Home / ಕಥೆ / ಸಣ್ಣ ಕಥೆ / ಕತೆಗಾಗಿ ಜತೆ

ಕತೆಗಾಗಿ ಜತೆ

ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್ ಹೋಗಬೇಕು, ನಾಳಿಗೆ ಹೋಗಬೇಕು ಹೇಳಿ ಯೆಷ್ಟೋ ದಿವಸ ಕಳದ ಹೋಯ್ತು. ಆ ದಿವ್ಸ ರಾಜರ ಮನಿಹತ್ರ ಹೇಳ್ದ. ‘ನಾ ಇವತ್ತ್ ನೆಂಟ್ರ ಮನಿಗ್ ಹೋಗಬೇಕು’ ಹೇಳಿ ನೆಡ್ದೆ ಬಿಟ್ಟ . ಅವ ಮೊಳೆಯಾಗಿ ಯೆಲ್ಲಾ ವಯ್ ಸ್ತ್ರ ಅದ್ದಿ, ವಂದ್ ಅಜ್ಜಿ ಮುದ್ಕಿ ಮನಿಲ್ ಹೋಗಿ ಕೂತ ಶನೀಪದಲ್ ವಂದ್ ಊರಲ್ಲಿ.

ಆ ಅಜ್ಜಿ ಮುದ್ಕಿ ಹತ್ರ ಹೇಳ್ತ ಯೇನಂದಿ? “ನಾನು ಇಲ್ಲೆ ಬಗಿಲ್ ಮನಿಕಳೆನೆ. ಸಲ್ಪ ಜಾಗ ಕೊಡ್ಬೇಕು” ಅಂದ. ಅಜ್ಜಿ ಮುದ್ಕಿ ಯೇನ್ ಹೇಳ್ತಾಳೆ? ಹೇಳದ್ರೆ, “ನಿನ್ಗೆ ಜಾಗಕೊಡ್ಲಿಕ್ಕೆ ಅಡ್ಡಿಲ್ಲ. ಹೊದಿಲಿಕ್ಕೆ ಮಾಡ್ಲಿಕ್ಕೆ ಯೆಲ್ಲಾ ಕೊಡ್ತೇನೆ. ನಾನು ವಂದ್ ರಾಜ್ರ ಮನಿಲಿ ಕೆಲ್ಸಕೆ ಹೋಗ್ತೆ ಇದ್ದೆ. ಅಲ್ಲಿ ಆ ದಿವಸ ಯೇನಾಗಿದೆ? ನಂದು, ರಾಜ್ರ ಮನಿ ಹುಡುಗಿಗೆ ಆಳು ಅಲ್ಲಿದ್ ನಾನು ಅದ್ ಕೆ ಕತೆ ದಿನಾಲೂ ಹೇಳ್ಬೇಕು. ಇವತ್ ನಂದ ಬಾರಿ ಬಂದದೆ. ಅದ್ಕೆ ಕತೆ ಹೇಳು ದಿವಸ ಇವತ್ತೆ ಆಗದೆ. ನನ್ಗೆ ಕೆಲ್ಸ ಮಾಡಿ ಸಾಕಾಗದೆ ಕತೆನ್ನ ನೀನ್ ಹೇಳಬೇಕು.”

ಆವಾಗ ಇವ ಹೇಳ್ತಾನೆ. ಯೇನಂದ್ರೆ? “ಹಾಗಾದ್ರಜ್ಜಿ, ನೀನು ಆ ಹುಡ್ಗೀನೇ ಇಲ್ ಕರಕಂಬಾ. ನಮ್ಮನಿಲ್ ವಬ್ಬ ಮೊಮ್ಮಗ ಬಂದನೆ. ಚಲೋಕತೆ ಹೇಳ್ತಾನೆ; ಹೇಳಿ ಕರಕಂಡ ಬಾ ನಿನ್ ಮನಿಗೆ” ಅಂದ.

