Home / ಕವನ / ಕವಿತೆ / ಕಾಬೂಲಿವಾಲಾ

ಕಾಬೂಲಿವಾಲಾ

ಅಂದು ಬದುಕಿದ್ದೆ ನಾನು
ಕಾಬೂಲ್ ಖಂದಹಾರ್‌ನ
ಖರ್‍ಜೂರದ ಗಿಡದಂತೆ
ಸಿಹಿ ಹುಳಿಯ ಸಂಗಮ
ಅಂಗೂರದ ಬಳ್ಳಿಯಂತೆ
ಶಾಂತಿ ಕಾಲವೇ ಇರಲಿ
ಯುದ್ಧ ಕಾಲವೇ ಬರಲಿ
ಬಂದೂಕಿಲ್ಲದ ಬರಿಗೈಯಲಿ
ಕಂಡಿಲ್ಲ ಅವನ
ಸದಾ ಭಯದ ನೆರಳಿನಲೇ
ನನ್ನ ಬದುಕಿನ ಪಯಣ

ವಿಶ್ವವನ್ನೇ ನಿಯಂತ್ರಿಸಲು
ಹಿರಿಯಣ್ಣನ ಹಿಂಸೆಯಾದರೆ
ಒಳಗೆ ಮೀಸೆ ತಿರುಗಿಸುವ
ಪೌರುಷದ ಅಟ್ಟಹಾಸ
ಮಿದುಳಿನಲಿ ಗನ್ನುಗಳ ಸ್ಫೋಟ
ವ್ಯಾಪಕ ಭಯದ ನೋಟ
ಬಿಸಿ ತಟ್ಟಿದೆ ನನಗೆ
ಯುದ್ಧ ಕಾಲದಲೂ –
ಶಾಂತಿ ಸಮಯದಲೂ
ನನ್ನ ಹಕ್ಕುಗಳ ದಮನ
ಕ್ರೂರ ವ್ಯಾಘ್ರರ ನರ್‍ತನ.

ಭೀತಿಯಿಂದ ಧರ್‍ಮ ಪ್ರಶ್ನಿಸಲಿಲ್ಲ
ಹಕ್ಕಿನ ಅಧಿಕಾರ ಕೇಳಲಿಲ್ಲ
ದುಷ್ಟ ಶಿಕ್ಷೆಯ ಸಂದರ್‍ಭವಿರಲಿ
ರಾಷ್ಟ್ರ ರಕ್ಷಣೆಯ ಕಾವಲಿರಲಿ
ಧರ್‍ಮ ಯುದ್ಧದ ಜೇಹಾದೇ ಆಗಿರಲಿ
ಕಪಟ ನಾಟಕದ ಆಟದಲಿ
ಬಲಿಯಾದರು ನನ್ನವರು
ಹಿಂಸೆ-ಅಹಿಂಸೆ ಎರಡೂ ಶಬ್ದಗಳಿಗೂ
ಇಲ್ಲಿ ಒಂದೇ ಅರ್‍ಥ ಅನ್ವಯ
ಮನೆಯಿಂದ ರಣರಂಗದವರೆಗೂ

ಬಲಿಯಾದ ನನ್ನ ಕುಡಿಗಳು.
ನೋವಿನ ತೆಂಗಿನ ಮರದಲಿ
ಯಾತನೆಯ ಕೆಂಪು ರಕ್ತದ ಎಳನೀರು
ಮುಗ್ಧ ಮಕ್ಕಳ ಮಾರಣಹೋಮ
ಧರ್‍ಮ-ರಾಜಕೀಯದ ಸಾವು ನೋವುಗಳ
ಅನುಭವಿಸಿರುವೆ ನಾನು ಬಹಳ
ಸಹಿಸಲಾರೆ ಸಾವಿನಾಟವನು
ಸಾಕು ಮಾಡಿ ಮುಂಡಾಟಿಕೆ
ಬೇಕು ನನಗೆ ನೆಮ್ಮದಿಯ ನೆಲೆ
ಪುಟ್ಟ ಮನೆಯಂಗಳದಲಿ ತೆಂಗಿನಮರ
ನೆಮ್ಮದಿಯ ಶುದ್ಧ ಗಾಳಿ, ನೀರು
ಸಮವಸ್ತ್ರವಿಲ್ಲದ ಪುರುಷರು
ಬಂದೂಕಿಲ್ಲದ ಕೈಗಳು
ಜೀವಪೋಷಕ ಸಂಗಾತಿಗಳು
ಮನುಕುಲವನು ಪ್ರೀತಿಸುವ
ಕಾಬೂಲಿವಾಲಾಗಳು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...