ಕಣ್ಣೀರ ಯಾತ್ರೆ

ಜಗದಗಲ ಮುಗಿಲಗಲ ಮೆರೆದಂತ ಹಂಪೆ
ಏಕಾದೆ ನೀನಿಂದು ಈ ಹಾಳು ಹಂಪೆ
ವೀರಾಧಿ ವೀರರಿಗೆ ಜನ್ಮವಿತ್ತರೇನು
ನಾಲ್ಕಾರು ದಿಕ್ಕಿಂದ ಜಯ ತಂದರೇನು
ನೂರಾರು ವರುಷಗಳು ನೀ ಮೆರೆದರೇನು
ಕಡೆಗಾಲದಲಿ ಶೌರ್ಯ ಬರಿದಾಯಿತೇನು!?
ಸಂಗೀತ ಸಾಹಿತ್ಯ ಸುಧೆ ಹರಿಸಿ ಅಂದು
ಬೆಳ್ಳಿ ಕಾಲ್ಗೆಜ್ಜೆಗಳ ಮಿಡಿಸುತಲಿ ನಿಂದು
ನರಸಿಂಹ ವಿಠಲರನು ರಕ್ಷಣೆಗೆ ತಂದು
ಕಣ್ಣೀರ ಇತಿಹಾಸ ಮಾಡಿದೆ ಏಕಿಂದು!?
ರಸಪೂರ್ಣ ನುಡಿಗಳಿಗೆ ನವ ಸ್ಫೂರ್ತಿಯಾಗಿ
ಇತಿಹಾಸ ಕೃತಿಗಳಿಗೆ ಚಿರ ವಸ್ತುವಾಗಿ
ಮುದಭರಿತ ಪಯಣದಲಿ ನೀ ತಾಣವಾಗಿ…
ಹರಿವೆ ನನ್ನಲಿ ಏಕೆ ಕಣ್ದಾರೆಯಾಗಿ!?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಧೋ ಉಧೋ
Next post ವನಮಹೋತ್ಸವ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…