Home / ಕವನ / ಕವಿತೆ / ಇಸ್ಲಾಂ ಎಂದರೇನು?

ಇಸ್ಲಾಂ ಎಂದರೇನು?

ಇಸ್ಲಾಂ ಎಂದರೇನು?
ಆತಂಕವಾದದೊಂದಿಗೆ
ಜೋಡಿಸದಿರಿ ನನ್ನ ಇಸ್ಲಾಂನ್ನು
ಅದರ ಬೇರುಗಳು ಪ್ರೀತಿಯಲ್ಲಿವೆ
ಅದರ ಸೆರಗಿನಲ್ಲಿ
ಗುಲಾಬಿಗಳು ಅರಳಿವೆ
ನೆರೆಯವನನ್ನು ಜಾತಿಯಲಿ
ಹುಡುಕುವವನು ಇವನಾದರೆ
ನೆರೆಯವನು ಹಸಿದಿರುವಾಗ
ಉಣ್ಣುವುದು “ಹರಾಮ್”
ಎನ್ನುತ್ತದೆ ನನ್ನ ಇಸ್ಲಾಂ
ಶತ್ರುವನ್ನು ಪ್ರೀತಿಯಿಂದ
ತಬ್ಬಿಕೊಂಡು ಮನದ
ಕಲ್ಮಶ ತೊಳೆಯುತ್ತದೆ
ಪ್ರೀತಿಸುವುದನ್ನು ಕಲಿಸುತ್ತದೆ ಇಸ್ಲಾಂ
ಗುಲಾಮರಿಗೆ ಒಂಟೆಯ
ಮೇಲೆ ಕೂಡಿಸಿ ಸ್ವತಃ
ನಡೆದು ಬರುತ್ತಾರೆ ಪೈಗಂಬರ್‌ರು
ನನ್ನ ಇಸ್ಲಾಂ ಹೇಳಿದ್ದು ಇದನ್ನೇ
ನೆರೆಯವರ ದುಃಖದಲ್ಲಿ
ಭಾಗಿಯಾಗಿರುತ್ತದೆ ನನ್ನ ಧರ್‍ಮ.
ಪಕ್ಕದ ಮನೆಯವರ
ಸಂಕ್ರಮಣ ಹಬ್ಬಕ್ಕೆ ಎಳ್ಳು ಬೆಲ್ಲ ತಿಂದು
ತನ್ನ ರಂಜಾನಿನ ಸೇವಿಗೆ ಪಾಯಿಸ
ನೆರೆ ಮನೆಗೆ ರವಾನಿಸುತ್ತದೆ
ನನ್ನ ಇಸ್ಲಾಂ.
ದಿಲ್ಲಿಯ ಮನಸ್ಸು ನೊಂದುಕೊಂಡರೆ
ಕರಾಚಿಯ ಕರಳು ಕುಟುಕುತ್ತದೆ.
ಸಹಬಾಳ್ವೆಯ ಪಾಠ
ಹೇಳಿಕೊಟ್ಟಿದೆ ನನಗೆ ಇಸ್ಲಾಂ.
ಭಯೋತ್ಪಾದನೆಯೊಂದಿಗೆ ದಯವಿಟ್ಟು
ಜೋಡಿಸದಿರಿ ನನ್ನ ಇಸ್ಲಾಂನ್ನು.
ಅದರ ಬೇರುಗಳು ಪ್ರೀತಿಯಲ್ಲಿದೆ
ಅದರ ಸೆರಗಿನಲಿ
ಗುಲಾಬಿಗಳು ಅರಳಿವೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...