ಬೆಳಕಾದ ಬೀಡು

ಯಾವ ಜನ್ಮದ ಪುಣ್ಯವೊ ಏನೊ
ನಾನಾಗಿಹೆನು ಕನ್ನಡಿಗ
ಕವಿ ಕಲ್ಪನೆಯ ಚೆಲುವಿಗು-ಮೀರಿದ
ಕಾಣುತಲಿಹೆನೀ ಸಿರಿಸಗ್ಗ
ಹನಿಯುತಲಿದೆಯೊ ನವ ಸ್ಫೂರ್ತಿಯ ಮಳೆ
ಅಮೃತ ಸಲೆಯಾಗಿ
ಹರಿಯುತಲಿದೆಯೊ ಸಾಹಿತ್ಯದ ಹೊಳೆ
ಕಲಕಲ ದನಿಯಾಗಿ
ಹಾಡುತಲಿದೆಯೊ ಕೋಗಿಲೆಯಾ ಮನ
ಸಪ್ತ ಸ್ವರವಾಗಿ
ಆಲಿಸಿ ಅರಳಿದೆ ರಸಿಕರ ಹೃನ್ಮನ
ಚೈತ್ರದ ಸುಮವಾಗಿ
ಸಹ್ಯಾದ್ರಿಯ ಸಲೆ ಮಲೆನಾಡಿನ ಮಲೆ
ನಂದನ ವನವಾಗಿ
ಬೇಲೂರಿನ ಕಲೆ ಗೊಮ್ಮಟನಾ ನೆಲೆ
ಶಿಲ್ಪದ ಬೀಡಾಗಿ
ವಿಶ್ವದ ಕಣ್ಮನ ಸೂರೆಗೊಂಡಿದೆ
ಚೆಲುವಿನ ಬಲೆಯಾಗಿ
ಕಲೆಯಿಂದಲಿ ಈ ಕನ್ನಡನಾಡು
ಬೆಳಗಿದೆ ಬೆಳಕಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈರ ಯಾಕೆ ಹೋದ?
Next post ವಿವಿಧತೆಯಲ್ಲಿ ಏಕತೆಯ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…