ ಊರ ಹೊರಗೆ ನಲುಗುವ
ಗೊಲ್ಲತಿಯರ ಹೆಣ್ಣು ಸಂವೇದನೆಗಳು
ಊರೊಳಗಿದ್ದರೆ ಬಾಣಂತಿ, ಮುಟ್ಟಾದ ಹೆಣ್ಣು
ಮನೆಯಲ್ಲಿ ಹಾವು ಚೇಳು ಬರುವವಂತೆ.

ಗೊಲ್ಲರ ಹಟ್ಟಿಯಲಿ ಸೂತಕದ ಮನೆ
ನಾಗರೀಕ ಲೋಕದ ನಿರ್ಲಜ್ಜತೆಗೆ ಪ್ರತೀಕ
ಸರ್ಕಾರವೂ ಕಟ್ಟಿಸಿದೆ ಸೂತಕದ ಮನೆಗಳು
ಹುಲ್ಲ ಗುಡಿಸಲು ಬದಲಿಗೆ ಇಟ್ಟಿಗೆ ಗಾರೆ
ನೀರಿಲ್ಲ, ಬೆಳಕಿಲ್ಲ, ಕಿಟಕಿ, ಬಾಗಿಲುಗಳಿಲ್ಲ
ಶೌಚಾಲಯಗಳೂ ಇಲ್ಲದ ಗೂಡು
ಎದ್ದು ನಿಂತವು ಊರಾಚೆ ಕೃಷ್ಣಕುಟೀರಗಳು
ಮೌಡ್ಯದ ಆಚರಣೆಗೆ ಕೊನೆಯೇ ಇಲ್ಲವೇ?

ಗೊಲ್ಲರ ಹಟ್ಟಿಯ ಆ ಹೆಣ್ಣು
ಗೊಡ್ಡು ಸಂಪ್ರದಾಯ, ಕಟ್ಟಳೆಗೆ ತಲೆಬಾಗಿ
ಹಿರಿಯರ ಮಾತಿಗೆ ಬೆಲೆ ಕೊಟ್ಟು
ಮಳೆ, ಚಳಿ, ಗಾಳಿ, ಬಿಸಿಲು, ಕಾಡುಪ್ರಾಣಿ
ಹುತ್ತ – ಹಾವಿನ ಹರಿದಾಟ ಸರಪರ
ಇನ್ನೆಷ್ಟು ದಿನ ಸಹಿಸಬೇಕಿದೆಯೋ
ಅನಿಷ್ಟಗಳ ಅಳಿಸುವ ಸಂತರ ಆಗಮನಕ್ಕೆ
ಇನ್ನೆಷ್ಟು ದಿನ ಕಾಯಬೇಕಾಗಿದೆಯೋ ಅವಳು ?

ನೂರಾರು ಆವಿಷ್ಕಾರ, ವಿಜ್ಞಾನ, ಸಾಧನೆ
ಮೆಟ್ಟಿಲ್ಲ ಅವಳು ನಾಗರೀಕ ಮೆಟ್ಟಿಲು
ಮುಟ್ಟು, ಬಸಿರು, ಬಾಣಂತನಗಳ ಮಧ್ಯೆ
ಗೊಲ್ಲರ ಹಟ್ಟಿಯ ಹೆಣ್ಣಿನ ಬದುಕು
ಬೆಂಕಿಯಲಿ ನಲುಗುವ ಕಾಡ ಹೂಗಳು
ಅರಣ್ಯದ ಭಯಂಕರ ಪ್ರಾಣಿಗಳ ಮಧ್ಯೆ
ಕಾಡುಗೊಲ್ಲತಿಯರ ಅಘೋರಿ ವಾಸ.

ಆಗಲೇ ಹುಟ್ಟಿದ ಹಸಿ ಮಾಂಸದ ಮುದ್ದೆಗೆ
ಹೊಕ್ಕಳ ಬಳ್ಳಿಯನ್ನು ಕಚ್ಚಿ ಇಲಿ, ಬೆಕ್ಕು
ಜನರಿಲ್ಲ, ದೀಪವಿಲ್ಲ, ವಿಷಜಂತುಗಳ ಹರಿದಾಟ
ಕಾಡಿನ ಕ್ರೂರ ಮೃಗಗಳ ಘರ್ಜನೆ, ಸದ್ದು, ಸಪ್ಪಳ
ತಾಯಿ ಮಗುವಿನ ಮೌನ ರೋದನದ ಬಿಕ್ಕು
ಅರಿವಿನ ಸೂರ್ಯ ಗೊಲ್ಲರ ಗುಡಿಸಲಿಗೆ ಬರಲಿಲ್ಲ.
ಬೆಳೆದ ನಾಗರೀಕತೆ ಕಿವಿಗೆ ತಟ್ಟಲಿಲ್ಲ.

ದಿನ ದಿನದ ಹಿಂಸೆಗೆ ಕೊನೆ ಹೇಳಿ
ಗರ್ಭಕೋಶಕೇ ಕತ್ತರಿ ಹಾಕಿ ಗೊಲ್ಲತಿ
ಮೌಡ್ಯಕ್ಕೆ ಗರ್ಭವೇ ಬಲಿ
ಮುಟ್ಟಿನ ಕಟ್ಟು ಬಿಡಿಸಿಕೊಂಡಳು
ಮುಕ್ತಿ ಹಾಡಿದಳು ಕೃಷ್ಣ ಕುಟೀರಕೆ
ಮುಟ್ಟು ನಿಂತು ಹುಟ್ಟಿದ….
ಪಿಂಡಗಳಿಗೆ ಹಿಡಿ ಶಾಪ ಹಾಕುತ್ತ
ಕಳಂಕ ಕಳಚಿ ಯಾತನೆಗೆ ಕೊನೆ
‘ಹೆಣ್ಣು ಸಂತಾನವೇ ಪ್ರಾಪ್ತವಾಗದಿರಲಿ’
ಹಿಡಿ ಶಾಪ ಹಾಕಿದಳು ಮೌಡ್ಯಕ್ಕೆ
ಗರ್ಭವನ್ನೇ ಕಿತ್ತು ಬಿಸಾಕಿದಳು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...