Home / ಕಥೆ / ಕಿರು ಕಥೆ / ಸಾವಿರಾರು ಬುದ್ಧರು

ಸಾವಿರಾರು ಬುದ್ಧರು

“ಗುರುಗಳೇ! ನಾ ಪರಮ ಭಾಗ್ಯವಂತ.” ಎಂದು ಅತ್ಯಂತ ಸಂತೋಷದಿಂದ ಶಿಷ್ಯ ಮೇಲು ಧ್ವನಿಯಲ್ಲಿ ಹೇಳಿದ.

“ನಿನ್ನ ಸಂತೋಷಕ್ಕೆ ಕಾರಣವೇನು? ಶಿಷ್ಯಾ” ಎಂದು ಕೇಳಿದರು.
“ನಾನು ಬುದ್ಧನನ್ನು ಹುಡುಕಿ ಹೋದದ್ದು ನಿಮಗೆ ಗೊತ್ತಿದೆಯಲ್ಲವೇ.”
“ಅಹುದು, ಶಿಷ್ಯಾ- ನಿನ್ನ ಶೋಧನೆಯಲ್ಲಿ ಜಯವಾಯಿತೇ?”,
“ನನ್ನ ಕಣ್ಣು ಕೋರೈಸುವಷ್ಟು ಸಾವಿರಾರು ಬುದ್ಧರನ್ನು ಕಂಡೆ.”
“ಬುದ್ಧ ಒಬ್ಬನೇ ಅಲ್ಲವೇ? ನೀ ಅದು ಹೇಗೆ ಅಷ್ಟು ಬುದ್ಧರನ್ನು ಕಂಡೇ?” ಎಂದರು ಗುರುಗಳು.
“ಗುರುಗಳೇ! ನನ್ನ ಕಣ್ಣಿನಲ್ಲಿ, ಮನದಲ್ಲಿ, ಬುದ್ಧನನ್ನು ತುಂಬಿಕೊಂಡು ಹೊರಟಾಗ, ವನದ ವೃಕ್ಷದಲ್ಲಿ ಬುದ್ಧನನ್ನು, ಹೂವಿನಲ್ಲಿ ಬುದ್ಧನನ್ನು, ಫಲದಲ್ಲಿ ಬುದ್ಧನನ್ನು, ಸೂರ್ಯ ಚಂದ್ರರಲ್ಲಿ ಬುದ್ಧನನ್ನು ಕಂಡು ಧನ್ಯನಾದೆ. ಭೂಮಿಯಲ್ಲಿ ಬಿತ್ತಿದ ಬೀಜದಲ್ಲಿ
ಬುದ್ಧತ್ವ ಕಂಡೆ, ಬಾನಿನ ಸಾವಿರಾರು ನಕ್ಷತ್ರದ ತೇಜದಲ್ಲಿ ಬುದ್ಧತ್ವ ಕಂಡೇ.” ಎಂದು ಉದ್ಗಾರದಲ್ಲಿ ಶಿಷ್ಯ ಹೇಳಿದಾಗ ಗುರುವಿನ ಕಣ್ಣು ತುಂಬಿ ಬಂತು.
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...