Home / ಲೇಖನ / ಇತರೆ / ೧೮೬೬

೧೮೬೬

ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಹೊಸದೊಂದು ಭಯಂಕರ ಮಾಹಿತಿಯೊಂದನ್ನು ಹೊರಗಡೆವಿದ್ದು ಭವ್ಯ ಭಾರತದಲ್ಲಿಂದು- ಒಟ್ಟು ೧೮೬೬ ನೋಂದಾಯಿತ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆಂದು ಅಧಿಕೃತವಾಗಿ ಘೋಷಿಸಿರುವುದು.

ಕಳೆದ ವರ್ಷ ೨೦೧೪ ಮಾರ್ಚಿನಿಂದ ೨೦೧೫ರ ಜುಲೈವರೆಗೆ ಹೊಸ ಹೊಸ ೨೩೯ ರಾಜಕೀಯ ಪಕ್ಷಗಳೂ ನೋಂದಣಿ ಮಾಡಿಕೊಳ್ಳುವ ಮೂಲಕ ಒಟ್ಟು ಸಂಖ್ಯೆ ೧೮೬೬ ಕ್ಕೇರಿದೆ!

ಈ ಪೈಕಿ ೫೬ ಪಕ್ಷಗಳು ರಾಷ್ಟ್ರೀಯ ರಾಜ್ಯ ಮಟ್ಟದಲ್ಲಿ ಗುರ್ತಿಸಿಕೊಂಡವುಗಳು. ಆದರೆ ಉಳಿದುವುಗಳು ಮಾನ್ಯತೆ ಪಡೆದಿರದ ಆದರೆ ನೋಂದಾಯಿತ ಪಕ್ಷಗಳು ಎಂದು ಆಯೋಗ ಸ್ಪಷ್ಟಪಡಿಸಿದೆ.

೨೦೧೪ರ ಮಾರ್ಚ್ ೫ ರಂದು ಲೋಕಸಭಾ ಚುನಾವಣೆ ಪ್ರಕಟವಾದ ನಂತರ ೨೬ ಹೊಸ ಪಕ್ಷಗಳು ನೋಂದಣಿ ಮಾಡಿಕೊಳ್ಳುವ ಮೂಲಕ ೧೬೨೭ ನೋಂದಾಯಿತ ರಾಜಕೀಯ ಪಕ್ಷಗಳಾದವು ಎಂದು ಆಯೋಗ ಖಚಿತ ಪಡಿಸಿದೆ.

ಈಗಾಗಲೇ ನೋಂದಣಿಯಾದರೂ ಸಕ್ರಿಯವಲ್ಲದ ಈ ಪಕ್ಷಗಳು ಸ್ವಂತ ಚಿನ್ಹೆಯೊಂದಿಗೆ ಸರ್ಧಿಸುವಂತಿರಲಿಲ್ಲ. ಅಂತಹ ಆಶಯವೂ ಅವುಗಳಿಗಿರಲಿಲ್ಲ. ಹಾಗಾಗಿ ಆಯೋಗ ಬಿಡುಗಡೆ ಮಾಡಿದ ಸ್ವತಂತ್ರ ಚಿಹ್ನೆಯ ಪಟ್ಟಿಯಿಂದ ಯಾವುದಾದರೊಂದನ್ನು ಆಯ್ದುಕೊಂಡು ಅವು ಸ್ಪರ್ಧಿಸಬೇಕಿತ್ತು. ಆಯೋಗದಲ್ಲಿ ಅಂತಹ ೮೪ ಚಿನ್ಹೆಗಳು ಲಭ್ಯ ಎಂದೂ ಕುತೂಹಲಕಾರಿ ಅಂಶವನ್ನು ಚುನಾವಣಾ ಆಯೋಗ ವಿವರಿಸಿದೆ.

ಚಪ್ಪಲಿಗಳು, ಬಲೂನ್, ಕಪಾಟ, ಹವಾನಿಯಂತ್ರಕ, ತೆಂಗಿನಕಾಯಿ, ಕಿಟಕಿ, ನೆಲಹಾಸು, ಬಾಟಲಿ, ಬ್ರೆಡ್… ಇವೆಲ್ಲ ಆಯೋಗವು ಬಿಡುಗಡೆ ಮಾಡಿರುವ ಈ ಉಚಿತ ಚಿಹ್ನೆಗಳ ಪಟ್ಟಿಯಲ್ಲಿ ಕೆಲವಾಗಿರುತ್ತವೆಂದು ತಿಳಿಸಿರುವರು.

ರಾಜಕೀಯ ಪಕ್ಷವೊಂದು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು “ಮಾನ್ಯತೆ ಪಡೆದ” ಎಂದು ಗುರ್ತಿಸಿ ಕೊಳ್ಳಬೇಕಾದರೆ ಆಯೋಗವೇ ನಿಗದಿಪಡಿಸಿದ ಕೆಲವು ಮಾನದಂಡಗಳಿವೆ! ಸತತ ಐದು ವರ್ಷಗಳ ಕಾಲ ಅದು ಚಟುವಟಿಕೆಗಳಿಂದ ಕೂಡಿರಬೇಕು. ಇಲ್ಲವೇ ಚುನಾವಣೆಯಲ್ಲಿ ಯಾವುದೇ ವಿಧಾನಸಭಾ- ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಒಟ್ಟು ಮತಗಳಲ್ಲಿ ಕನಿಷ್ಠ ಶೇಕಡ ೪% ರಷ್ಟಾದರೂ ಮತಗಳನ್ನು ಗಳಿಸಲೇಬೇಕು.

ಈ ತನಕ ಬಿಜೆಪಿ – ಬಿ‌ಎಸ್‌ಪಿ- ಕಾಂಗ್ರೆಸ್, ಸಿಪಿ‌ಐ, ಸಿಪಿ‌ಎಂ, ಎನ್‌ಸಿಪಿಗಳು ರಾಷ್ಟ್ರೀಯ ಪಕ್ಷಗಳೆಂದು ಗುರ್ತಿಸಿಕೊಂಡಿದೆ. ಆದರೆ ದೇಶದಲ್ಲಿ ಒಟ್ಟು ೫೦ ಮಾನ್ಯತೆ ಪಡೆದ ಪಕ್ಷಗಳಿವೆಯೆಂದು ಚುನಾವಣೆ ಆಯೋಗವು ಖಚಿತಪಡಿಸಿದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