Home / ಕವನ / ಕವಿತೆ / ಯಾರೆಂಬರು ಮುಗಿದುವೆಂದು ಬವರಾಂ?

ಯಾರೆಂಬರು ಮುಗಿದುವೆಂದು ಬವರಾಂ?

ಹತೋ ವಾ ಪ್ತವ್ಸ್ಯಸಿ ಸ್ವರ್‍ಗಂ ಜಿ ತ್ವಾವಾ ಭೋಕ್ಷ್ಯಸೇ ಮಹೀಮ್ |
ತಸ್ಮಾದುತಿಷ್ಟ ಕೌಂತೇಯ ಯುದ್ಧಾಯ ಕೃತನಿಶ್ಚಯ ತಿ (ಗೀತಾ ೨.೩೭)

ಯಾರಂಬರು ಮುಗಿದುವೆಂದು ಬವರಂ?
ನಂಬದಿರದು ಮರುಳರ ಮಾತೆ:
ನರನೆನ್ನವರಂ ನರನನ್ನೆವರಂ
ರಣಾಂಗಣವೆ ಶಾಂತಿಯ ಮಾತೆ!
ಶಾಂತಿಯೆ ನಿನ್ನಯ ಸಾಧನಮಾಗೆ
ಸದಾ ಸಿದ್ಧವಿರು ಯುದ್ಧಕ ಸಾಗೆ.

ಯುದ್ಧವಿಲ್ಲದಭಿವೃದ್ಧಿಯದುಂಟೆ?
ಯುದ್ಧದೆ ಮನುಜತೆಯ ವಿಕಾಸಂ-
ಬೆಂಕಿಯೊಳಲ್ಲವೆ ಕಬ್ಬಿಣ ದಾಂಟೆ
ಯತ್ರ ತಂತ್ರ ಶಕ್ತಿಯ ಸಾನಂ?
ಯೋಧನಾದ ನರನಮರಸಮಾನಂ,
ಯೋಧನೆಂದೆ ಸೃಷ್ಟಿಯ ಯಜಮಾನಂ.

ಕಟ್ಟಳೆಯೊಳೆ ಹಳಸಿದ ಬಾಳುವೆಗೆ
ಯುದ್ಧದಿ ನವಯೌವನ ಸಿದ್ಧಿ;
ಪರವಶತಗೆ ನಾಚದ ತಾಳುವೆಗೆ
ಯುದ್ಧದೊಳಾ ಪಾಪದ ಶುದ್ದಿ;
ಯುದ್ಧವೆ ಮೃತಜೀವನದುತ್ಥಾನಂ,
ಯುದ್ಧವೆ ಉತ್ಕ್ರಾಂತಿಯ ಸೋಪಾನಂ.

ನರತೆಯೊಂದ ನರನಾದಡನೇಕಂ,
ಏಕಾರ್‍ಥದ ಮಂದಿಯೆ ಜನತ;
ಜನತ ಜನತೆಯೊಳಗಿರದು ಏವೇಕಂ-
ಸ್ವಾರ್ಥಕಲ್ಲವಲ್ಲವೆ ತನತೆ?
ಸ್ವಾರ್ಥತೆ ಪರ್‍ಆರ್‍ಥದಲಿ ಕೆಯ್ಮಾಡ
ಸಂಗರವಾ ಪ್ರಸಭವನೀಡಾಡೆ

ಸರ್‍ವಜೀವಿಗಳೊಳೊರ್‍ವನೆ ಮನುಜಂ
ವರಹಿತ ಗೆಯಲೆಂದೊಗೆತಂದು,
ತನ್ನ ಹಂಗನವಮನ್ನಸಿ ದನುಜಂ
ತಾನೆನೆ ಪರರಲಿ ಮಲೆವಂದು,
ಕೇಸುರಿ ಬಲೆಯ ಕೇಸರಿಗೆಂತು
ಸಮರವಾತನಂ ಕಮರಿಸಲಂತು

ಸಾಲದು ನರಜನ್ಮವ ಬರಿದೆತ್ತ-
ಜನ್ಮಮಾತ್ರವೇತರ ಕಾರ್‍ಯಂ?
ನರನಹೆಯಾ? ದುಡಿ ನರತೆಯ ಮತ್ತ-
ದ್ವಿಜನಾಗದ ಮನುಜನನಾರ್‍ಯಂ!
ಪರರಳಲಿನ ವರಿಹರಿಕಗೆ ನಂದು
ಹೊಸ ಬಾಳೆತ್ತಿದವನೆ ದ್ವಿಜನಿಂದು.