ಆವಾಗ ಅಜ್ಜಿ ಮುದ್ಕಿ ಅಲ್ ಹೋಗಿ ಆ ಹುಡ್ಗಿ ಹತ್ರೆ, “ಮಗಾ ಇವತ್ತೆ ನನ್ ಮೊಮ್ಮಗ ಬಂದನೆ ನನ್ನ ಮನಿಗೆ ನನಕಿಂತಾ ಚಲೋ ಕತೆ ಹೇಳ್ತಾನೆ. ಮತ್ತು ನಂಮನಿಗೆ ಹೋಗ್ವ ಬಾ” ಹೇಳಿ ಕರಕಂಡ ಬಂತು ಅಜ್ಜಿ ತನ್ ಮನಿಗೆ. ಆವಾಗೇ ಇವ್ರ ಊಟ ಬೀಟ ಮಾಡಿ, ಸಲ್ಪ ಮನಗದ್ರು. ಆವಾಗೇನಾಯ್ತು ಹೇಳಿದ್ರೆ ಅಜ್ಜಿಗೆ ಕೆಲ್ಸ ಮಾಡಿ ಸಾಕಾಗ್ ಹೋಗಿತ್ತು. ಅಜ್ಜಿಗೆ ಚಲೋ ನಿದ್ದೇನೆ ಬಿತ್ತು. ಆವಾಗ ಇವ ಕತೆ ಹೇಳ್ತಾನೆ ಹುಡ್ಗಿ ಹತ್ರ.

ಹುಡ್ಗಿ ಹತ್ರೆ ಕತೆ, “ವಂದ್ ಊರಲ್ಲಿ ವಂದ ರಾಜನ ಮನ್ಯಲ್ಲಿ ವಂದ ಮಡವಾಳರವ ಇದ್ದ. ಅವನಿಗೆ ನೆಂಟ್ರಮನಿಗೆ ವಂದ್ ದಿವಸ ಹೋಗಬೇಕು ಹೇಳದ್ರೆ ವಂದ್ ದಿವಸನೂ ಬಟ್ಟೆ ಶೆಳದಿ ಪುರಸತಿ ಹೇಳೊದಿಲ್ಲ. ಆವಾಗೆ ವಂದಲ್ಲ ವಂದ್ ದಿವಸ ಆ ಮಡವಾಳರವನಿಗೆ ಸಲ್ಪ ಸಿಟ್ ಬಂದ್ ಹೋಯ್ತು. ನೆಂಟ್ರಮನಿಗೆ ಹೋಗಲೇಬೇಕು ಹೇಳ್ ಕಾಣಿಸ್ತು.” ಆವಾಗೆ ಇವಯೇನ್ ಹೇಳ್ತ, ಹುಡಗಿ ಹತ್ರ “ನೀ ಅಷ್ಟದೂರ ಮನಿಕಂಡಿದ್ರೆ ಕೇಳವಾಂಗಿಲ್ಲ. ಚಲೋ ಕತೆ ಇದೆ.” ಮುಂದೆ ಬಂತು. “ಸಲ್ಪ ನನ್ನ ಬುಡಕೆ ಬಂದಿ ಮನಿಕೊ” ಹೇಳಿ ಹೇಳ್ತ. ಅದು ಹತ್ರ ಬಂತು. ವಂದಾನೊಂದು ದಿವಸ ಮಡವಾಳರವ ನೆಂಟ್ರ ಮನಿಗೆ ಹೋಗಕಾಗದೆಯ ವಂದ್ ಅಜ್ಜಿ ಮುದ್ಕಿ ಮನಿಲಿ ಉಳಕಂಡ. ಆಗೆ ಆ ಹುಡಗಿ ಹತ್ರೆ ಕತೆ ಹೇಳತೆ ಹೇಳತೆ ಇರಬೇಕಾದ್ರೆ ಹುಡ್ಗಿ ಮೇಲೆ ಕೆಲಸ ಸಲ್ಪ ಪೂರೈಸಿದ. ಬೆಳಿಗ್ಗೆ ಎದ್ದಿ ಮಡವಾಳದವ ಮನಿಗೆ ಹೋದ. ಆ ಹುಡಗೀನು ಮನಿಗೆ ಹೋಯ್ತು. ಹೋಗಿ ಅಪ್ಪನ ಹತ್ರ ಈ ಹುಡುಗಿ ಹೇಳತಾಳೆ “ದಿವಸಾ ವಬ್ಬಬ್ಬ ಕತೆ ಹೇಳುವುದಾಗಿತ್ತು. ಇನ್ನು ಕತೆ ನನಗೆ ಬೇಡ.”
*****

ಹೇಳಿದವರು : ಶ್ರೀ ದೇವಪ್ಪ ಅಣ್ಣಪ್ಪ, ನಾಯ್ಕ, ಹೊದ್ಕೆ, ದಿನಾಂಕ :-೨೫-೧೨-೧೯೭೧

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯಲ್ಲಿ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...