ಕಾಬೂಲಿವಾಲಾ

ಅಂದು ಬದುಕಿದ್ದೆ ನಾನು
ಕಾಬೂಲ್ ಖಂದಹಾರ್‌ನ
ಖರ್‍ಜೂರದ ಗಿಡದಂತೆ
ಸಿಹಿ ಹುಳಿಯ ಸಂಗಮ
ಅಂಗೂರದ ಬಳ್ಳಿಯಂತೆ
ಶಾಂತಿ ಕಾಲವೇ ಇರಲಿ
ಯುದ್ಧ ಕಾಲವೇ ಬರಲಿ
ಬಂದೂಕಿಲ್ಲದ ಬರಿಗೈಯಲಿ
ಕಂಡಿಲ್ಲ ಅವನ
ಸದಾ ಭಯದ ನೆರಳಿನಲೇ
ನನ್ನ ಬದುಕಿನ ಪಯಣ

ವಿಶ್ವವನ್ನೇ ನಿಯಂತ್ರಿಸಲು
ಹಿರಿಯಣ್ಣನ ಹಿಂಸೆಯಾದರೆ
ಒಳಗೆ ಮೀಸೆ ತಿರುಗಿಸುವ
ಪೌರುಷದ ಅಟ್ಟಹಾಸ
ಮಿದುಳಿನಲಿ ಗನ್ನುಗಳ ಸ್ಫೋಟ
ವ್ಯಾಪಕ ಭಯದ ನೋಟ
ಬಿಸಿ ತಟ್ಟಿದೆ ನನಗೆ
ಯುದ್ಧ ಕಾಲದಲೂ –
ಶಾಂತಿ ಸಮಯದಲೂ
ನನ್ನ ಹಕ್ಕುಗಳ ದಮನ
ಕ್ರೂರ ವ್ಯಾಘ್ರರ ನರ್‍ತನ.

ಭೀತಿಯಿಂದ ಧರ್‍ಮ ಪ್ರಶ್ನಿಸಲಿಲ್ಲ
ಹಕ್ಕಿನ ಅಧಿಕಾರ ಕೇಳಲಿಲ್ಲ
ದುಷ್ಟ ಶಿಕ್ಷೆಯ ಸಂದರ್‍ಭವಿರಲಿ
ರಾಷ್ಟ್ರ ರಕ್ಷಣೆಯ ಕಾವಲಿರಲಿ
ಧರ್‍ಮ ಯುದ್ಧದ ಜೇಹಾದೇ ಆಗಿರಲಿ
ಕಪಟ ನಾಟಕದ ಆಟದಲಿ
ಬಲಿಯಾದರು ನನ್ನವರು
ಹಿಂಸೆ-ಅಹಿಂಸೆ ಎರಡೂ ಶಬ್ದಗಳಿಗೂ
ಇಲ್ಲಿ ಒಂದೇ ಅರ್‍ಥ ಅನ್ವಯ
ಮನೆಯಿಂದ ರಣರಂಗದವರೆಗೂ

ಬಲಿಯಾದ ನನ್ನ ಕುಡಿಗಳು.
ನೋವಿನ ತೆಂಗಿನ ಮರದಲಿ
ಯಾತನೆಯ ಕೆಂಪು ರಕ್ತದ ಎಳನೀರು
ಮುಗ್ಧ ಮಕ್ಕಳ ಮಾರಣಹೋಮ
ಧರ್‍ಮ-ರಾಜಕೀಯದ ಸಾವು ನೋವುಗಳ
ಅನುಭವಿಸಿರುವೆ ನಾನು ಬಹಳ
ಸಹಿಸಲಾರೆ ಸಾವಿನಾಟವನು
ಸಾಕು ಮಾಡಿ ಮುಂಡಾಟಿಕೆ
ಬೇಕು ನನಗೆ ನೆಮ್ಮದಿಯ ನೆಲೆ
ಪುಟ್ಟ ಮನೆಯಂಗಳದಲಿ ತೆಂಗಿನಮರ
ನೆಮ್ಮದಿಯ ಶುದ್ಧ ಗಾಳಿ, ನೀರು
ಸಮವಸ್ತ್ರವಿಲ್ಲದ ಪುರುಷರು
ಬಂದೂಕಿಲ್ಲದ ಕೈಗಳು
ಜೀವಪೋಷಕ ಸಂಗಾತಿಗಳು
ಮನುಕುಲವನು ಪ್ರೀತಿಸುವ
ಕಾಬೂಲಿವಾಲಾಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಗ್ಯಕ್ಕೆ…
Next post ನಾಳೀಜಂಘ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…