Home / ಲೇಖನ / ಇತರೆ / ಸೆಂಡ್ ಎಂದರೇನು?

ಸೆಂಡ್ ಎಂದರೇನು?

ಇಡೀ ಜಗತ್ತಿನಲ್ಲಿ ಇಲ್ಲದ್ದನ್ನು ಅಮೆರಿಕ ಕಂಡು ಹಿಡಿದಿದೆ. ಅದೇ ಸೆಂಡ್ ಎಂದು.

ಸ್ಮಾರ್ಟ್‌ಫೋನ್‌ಗಳ ಮೂಲಕ ಇ-ಮೇಲ್ ಕಳುಹಿಸುವ ಪ್ರಕ್ರಿಯೆಯನ್ನು ಮೈಕ್ರೋಸಾಫ್ಟ್ ಅಭಿವೃದ್ಧಿ ಪಡಿಸಿರುವ ಹೊಸ ಅಪ್ಲಿಕೇಷನ್‌ನ್ನು ಅಮೆರಿಕ ಮತ್ತಷ್ಟು ಸರಳಗೊಳಿಸಿದೆ. ಇದನ್ನೇ ‘ಸೆಂಡ್’ ಎಂದು ಅಮೆರಿಕ ಹೆಸರಿಸಿರುವುದು!

ಆಪ್ ಬಳಸಿ ಇ-ಮೇಲ್ ಕಳುಹಿಸುವಾಗ ನೇರವಾಗಿ ವಿಳಾಸ ಪಟ್ಟಿಗೆ ಹೋಗಬಹುದು. ಇದು ಎಸ್‌ಎಂಎಸ್ ಕಳುಹಿಸಿದಷ್ಟೇ ಸರಳ.

ಈಗ ಸ್ಮಾರ್ಟ್‌ಫೋನಿನಲ್ಲಿ ಇ-ಮೇಲ್ ಕಳುಹಿಸಬೇಕೆಂದರೆ ಮೊದಲು ಇ ಮೇಲ್ ಸಂದೇಶ ಕಳುಹಿಸಬೇಕೋ ಅವರ ಇ-ಮೇಲ್ ವಿಳಾಸವನ್ನು ತುಂಬಬೇಕು. ಆದಾದ ಮೇಲೆ ಇ-ಮೇಲ್ ವಿಷಯವನ್ನು ಸಂಕ್ಷಿಪ್ತವಾಗಿ ಸಬ್ಜೆಕ್ಟ್ ಕಿಂಡಿಯಲ್ಲಿ ಬರೆಯಬೇಕು ಇವಿಷ್ಟೂ ಪ್ರಕ್ರಿಯೆಗಳನ್ನು ಪೂರೈಸಿದ ಮೇಲೆ ಸಂದೇಶ ಬರೆಯಬೇಕು.

ಆದರೆ ಸೆಂಡ್ ಮೂಲಕ ಇ-ಮೇಲ್ ಮಾಡುವಾಗ ಸಂದೇಶ ಬರೆದೊಡನೆ ನೇರವಾಗಿ ಇ-ಮೇಲ್ ವಿಳಾಸಗಳ ಪಟ್ಟಿಗೆ ಹೋಗಬಹುದು. ಈಗ ಫೋನ್ ನಂಬರ್‌ನೊಂದಿಗೆ ಜೋಡಿಸದ ಇ-ಮೇಲ್ ವಿಳಾಸಗಳಿದ್ದಲ್ಲಿ ಅಂತಹ ವಿಳಾಸಗಳನ್ನು ಈಗ ಹುಡುಕುವುದು ಕಷ್ಟ ಸಾಧ್ಯ.

ಆದರೆ ಸೆಂಡ್ ಆಪ್ ಇದ್ದಲ್ಲಿ ಅಂತಹ ಇ-ಮೇಲ್ ವಿಳಾಸಗಳನ್ನೂ ನೇರವಾಗಿ ಹುಡಕಬಹುದಾಗಿದೆ. ಇದಕ್ಕೆಂದೇ ಬೇರೆ ಅಪ್ಲಿಕೇಷನ್‌ನ ಅವಶ್ಯಕತೆ ಬೇಕಿಲ್ಲ. ಸೆಂಡ್ ಬಳಸಿದರೆ ಸಬ್ಜೆಕ್ಟ್ ಲೈನ್ ಮತ್ತು ಸಹಿಯ ಅಗತ್ಯ ಬೇಕಿಲ್ಲ. ಇ-ಮೇಲ್ ಸ್ವೀಕರಿಸುವವರೂ ಸೆಂಡ್ ಬಳಸುತ್ತಿದ್ದರೆ ಅವರು ಇ-ಮೇಲ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನು ಸೆಂಡ್ ನೀಡುವುದು.

ಈಗೀಗ ಈ ಅಪ್ಲಿಕೇಷನ್ ಐ-ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಮಾನಗಳಲ್ಲಿ ವಿಂಡೋಸ್ ಮತ್ತು ಆಂಡ್ರಾಯ್ಡ್ ತಂತ್ರಾಂಶ ಬಳಸುವ ಫೋನ್‌ಗಳಿಗೂ ಲಭ್ಯವಾಗಲಿದೆ. ತನ್ನದೇ ಕಾರಚರಣೆಯ ವ್ಯವಸ್ಥೆ ವಿಂಡೋಸ್ ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ಈ ಆಪ್‌ನ್ನು ಒದಗಿಸುವ ಮೊತ್ತ ಮೊದಲೇ ತನ್ನ ಪ್ರತಿಸ್ಪರ್ಧಿ ಆಪಲ್ ಫೋನ್‌ಗಳಿಗೆ ಈ ಆಪ್ ಒದಗಿಸಿರುವ ಮೈಕ್ರೋಸಾಫ್ಟ್ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಬರು ಬರುತ್ತಾ ಏನೆಲ್ಲ ಹೊಚ್ಚ ಹೊಸತು ಕಂಡು ಹಿಡಿಯಬಹುದೋ ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...