Home / ಲೇಖನ / ಇತರೆ / ಸೆಂಡ್ ಎಂದರೇನು?

ಸೆಂಡ್ ಎಂದರೇನು?

ಇಡೀ ಜಗತ್ತಿನಲ್ಲಿ ಇಲ್ಲದ್ದನ್ನು ಅಮೆರಿಕ ಕಂಡು ಹಿಡಿದಿದೆ. ಅದೇ ಸೆಂಡ್ ಎಂದು.

ಸ್ಮಾರ್ಟ್‌ಫೋನ್‌ಗಳ ಮೂಲಕ ಇ-ಮೇಲ್ ಕಳುಹಿಸುವ ಪ್ರಕ್ರಿಯೆಯನ್ನು ಮೈಕ್ರೋಸಾಫ್ಟ್ ಅಭಿವೃದ್ಧಿ ಪಡಿಸಿರುವ ಹೊಸ ಅಪ್ಲಿಕೇಷನ್‌ನ್ನು ಅಮೆರಿಕ ಮತ್ತಷ್ಟು ಸರಳಗೊಳಿಸಿದೆ. ಇದನ್ನೇ ‘ಸೆಂಡ್’ ಎಂದು ಅಮೆರಿಕ ಹೆಸರಿಸಿರುವುದು!

ಆಪ್ ಬಳಸಿ ಇ-ಮೇಲ್ ಕಳುಹಿಸುವಾಗ ನೇರವಾಗಿ ವಿಳಾಸ ಪಟ್ಟಿಗೆ ಹೋಗಬಹುದು. ಇದು ಎಸ್‌ಎಂಎಸ್ ಕಳುಹಿಸಿದಷ್ಟೇ ಸರಳ.

ಈಗ ಸ್ಮಾರ್ಟ್‌ಫೋನಿನಲ್ಲಿ ಇ-ಮೇಲ್ ಕಳುಹಿಸಬೇಕೆಂದರೆ ಮೊದಲು ಇ ಮೇಲ್ ಸಂದೇಶ ಕಳುಹಿಸಬೇಕೋ ಅವರ ಇ-ಮೇಲ್ ವಿಳಾಸವನ್ನು ತುಂಬಬೇಕು. ಆದಾದ ಮೇಲೆ ಇ-ಮೇಲ್ ವಿಷಯವನ್ನು ಸಂಕ್ಷಿಪ್ತವಾಗಿ ಸಬ್ಜೆಕ್ಟ್ ಕಿಂಡಿಯಲ್ಲಿ ಬರೆಯಬೇಕು ಇವಿಷ್ಟೂ ಪ್ರಕ್ರಿಯೆಗಳನ್ನು ಪೂರೈಸಿದ ಮೇಲೆ ಸಂದೇಶ ಬರೆಯಬೇಕು.

ಆದರೆ ಸೆಂಡ್ ಮೂಲಕ ಇ-ಮೇಲ್ ಮಾಡುವಾಗ ಸಂದೇಶ ಬರೆದೊಡನೆ ನೇರವಾಗಿ ಇ-ಮೇಲ್ ವಿಳಾಸಗಳ ಪಟ್ಟಿಗೆ ಹೋಗಬಹುದು. ಈಗ ಫೋನ್ ನಂಬರ್‌ನೊಂದಿಗೆ ಜೋಡಿಸದ ಇ-ಮೇಲ್ ವಿಳಾಸಗಳಿದ್ದಲ್ಲಿ ಅಂತಹ ವಿಳಾಸಗಳನ್ನು ಈಗ ಹುಡುಕುವುದು ಕಷ್ಟ ಸಾಧ್ಯ.

ಆದರೆ ಸೆಂಡ್ ಆಪ್ ಇದ್ದಲ್ಲಿ ಅಂತಹ ಇ-ಮೇಲ್ ವಿಳಾಸಗಳನ್ನೂ ನೇರವಾಗಿ ಹುಡಕಬಹುದಾಗಿದೆ. ಇದಕ್ಕೆಂದೇ ಬೇರೆ ಅಪ್ಲಿಕೇಷನ್‌ನ ಅವಶ್ಯಕತೆ ಬೇಕಿಲ್ಲ. ಸೆಂಡ್ ಬಳಸಿದರೆ ಸಬ್ಜೆಕ್ಟ್ ಲೈನ್ ಮತ್ತು ಸಹಿಯ ಅಗತ್ಯ ಬೇಕಿಲ್ಲ. ಇ-ಮೇಲ್ ಸ್ವೀಕರಿಸುವವರೂ ಸೆಂಡ್ ಬಳಸುತ್ತಿದ್ದರೆ ಅವರು ಇ-ಮೇಲ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನು ಸೆಂಡ್ ನೀಡುವುದು.

ಈಗೀಗ ಈ ಅಪ್ಲಿಕೇಷನ್ ಐ-ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಮಾನಗಳಲ್ಲಿ ವಿಂಡೋಸ್ ಮತ್ತು ಆಂಡ್ರಾಯ್ಡ್ ತಂತ್ರಾಂಶ ಬಳಸುವ ಫೋನ್‌ಗಳಿಗೂ ಲಭ್ಯವಾಗಲಿದೆ. ತನ್ನದೇ ಕಾರಚರಣೆಯ ವ್ಯವಸ್ಥೆ ವಿಂಡೋಸ್ ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ಈ ಆಪ್‌ನ್ನು ಒದಗಿಸುವ ಮೊತ್ತ ಮೊದಲೇ ತನ್ನ ಪ್ರತಿಸ್ಪರ್ಧಿ ಆಪಲ್ ಫೋನ್‌ಗಳಿಗೆ ಈ ಆಪ್ ಒದಗಿಸಿರುವ ಮೈಕ್ರೋಸಾಫ್ಟ್ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಬರು ಬರುತ್ತಾ ಏನೆಲ್ಲ ಹೊಚ್ಚ ಹೊಸತು ಕಂಡು ಹಿಡಿಯಬಹುದೋ ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...