ಅನ್ಯನಲ್ಲ, ನೀನೆ ನನ್ನ ಯೋಧಂ!
ಕಾದೆನಲಾ ಪ್ರಕೃತಿಯೆ ನಿನಗೆ.
ಕಟ್ಟಾಜ್ಞೆಯದಕ ತಟ್ಟಿ ವಿರೋಧಂ
ಎಲ್ಲಿನೆಲ್ಲಿಗುರುಳಿದೆ ಕೊನೆಗೆ!
ಕತ್ತಿಗೆ ಬಾರದ ಕಬ್ಬಿಣ ಬಾಗಿ
ಸುಟ್ಟಪುದನುದಿನ ಸಟ್ಟುಗಮಾಗಿ
ಅಳಿವೆಯೊ? ಉಳಿವೆಯೊ? ಪ್ರಶ್ನೆಯನಿತ್ತೆ-
ಮೂರನೆಯದಿಲ್ಲ ನಿನಗಾಯ.
ಕಾದದಡೆ ಸಾವಿಗವುತಣವಿತ್ತೆ
ಕಾದೆ ಸದೆದೆ ಸಾವನೆ ಸಾಯ!
ಪ್ರಬಲರಬಲರಂ ಕಬಲಿಸೆ, ಹಗೆಯಾ
ಕಾದೊ ಕಾದದೆಯೊ ಬದುಕುವೆ, ಬಗೆಯಾ!

ಕದೆ ಸಾವೆನೆಂದಕಟಾ ಗಾಸಿಯೊ?
ಕಾದದವರಿಗಿಲ್ಲವ ಸಾಯೆ?
ಕತ್ತಿಯಾಗಿ ಹಾಯೆ ಸಾಯೆ ವಾಸಿಯಾ?
ನಾಲದಂತ ಕಾಲಲಿ ತೇಯೆ?
ಸಾವಿಗಂಜೆ ಸಾವಿರ ಸಲ ಸತ್ತ,
ಸಾವನಂಜದವನೂಮ್ಮೆಯನಿತ್ತ.

ಕಾದೆ ಸಾವನೆಂದಲ್ಲಿಗೆ ಸರಿಯ,
ಬಾಳ್ವೆ ಸಾವಿನೊಳೆ ನೆರವೇರೆ?
ಬಾಳ್ವೆ ಬಾಳತಕ್ಕುದೊ ನಾನರಿಯೆ,
ಸಾವು ಸಾಯತಕ್ಕುದು ನೇರೆ!
ಧರ್‍ಮಯುದ್ಧವೊಂದಲ್ಲದೆ ಬೇರ
ದಾರಿಯೆ ವೀರಸ್ವರ್‍ಗವನೇರೆ?

ಸೆರೆಗೇಕಂಜುವೆ? ನೆರೆಯಾಳಲ್ಲವ
ತನ್ನ ಮನೆಯೊಳನ್ಯರ ತೊತ್ತು?
ಸಿಕ್ಕ ಮಡೆಯ ಮುಕ್ಕುವ ಗಿಳಿ ಬಲ್ಲವೆ
ಗೂಡೊ ಬೀಡೊ ಎನುವಾ ಗೊತ್ತು?
ಬಸುರಲಿ ಸೋಸಿಲ್ಲವೆ ನೀ ಸೆರೆಯಾ?
ಹೊಸ ಹುಟ್ಟಿನ ಬಸಿರಾ ಸೆರೆಯರಿಯಾ!

ತನ್ನ ಕಡುಕನ್ನೆಲ್ಲ ಮುನ್ನ ಕಾದು,
ತಾಯಿಳೆಯ ಬಿಡುಗಡೆಗೆ ಕಾದು,
ನರತೆಯ ಸರಿಸೋದರತೆಗೆ ಕಾದು,
ಮನುಜನ ವಿಮೋಚನೆಗೆ ಕಾದು.
ಪೂಸತೆ ಭವಿಷ್ಯವ ನೊಸಯಿಸೆ ಕಾದು,
ಬದುಕಿದೊಂದು ಕೂಳುಗುಳವೆನೆ ಕಾದು.

