ಮಹಾನ್ ಕಲಾಕಾರ

ಒಬ್ಬ ದೊಡ್ಡ ಕಲಾವಿದನ ಹತ್ತಿರ ಒಬ್ಬ ವ್ಯಾಪಾರಿ ಬಂದು ಒಂದು ಸುಂದರ ಚಿತ್ರ ಬರೆದು ಕೊಡಲು ಹೇಳಿದ. ಅವನು ಒಂದು ನಿಬಂಧನೆ ಹಾಕಿದ. “ಬರಿಯುವ ಚಿತ್ರದಲ್ಲಿ, ಹಕ್ಕಿ ಹಾಡಬೇಕು, ಹಾರ ಬೇಕು, ಗಿಡ ಚಿಗುರ ಬೇಕು, ಹೂವು ಅರಳಬೇಕು, ಹಣ್ಣು ಬಿಡಬೇಕು, ಕೋಗಿಲೆ ಹಾಡಬೇಕು, ಕೊಳದಲ್ಲಿ ಹಂಸ ತೇಲಬೇಕು. ಆಗಸದಲ್ಲಿ ಬೆಳ್ಳಿಯ ಮೋಡ ತೇಲಬೇಕು. ಇಂಥ ಚಿತ್ರ ಬರೆದು ತೋರಿಸಿದರೆ ನಾನು ನೂರು ಕೋಟಿ ರೂಪಾಯಿ ಕೊಡುವೆ” ಎಂದ.

ಚಿತ್ರಕಾರ ಹೇಳಿದ “ಇದು ನನ್ನಿಂದ ಸಾಧ್ಯವಿಲ್ಲದಿರಬಹುದು. ಆದರೆ ಓರ್ವ ಅತ್ಯಂತ ಮಹಾನ್ ಕಲಾವಿದ, ಅವನು ಕುಂಚವೂ ಇಲ್ಲದೆ ಕೌಶಲ್ಯದಿಂದ ಆಗಲೆ ಬಿಡಿಸಿದ ಚಿತ್ರ ನಾ ತೋರಿಸುವೆ. ಆದರೆ ಅವನ ನಿಬಂಧನೆ ನಿಮಗೆ ಏನು ಗೊತ್ತಾ?” ಎಂದ.

“ಆ ಚಿತ್ರದಲ್ಲಿ ಕಾಣುವ ಭೂಮಿ ಎಂದೂ ಹಸುರಾಗಿರಬೇಕು. ಆಕಾಶವನ್ನು ಕಲುಷಿತ ಗೊಳಿಸಬಾರದು. ಹಕ್ಕಿ ಕೊರಲ ನಿರ್ಲಕ್ಷಿಸ ಬಾರದು. ಹೂವು ಚಿಗುರು ಬಾಡದಿರಬೇಕು. ಹಾಗೇ ಇಡದಿದ್ದರೆ ನಿನ್ನ ಸರ್ವ ನಾಶಕ್ಕೆ ತಯಾರಿರಬೇಕು.” ಎಂದನು. ಮೊದಲು ಅಂತಹ ಚಿತ್ರ ಬರೆಯಲಿ ಆ ಕಲಾವಿದ. ಆಮೇಲೆ ನೋಡೋಣ ಎಂದ ವ್ಯಾಪಾರಿ. ಚಿತ್ರ ಈಗಲೆ ತಯಾರಿದೆ. ಕಲಾವಿದನನ್ನು ಈಗ ಕಾಣದಾದರು ಅವನ ಕಲಾಕೃತಿ ನೋಡಬಹುದು ಎಂದ ಕಲಾವಿದ.

“ಖಂಡಿತ ನೋಡಲು ಇಚ್ಛಿಸುತ್ತೇನೆ” ಎಂದ ವ್ಯಾಪಾರಿ. ಕಲಾವಿದ ಅವನ ಮನೆಯ ಹಿಂದಿನ ತೋಟಕ್ಕೆ ಕರೆದುಕೊಂಡು ಹೋದ. ಅದು ಅತಿ ಸುಂದರ ತೋಟ. ವ್ಯಾಪಾರಿ ಬಯಸಿದ ಗಿಡ ವೃಕ್ಷ, ಚಿಗುರು, ಹೂವು, ಕೊಳ ಹಂಸ, ಕೋಗಿಲೆ ಗಾನ, ಹಕ್ಕಿ ಚಿಲಿಪಿಲಿ ಎಲ್ಲಾ ಇದ್ದವು. ಇದು ಮಹಾನ್ ಕಲಾಕಾರನ ದೈವ ಸೃಷ್ಟಿ. ಇದಕ್ಕೆ ನೀನು ನೂರು ಕೋಟಿ ಬೆಲೆ ಕಟ್ಟುತ್ತೀಯಾ?” ಎಂದ.

“ಮೊದಲು ಪ್ರಕೃತಿ ಪೂಜಿಸು, ಕಾಪಾಡು, ಆಮೇಲೆ ನಿನ್ನ ವ್ಯಾಪಾರ,” ಅಂದಾಗ ವ್ಯಾಪಾರಿಯ ಕಣ್ಣು ತೆರೆಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರವಪ್ಪ ಹಲಸಿರಲು ಊರಿಗೆಂತು ಬರವಕ್ಕು?
Next post ಅಮರ ಜೀವನ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…