ಸಿರಿಗನ್ನಡ ವೈಭವ

ಕಾಣದ ಚೇತನ ತುಂಬಿದೆಯೊ
ಕನ್ನಡ ಮಣ್ಣಲ್ಲಿ
ಮೀರಿದ ಸತ್ವವು ಅಡಗಿದೆಯೊ
ಕನ್ನಡ ನುಡಿಯಲ್ಲಿ
ಕಬ್ಬಿಗರುದಿಸಿ ಹಾಡಿದರೊ
ಕೊಳಲಿನ ಕಂಠದಲಿ
ಗಂಡುಗಲಿಗಳು ಮೆರೆದಾರೊ
ಕತ್ತಿಯ ಹಿಡಿಯುತಲಿ
ಕನ್ನಡ ಕೀರ್ತಿ ಹರಡಿದರೊ
ಎಂಟೂ ದಿಕ್ಕಿನಲಿ
ಕನ್ನಡ ಬಾವುಟ ಹಿಡಿದಾರೊ
ಮುಗಿಲಿನ ಮಟ್ಟದಲಿ
ಮುತ್ತಿನ ಮಣಿಗಳು ಉದುರುತಿವೆ
ಸ್ವಾತಿಯ ಮಳೆಯಾಗಿ
ಎಲ್ಲೂ ಹಸಿರು ತೆನೆಯುತಿದೆ
ಸ್ಫೂರ್ತಿಯ ಸೆಲೆಯಾಗಿ
ಕವಿ ಕೋಗಿಲೆಗಳು ಹಾಡುತಿವೆ
ಚೆಲುವಿಗೆ ಸೆರೆಯಾಗಿ
ಈ ಅಂದವ ನಾ ಸವಿಯುತಿಹೆ
ಪುಣ್ಯದ ಫಲವಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಡಿಲು
Next post ೩,೫೦೦,೦೦೦

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…