ನೀನಜರಾಮರನಹೆಯಾ? ಕಾದು-
ನರರಿಗೆ ವೆರೆತಮರತಯೊಳವೆ?
ಕಂಚೊ ಕಲ್ಲೊ ಕತೆ ಕವಿತೆಯೊ ಕಾದು
ನಿನ್ನನುಳಿಸೆ ನಿನಗಿನ್ನಳಿವೆ?
ಗೆದ್ದರೆ ಹೊಸ ಹೊತ್ತೆದ್ದುದು ಮುಂದೆ.
ಬಿದ್ದರೆ ನೇಸರಿನುದ್ದಕೆ ನಿಂದೆ!

ನಿನಗೆ ಕಾದೆನುವೆನಿದೊ ಧರ್‍ಮರಣಂ,
ಪರಾಕ್ರಮಣವದು ರಣವಲ್ಲ,
ವರರ ಬಿಡುವಿನವಹರಣವೆ ಮರಣಂ-
ಬಿಡುವ ತುಡುಕಿ ಕೆಡದವರಿಲ್ಲ.
ಬಿಡುಗಡೆ ಎನೆ ಜನಜನತೆಯ ಸೊತ್ತು,
ಕಳೆವನು ಸೆಳೆವನು ನಿಯತಿಯ ತುತ್ತು.

ಸಗ್ಗದಿಂದ ಸೋನೆಯಂತ ಸುರಿಯದು,
ಬಿಡುಗಡೆ ಗಡ ಬಾರದು ಬರಿದೆ!
ಕಾಯ್ವೊಡೆಯಗೆ ಬರಿ ಬಾಯಿಗೆ ದೊರೆಯದು-
ಕಾದದ ಕೆಯ್ಗೆಂದಿಗುಮರಿದೆ!
ದುಡಿಯದೆ ಪಡೆದಾ ಬಿಡುಗಡೆಯಲ್ಲ-
ರಣಹೇಡಿಗೆ ದೇವರ ನೆರವಿಲ್ಲ.

ಆಯುಧವಿಲ್ಲೆಂದೆದೆಗೆಡಬೇಡ-
ಯೋಧನೆತ್ತಲತ್ತಲೆ ಕತ್ತಿ!
ಸಾಧಕನೆ ತನ್ನ ಸಾಧನ, ನೋಡ!
ಹೇಡಿ ಏವನಾಯುದ್ಧದತ್ತಿ?
ಮನದೊರೆಯಲಿ ನಿನಗನುತಹ ಸಿರಿಯ
ಹೊತ್ತು ಕಾವ ಬಗೆಗತ್ತಿಯ ಹಿರಿಯ!

ನೆರವಿಗೆ ಯಾರೆಂದೇತಕ ಖನ್ನ
ಕಾದಿಸುವೊಡೆಯನೆ ಜತೆಗಿಲ್ಲಾ?
ಎಂದಿನಿಂದ ಕಾದವನಿದೊ! ನಿನ್ನ
ನುಳಿದು ತಾನೆ ಕಾದುವನಲ್ಲ.
ಕಂಡಿಸೆದೆಯನಿಡು ಗಂಡಡಿ ಮುಂದೆ
ನೂಕು ರವೀಂದು ಪತಾಕೆಯ ಹಿಂದೆ

ಕೇಳದೆ ಜಗದಿ ಗೋಳಿನ ಕಾಳ?
ಕಳಕಳಿಸದೆ ನಿನ್ನೆದೆಯಾರ?
ನಾಳೆ ಎಂಬ ಜಡಗೆಂದಿಗು ನಾಳ.
ಬಂದೆನೆಂಬ ಕುದುರೆಗೆ ಹಾರ!
ನೆಟ್ಟನೆ ರಣರಂಗದಿ ಮುಂಬರಿಯೊ,
ಜಯ ಶಾಂತಿ ಎಂದಶಾಂತಿಯನಿರಿಯಾ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...