Home / ಕವನ / ಕವಿತೆ / ಇಸ್ಲಾಂ ಎಂದರೇನು?

ಇಸ್ಲಾಂ ಎಂದರೇನು?

ಇಸ್ಲಾಂ ಎಂದರೇನು?
ಆತಂಕವಾದದೊಂದಿಗೆ
ಜೋಡಿಸದಿರಿ ನನ್ನ ಇಸ್ಲಾಂನ್ನು
ಅದರ ಬೇರುಗಳು ಪ್ರೀತಿಯಲ್ಲಿವೆ
ಅದರ ಸೆರಗಿನಲ್ಲಿ
ಗುಲಾಬಿಗಳು ಅರಳಿವೆ
ನೆರೆಯವನನ್ನು ಜಾತಿಯಲಿ
ಹುಡುಕುವವನು ಇವನಾದರೆ
ನೆರೆಯವನು ಹಸಿದಿರುವಾಗ
ಉಣ್ಣುವುದು “ಹರಾಮ್”
ಎನ್ನುತ್ತದೆ ನನ್ನ ಇಸ್ಲಾಂ
ಶತ್ರುವನ್ನು ಪ್ರೀತಿಯಿಂದ
ತಬ್ಬಿಕೊಂಡು ಮನದ
ಕಲ್ಮಶ ತೊಳೆಯುತ್ತದೆ
ಪ್ರೀತಿಸುವುದನ್ನು ಕಲಿಸುತ್ತದೆ ಇಸ್ಲಾಂ
ಗುಲಾಮರಿಗೆ ಒಂಟೆಯ
ಮೇಲೆ ಕೂಡಿಸಿ ಸ್ವತಃ
ನಡೆದು ಬರುತ್ತಾರೆ ಪೈಗಂಬರ್‌ರು
ನನ್ನ ಇಸ್ಲಾಂ ಹೇಳಿದ್ದು ಇದನ್ನೇ
ನೆರೆಯವರ ದುಃಖದಲ್ಲಿ
ಭಾಗಿಯಾಗಿರುತ್ತದೆ ನನ್ನ ಧರ್‍ಮ.
ಪಕ್ಕದ ಮನೆಯವರ
ಸಂಕ್ರಮಣ ಹಬ್ಬಕ್ಕೆ ಎಳ್ಳು ಬೆಲ್ಲ ತಿಂದು
ತನ್ನ ರಂಜಾನಿನ ಸೇವಿಗೆ ಪಾಯಿಸ
ನೆರೆ ಮನೆಗೆ ರವಾನಿಸುತ್ತದೆ
ನನ್ನ ಇಸ್ಲಾಂ.
ದಿಲ್ಲಿಯ ಮನಸ್ಸು ನೊಂದುಕೊಂಡರೆ
ಕರಾಚಿಯ ಕರಳು ಕುಟುಕುತ್ತದೆ.
ಸಹಬಾಳ್ವೆಯ ಪಾಠ
ಹೇಳಿಕೊಟ್ಟಿದೆ ನನಗೆ ಇಸ್ಲಾಂ.
ಭಯೋತ್ಪಾದನೆಯೊಂದಿಗೆ ದಯವಿಟ್ಟು
ಜೋಡಿಸದಿರಿ ನನ್ನ ಇಸ್ಲಾಂನ್ನು.
ಅದರ ಬೇರುಗಳು ಪ್ರೀತಿಯಲ್ಲಿದೆ
ಅದರ ಸೆರಗಿನಲಿ
ಗುಲಾಬಿಗಳು ಅರಳಿವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...