Home / ಕಥೆ / ಕಿರು ಕಥೆ / ಮಹಾನ್ ಕಲಾಕಾರ

ಮಹಾನ್ ಕಲಾಕಾರ

ಒಬ್ಬ ದೊಡ್ಡ ಕಲಾವಿದನ ಹತ್ತಿರ ಒಬ್ಬ ವ್ಯಾಪಾರಿ ಬಂದು ಒಂದು ಸುಂದರ ಚಿತ್ರ ಬರೆದು ಕೊಡಲು ಹೇಳಿದ. ಅವನು ಒಂದು ನಿಬಂಧನೆ ಹಾಕಿದ. “ಬರಿಯುವ ಚಿತ್ರದಲ್ಲಿ, ಹಕ್ಕಿ ಹಾಡಬೇಕು, ಹಾರ ಬೇಕು, ಗಿಡ ಚಿಗುರ ಬೇಕು, ಹೂವು ಅರಳಬೇಕು, ಹಣ್ಣು ಬಿಡಬೇಕು, ಕೋಗಿಲೆ ಹಾಡಬೇಕು, ಕೊಳದಲ್ಲಿ ಹಂಸ ತೇಲಬೇಕು. ಆಗಸದಲ್ಲಿ ಬೆಳ್ಳಿಯ ಮೋಡ ತೇಲಬೇಕು. ಇಂಥ ಚಿತ್ರ ಬರೆದು ತೋರಿಸಿದರೆ ನಾನು ನೂರು ಕೋಟಿ ರೂಪಾಯಿ ಕೊಡುವೆ” ಎಂದ.

ಚಿತ್ರಕಾರ ಹೇಳಿದ “ಇದು ನನ್ನಿಂದ ಸಾಧ್ಯವಿಲ್ಲದಿರಬಹುದು. ಆದರೆ ಓರ್ವ ಅತ್ಯಂತ ಮಹಾನ್ ಕಲಾವಿದ, ಅವನು ಕುಂಚವೂ ಇಲ್ಲದೆ ಕೌಶಲ್ಯದಿಂದ ಆಗಲೆ ಬಿಡಿಸಿದ ಚಿತ್ರ ನಾ ತೋರಿಸುವೆ. ಆದರೆ ಅವನ ನಿಬಂಧನೆ ನಿಮಗೆ ಏನು ಗೊತ್ತಾ?” ಎಂದ.

“ಆ ಚಿತ್ರದಲ್ಲಿ ಕಾಣುವ ಭೂಮಿ ಎಂದೂ ಹಸುರಾಗಿರಬೇಕು. ಆಕಾಶವನ್ನು ಕಲುಷಿತ ಗೊಳಿಸಬಾರದು. ಹಕ್ಕಿ ಕೊರಲ ನಿರ್ಲಕ್ಷಿಸ ಬಾರದು. ಹೂವು ಚಿಗುರು ಬಾಡದಿರಬೇಕು. ಹಾಗೇ ಇಡದಿದ್ದರೆ ನಿನ್ನ ಸರ್ವ ನಾಶಕ್ಕೆ ತಯಾರಿರಬೇಕು.” ಎಂದನು. ಮೊದಲು ಅಂತಹ ಚಿತ್ರ ಬರೆಯಲಿ ಆ ಕಲಾವಿದ. ಆಮೇಲೆ ನೋಡೋಣ ಎಂದ ವ್ಯಾಪಾರಿ. ಚಿತ್ರ ಈಗಲೆ ತಯಾರಿದೆ. ಕಲಾವಿದನನ್ನು ಈಗ ಕಾಣದಾದರು ಅವನ ಕಲಾಕೃತಿ ನೋಡಬಹುದು ಎಂದ ಕಲಾವಿದ.

“ಖಂಡಿತ ನೋಡಲು ಇಚ್ಛಿಸುತ್ತೇನೆ” ಎಂದ ವ್ಯಾಪಾರಿ. ಕಲಾವಿದ ಅವನ ಮನೆಯ ಹಿಂದಿನ ತೋಟಕ್ಕೆ ಕರೆದುಕೊಂಡು ಹೋದ. ಅದು ಅತಿ ಸುಂದರ ತೋಟ. ವ್ಯಾಪಾರಿ ಬಯಸಿದ ಗಿಡ ವೃಕ್ಷ, ಚಿಗುರು, ಹೂವು, ಕೊಳ ಹಂಸ, ಕೋಗಿಲೆ ಗಾನ, ಹಕ್ಕಿ ಚಿಲಿಪಿಲಿ ಎಲ್ಲಾ ಇದ್ದವು. ಇದು ಮಹಾನ್ ಕಲಾಕಾರನ ದೈವ ಸೃಷ್ಟಿ. ಇದಕ್ಕೆ ನೀನು ನೂರು ಕೋಟಿ ಬೆಲೆ ಕಟ್ಟುತ್ತೀಯಾ?” ಎಂದ.

“ಮೊದಲು ಪ್ರಕೃತಿ ಪೂಜಿಸು, ಕಾಪಾಡು, ಆಮೇಲೆ ನಿನ್ನ ವ್ಯಾಪಾರ,” ಅಂದಾಗ ವ್ಯಾಪಾರಿಯ ಕಣ್ಣು ತೆರೆಯಿತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...