Home / ಲೇಖನ / ಇತರೆ / ಆರೋಗ್ಯಕ್ಕೆ…

ಆರೋಗ್ಯಕ್ಕೆ…

ಆರೋಗ್ಯಕ್ಕೆ ಕಾಫಿ ಟೀ ಒಳ್ಳೆಯದಲ್ಲ ಎಂದು ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಆದರೂ ಬೆಳಿಗ್ಗೆ ಒಂದು ಕುಡಿದರೆ ಏನಾಗದೆಂದು ಕೆಲವು ಜನರು ಕಾಫಿ-ಟೀಯೊಂದಿಗೆ ರಾಜಿಯಾಗಿರುವರು.

ಇನ್ನು ಕೆಲವರು ಟೀ… ಅದರಲ್ಲೂ ಗ್ರೀನ್ ಟೀ ಎರಡೂ ಹೊತ್ತು ಕುಡಿಯುವುದು ಒಳ್ಳೆಯದೆಂದು ಹೇಳುವರು. ಮೊನ್ನೆ ದಿನ ಶಾಲೆಗೆ ಡಾ|| ವಿ. ನಾಗರಾಜು ಅವರು ಬಂದಿದ್ದರು. ಅವರು ಬರುವಾಗ ದಿನ ಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ, ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಿಕೆಗಳನ್ನು ತಂದು ಮಕ್ಕಳಿಗೆಲ್ಲ ವಿತರಿಸಿ ಇವುಗಳನ್ನು ಓದಲು ಗ್ರೀನ್ ಟೀ ಕುಡಿಯಲು ಸಲಹೆ ಮಾಡುತ್ತಾ ನಿಂತರು.

ಪುಟಾಣಿಗಳೆ… ಗ್ರೀನ್ ಟೀ ಎಂದರೆ… ದಿವ್ಯೌಷಧಿಯಂತೆ ಕೆಲಸ ಮಾಡುವುದು. ಅದರಿಂದ ಉಪಯೋಗಗಳು ಈ ರೀತಿಯಲ್ಲಿವೆ…

೧. ಇದು ನಿದ್ದೆಯನ್ನು ಸೋಮಾರಿತನವನ್ನು ದೂರ ಮಾಡುವುದು.

೨. ಮೆದುಳನ್ನು ಚುರುಕುಗೊಳಿಸುವುದು.

೩. ನೆನಪಿನ ಶಕ್ತಿ ವೃದ್ಧಿಸುವುದು.

೪. ಬೊಜ್ಜು ಕರಗಿಸುವುದು. ತೂಕ ಇಳಿಸುವುದು, ನಿರಂತರ ಚುರುಕಾಗಿರುವಂತೆ ಮಾಡುವುದು.

೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇದೆ.

೬. ಸಕ್ಕರೆ ಕಾಯಿಲೆ ಬರದಂತೆ, ಹೃದಯಾಘಾತವಾಗುವುದನ್ನು ತಡೆಯುವುದು.

೭. ಬಾಯಿ ವಾಸನೆ ತಡೆಯುವುದು, ಹಲ್ಲು ಹುಳುಕು ಹಿಡಿಯದಂತೆ ತಡೆಯುವುದು.

೮. ಎಲುಬುಗಳನ್ನು ಗಟ್ಟಿಗೊಳಿಸುವುದು. ಮರೆಗುಳಿತನವನ್ನು ದೂರ ಮಾಡುವುದು.

೯. ಹುರುಪು ಉತ್ಸಾಹ ತುಂಬುವುದು.

೧೦. ದೇಹವನ್ನು ಬೆಚ್ಚಗಿಡುವುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...